ಪ್ರತಿನಿಧಿ ವರದಿ ಬೆಟ್ಟದಪುರ
ಚಪ್ಪರದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇರುವ ಚುನಾವಣೆಯ ಮತಗಟ್ಟೆಗೆ ಗುರುವಾರ ಸಹಾಯಕ ಮತದಾರರ ನೋಂದಣಾಧಿಕಾರಿಯಾದ ತಹಸೀಲ್ದಾರ್ ಸುರೇಂದ್ರ ಮೂರ್ತಿ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಮತದಾನ ನಡೆಯುವಂತಹ ಮತಗಟ್ಟೆಗಳಿಗೆ ಭೇಟಿ ನೀಡಿ ಮೂಲ ಸೌಕರ್ಯ ವ್ಯವಸ್ಥೆ ಇದೆಯೇ ಎಂಬುದರ ಬಗ್ಗೆ ಮಾಹಿತಿ ಪಡೆದರು. ಯಾವುದೇ ರೀತಿ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಸ್ಥಳೀಯ ಬಿಎಲ್ಒ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಗ್ರಾಮ ಆಡಳಿತಾಧಿಕಾರಿ ಪ್ರದೀಪ್, ದೀಪಕ್, ಬಿಎಲ್ಒ ಮಹೇಶ್, ರತ್ನ, ಮುಖ್ಯಶಿಕ್ಷಕ ಶಿವಾನಂದ್, ಶಿಕ್ಷಕರಾದ ಗಾಲಿಸಾಬ್ ಬಾಗಲಕೋಟೆ, ಸಿಬ್ಬಂದಿ ತಿಮ್ಮಯ್ಯ ಇದ್ದರು.
28ಬಿಟಿಪಿ03: ಚಪ್ಪರದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇರುವ ಚುನಾವಣೆಯ ಮತಗಟ್ಟೆಗೆ ಗುರುವಾರ ಪಿರಿಯಾಪಟ್ಟಣ ತಹಸೀಲ್ದಾರ್ ಸುರೇಂದ್ರ ಮೂರ್ತಿ ಭೇಟಿ ಪರಿಶೀಲನೆ ಮಾಡಿದರು. ಪ್ರದೀಪ್, ದೀಪಕ್, ಮಹೇಶ್, ರತ್ನ, ತಿಮ್ಮಯ್ಯ ಇದ್ದರು.