ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ಸಂದರ್ಶನ ನೀಡಿದ್ದಾರೆ. ನೀವೆಲ್ಲ ಗೂಗಲ್ಗೆ ಹೋಗಿ ಅ ಸಂದರ್ಶನ ನೋಡಿ. ಚುನಾವಣೆ ಬಾಂಡ್ ಬಗ್ಗೆ ಮಾತನಾಡುವಾಗ ಮೋದಿ ಕೈ ನಡುಗುತ್ತಿತ್ತು ಎಂದು ಮಂಡ್ಯದಲ್ಲಿ ಹೇಳಿದ್ದಾರೆ. ಚುನಾವಣಾ ಬಾಂಡ್ ಪ್ರಪಂಚದ ಅತಿದೊಡ್ಡ ಭ್ರಷ್ಟಾಚಾರ. ಸುಪ್ರೀಂಕೋರ್ಟ್ ಚುನಾವಣಾ ಬಾಂಡ್ ರೂಪದಲ್ಲಿ ಬಂದಿರುವ ಹಣದ ಮಾಹಿತಿ ಬಹಿರಂಗ ಪಡಿಸಲು ಹೇಳಿದೆ. ಭ್ರಷ್ಟಾಚಾರ ನಿರ್ಮೂಲನೆ ನೆಪದಲ್ಲಿ ಸಿಬಿಐ, ಐಟಿ, ಇಡಿ ದಾಳಿ ಮಾಡಿದ್ದಾರೆ. ಕೆಲವರ ಮೇಲೆ ಇದೇ ನೆಪವೊಡ್ಡು ಹಣ ವಸೂಲಿ ಮಾಡಿದ್ದಾರೆ. ನಮ್ಮಲ್ಲಿ ರೌಡಿಗಳು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು. ಈಗ ಸರ್ಕಾರವೇ ರೌಡಿಗಳ ರೀತಿ ಹೆದರಿಸಿ ಹಣ ವಸೂಲಿ ಮಾಡಿದೆ. ಆದ್ದರಿಂದಲೇ ಮೋದಿ ಕೈ ನಡುಗುತ್ತಿದೆ. ಇದೆಲ್ಲವನ್ನು ಮಾಧ್ಯಮಗಳೂ ಹೇಳುತ್ತಿಲ್ಲ. ಹಿಂದೆ ಜೆಡಿಎಸ್ನವರು ಬಿಜೆಪಿಯವರ ಬಿ ಟೀಮ್ ಆಗಿದ್ದರು. ಈಗ ಬಿಜೆಪಿ- ಜೆಡಿಎಸ್ ಪಾರ್ಟ್ನರ್ ಆಗಿ ಬಂದಿದ್ದಾರೆ. ಈಗ ಚುನಾವಣೆ ಬಂದಿದೆ. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ. ರಾಜ್ಯದ ಎಲ್ಲ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಎಂದು ಮನವಿ ಮಾಡುತ್ತೇನೆ ಎಂದರು.