ಹುಣಸೂರು, ಜನವರಿ 12, 2026 : ತಾಲೂಕಿನ ಹೊಸರಾಮನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಈರಣ್ಣೇಶ್ವರ ಸ್ವಾಮಿಯ ಹಬ್ಬದ ಪ್ರಯುಕ್ತ ಹುಣಸೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಜಿ.ಡಿ. ಹರೀಶ್ ಗೌಡರು ಗ್ರಾಮಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು.
ಶಾಸಕರು ಮೈಮುಲ್ ನಿರ್ದೇಶಕರಾದ ಶ್ರೀ ಕೆ.ಎಸ್. ಕುಮಾರ್ ಅವರೊಂದಿಗೆ ಹೊಸರಾಮನಹಳ್ಳಿಯ ಈರಣ್ಣ ಕಟ್ಟೆಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು. ಇದೇ ಸಂದರ್ಭದಲ್ಲಿ ಗ್ರಾಮದ ದೇವಸ್ಥಾನದ ಅಭಿವೃದ್ಧಿ ಹಾಗೂ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮಸ್ಥರೊಂದಿಗೆ ಶಾಸಕರು ಕೆಲಕಾಲ ಸಮಾಲೋಚನೆ ನಡೆಸಿದರು.
ಹಬ್ಬದ ಸಡಗರದ ನಡುವೆಯೇ ಗ್ರಾಮದ ಪ್ರಗತಿಯತ್ತ ಗಮನಹರಿಸಿದ ಶಾಸಕರು, ಗ್ರಾಮದಲ್ಲಿ ಬಾಕಿ ಇರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗ್ರಾಮಸ್ಥರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ಅಗತ್ಯ ಸೌಲಭ್ಯಗಳನ್ನು ಒದಗಿಸುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು.
ಈ ಸಂದರ್ಭದಲ್ಲಿ ಜೆ.ಡಿ(ಎಸ್) ಮುಖಂಡ ಎಸ್. ಲೋಕೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಆರ್.ಬಿ, ಮಾಜಿ ಅಧ್ಯಕ್ಷರುಗಳಾದ ಸೋಮಶೇಖರ್, ಶಿವಕುಮಾರ್, ಯೋಗಾವತಿ ಜಯರಾಮ್ ಹಾಗೂ ಟಿಎಪಿಸಿಎಂಎಸ್ ನಿರ್ದೇಶಕ ಸೋಮಶೇಖರ್ ಉಪಸ್ಥಿತರಿದ್ದರು.
ಅಲ್ಲದೆ ಜೆ.ಡಿ.(ಎಸ್) ಮುಖಂಡರಾದ ನಾರಾಯಣ, ಮಂಜು, ಸಿದ್ದರಾಜು, ಸಿಲ್ಕ್ ಲೋಕೇಶ್, ಗ್ರಾಮದ ಯಜಮಾನರುಗಳು, ನಿವೃತ್ತ ನೌಕರರು, ಪಿಡಿಓ ಪರಶುರಾಮ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮದ ಯುವ ಮಿತ್ರರು ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು.
