ಬೆಂಗಳೂರು, ನವೆಂಬರ್ 29, 2025 : ಡಿಸಿಎಂ ಡಿಕೆಶಿ ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಕಾವೇರಿ ನಿವಾಸದಿಂದ ಬೆಂಗಳೂರಿನ HAL ಸಮೀಪ ಇರುವ ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದು, ರೊಟೀನ್ ಚೆಕಪ್ ಗಾಗಿ ಮಣಿಪಾಲ್ ಆಸ್ಪತ್ರೆಗೆ ಹೋಗಿದ್ದಾರೆ.
ಕನಿಷ್ಠ ಮೂರು ತಿಂಗಳಿಗೊಮ್ಮೆ ಸಿಎಂ ಸಿದ್ದರಾಮಯ್ಯ ರೋಟೀನ್ ಚೆಕ್ ಅಪ್ ಮಾಡಿಸಿಕೊಳ್ತಾರೆ. ಕಳೆದ ಅನೇಕ ದಿನಗಳಿಂದ ಆರೋಗ್ಯ ತಪಾಸಣೆ ನಡೆಸಿರಲಿಲ್ಲ. ಹೀಗಾಗಿಯೇ ರಾಜಕೀಯ ಜಂಜಾಟಗಳಿಂದ ದೂರ ಸರಿದು ಆಸ್ಪತ್ರೆಗೆ ತೆರಳಿದ್ದಾರೆ.
ಇನ್ನೂ ಮಣಿಪಾಲ್ ಆಸ್ಪತ್ರೆಗೆ ತೆರಳುವ ಮುನ್ನ ಡಿಸಿಎಂ ಡಿಕೆಶಿ ಜತೆ ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ನಡೆಸಿದ್ದರು. ಸಿಎಂ ಕುರ್ಚಿ ಗೊಂದಲದ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದರು. ಇವತ್ತು ಇಡೀ ದಿನ ಸಿಎಂ ಸಿದ್ದರಾಮಯ್ಯ ಯಾವ ಕಾರ್ಯಕ್ರಮದಲ್ಲೂ ಭಾಗಿಯಾಗಲ್ಲ. ಆಸ್ಪತ್ರೆ ಬಳಿಕ ಸಂಪೂರ್ಣ ವಿಶ್ರಾಂತಿಗೆ ಪಡೆಯಲಿದ್ದಾರೆ.
