ಮೈಸೂರು : ಬಿಜೆಪಿ ಲೋಕಸಭಾ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮೈಸೂರು-ಕೊಡಗು ಕ್ಷೇತ್ರ ಸಂಸದ ಪ್ರತಾಪ್ ಸಿಂಹಗೆ ಕೊಕ್ ನೀಡಿ, ನೂತನ ಅಭ್ಯರ್ಥಿಯಾಗಿ ಯದುವೀರ್ಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ಚುನಾವಣಾ ಪ್ರಚಾರಕ್ಕೆ ಧುಮುಕಿರುವ ಬಿಜೆಪಿ ಅಭ್ಯರ್ಥಿ ಯದುವೀರ್, ಮೊದಲ ದಿನವೇ ಭರ್ಜರಿ ಪ್ರಚಾರ ಮಾಡಿದರು. ಜೊತೆಗೆ ಜನಸಾಮಾನ್ಯರಂತೆ ಹೋಟೆಲ್ ಹೊರಗೆ ಫುಟ್ ಪಾತ್ನಲ್ಲಿ ಕುಳಿತು ಚಹಾ ಕುಡಿಯುತ್ತಾ ಕಾರ್ಯಕರ್ತರ ಜೊತೆಗೆ ಚರ್ಚೆ ನಡೆಸಿದರು.