ಕರ್ನಾಟಕದಲ್ಲಿ 1 ಕೋಟಿ 14 ಲಕ್ಷ ದನಕರುಗಳಿವೆ ಇವೆ. ಜಾನುವಾರಗಳನ್ನು ರಕ್ಷಣೆ ಮಾಡುವುದು ಪಶು ಇಲಾಖೆ ಕರ್ತವ್ಯ. ನಾನು ಕೂಡ 1985 ರಲ್ಲಿ ಪಶುಸಂಗೋಪನಾ ಇಲಾಖೆ ಸಚಿವನಾಗಿದ್ದೆ. ಎರಡೂವರೆ ವರ್ಷ ಈ ಇಲಾಖೆ ಜವಾಬ್ದಾರಿ ಇತ್ತು. ಪಶುಸಂಗೋಪನೆ ಇಲಾಖೆಯಲ್ಲಿ ಒಳ್ಳೆ ಕೆಲಸ ಮಾಡಿದ್ದ ಕಾರಣ ನಾನು ಈ ಮಟ್ಟಕ್ಕೆ ಬೆಳೆದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
14 ಚುನಾವಣೆ ಎದುರಿಸಿದ್ದೇನೆ ಅದರಲ್ಲಿ ಐದು ಚುನಾವಣೆಯಲ್ಲಿ ಸೋತು, 9 ಚುನಾವಣೆಯಲ್ಲಿ ಗೆದ್ದಿದ್ದೇನೆ. ನನಗೆ ಸೋಲಿನ ಅನುಭವವೂ ಇದೆ, ಗೆಲುವಿನ ಅನುಭವವೂ ಇದೆ. ವರುಣಾ, ಚಾಮುಂಡೇಶ್ವರಿ ಹಾಗೂ ಒಂದು ಬಾರಿ ಬಾದಾಮಿ ಕ್ಷೇತ್ರದ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ಜನರು ನಮ್ಮಿಂದ ಬಹಳ ನಿರೀಕ್ಷೆ ಇಟ್ಟಿದ್ದಾರೆ. ನಿರೀಕ್ಷೆಗೆ ತಕ್ಕಂತೆ ಸರ್ಕಾರ ನಡೆಸಬೇಕಿದೆ. ಜನರೇ ನಮ್ಮ ಮಾಲೀಕರು. ರಾಜಕಾರಣಿಗಳು ಮತ್ತು ಅಧಿಕಾರಿಗಳು ಜನರ ಸೇವಕರು ಎಂದರು.