ಚಾಮರಾಜನಗರ : ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಸಂಕಲ್ಪದೊಂದಿಗೆ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ 18 ಕಿಮೀ ಪಾದಯಾತ್ರೆ ಮಾಡಿದ್ದ ತುಮಕೂರು ಜಿಲ್ಲೆಯ ತಿಪಟೂರಿನ 102 ವರ್ಷದ ಪಾರ್ವತಮ್ಮ ಅವರಿಗೆ ಸಾಲೂರು ಶ್ರೀಗಳು ಸನ್ಮಾನಿಸಿದರು. ಮಳೆ ಬೆಳೆ ಆಗಲಿ, ರೈತರಿಗೆ ಒಳ್ಳೆದಾಗಲಿ, ಕಾಡು ಪ್ರಾಣಿಗಳಿಗೆ ನೀರು ಸಿಗಲಿ ಮತ್ತು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಪಾರ್ವತಮ್ಮ ಅವರು ಪಾದಯಾತ್ರೆ ಮಾಡಿದ್ದರು. ವೃದ್ಧೆ ಪಾರ್ವತಮ್ಮ ಅವರ ಪಾದಯಾತ್ರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಳೆದ ಎರಡು ದಿನಗಳಿಂದ ವೈರಲ್ ಆಗುತ್ತಿದೆ. ವೃದ್ಧೆ ಪಾರ್ವತಮ್ಮ ಅವರ ಪಾದಯಾತ್ರೆಯನ್ನು ಮೆಚ್ಚಿ ಸಾಲೂರು ಶ್ರೀಗಳು ಸನ್ಮಾನಿಸಿದರು..