ಬೆಂಗಳೂರು: ಸುಮಲತಾ ಮತ್ತು ವರಿಷ್ಠರ ನಡುವೆ ನಡೆದ ಮಾತುಕತೆ ಗೊತ್ತಿಲ್ಲ, ಅವರ ತೀರ್ಮಾನವೇ ಅಂತಿಮ ಎಂದು ಆರ್ ಅಶೋಕ್ ಹೇಳಿದ್ದಾರೆ. ಸುಮಲತಾ ಅಂಬರೀಶ್ ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಕೇಂದ್ರ ಸಂಸದೀಯ ಮಂಡಳಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ, ಅದಕ್ಕಿಂತ ಮಿಗಿಲಾಗಿ ನಾನೇನೂ ಹೇಳುವುದು ಸಾಧ್ಯವಿಲ್ಲ. ವಿಷಯ ಸ್ಪಷ್ಟವಾಗಿದೆ, ಸುಮಲತಾ ಅವರು ಮಂಡ್ಯ ಟಿಕೆಟ್ ಬಗ್ಗೆ ಕೇಂದ್ರದ ನಾಯಕರೊಂದಿಗೆ ಮಾತಾಡಿದ್ದಾರೆ. ಅವರ ನಡುವೆ ನಡೆದಿರುವ ಮಾತುಕತೆಯ ವಿವರ ರಾಜ್ಯ ಬಿಜೆಪಿ ನಾಯಕರಿಗೆ ಗೊತ್ತಿಲ್ಲ. ಅವರು ತೆಗೆದುಕೊಳ್ಳುವ ತೀರ್ಮಾನ ಬಗ್ಗೆ ಯಾವುದೇ ದೂಸ್ರಾ ಮಾತು ಇರಲ್ಲ ಎಂದು ಹೇಳಿದರು.