ಹಾವೇರಿ: ಟಿಕೆಟ್, ಅಧಿಕಾರ, ಪ್ರಶಸ್ತಿಗಾಗಿ ವಶೀಲಿ ಮಾಡುವ ಜಾಯಮಾನ ನಂದಲ್ಲ, ಹೊಂದಾಣಿಕೆ ರಾಜಕಾರಣ ಬೇಕಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಬಿಎಸ್ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ ಯತ್ನಾಳ್, ಯಡಿಯೂರಪ್ಪ ಕುಟುಂಬವನ್ನು ಹಳಿಯುವುದನ್ನು ಮುಂದುವರಿಸಿದ್ದಾರೆ. ತನಗೆ ಹೊಂದಾಣಿಕೆ ಮಾಡಿ ಗೊತ್ತಿಲ್ಲ ಅದನ್ನು ಮಾಡಿ ರಾಜಕಾರಣದಲ್ಲಿರುವ ಉಮೇದಿಯೂ ತನಗಿಲ್ಲ, ಪ್ರಶಸ್ತಿಗಳಿಗಾಗಿ ಮತ್ತು ಟಿಕೆಟ್ ಇಲ್ಲವೇ ಆಧಿಕಾರಕ್ಕಾಗಿ ವಶೀಲಿ ಮಾಡಿದವನಲ್ಲ, ರಾಜಕೀಯ ಬದುಕಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಅವರಿಬ್ಬರಿಗೆ ಬಿಟ್ಟರೆ ಯಾರಿಗೂ ಕಾಲು ಮುಟ್ಟಿ ನಮಸ್ಕರಿಸಿದವನಲ್ಲ ಎಂದು ಹೇಳಿದ್ದಾರೆ.