ಚಾಮರಾಜನಗರ : ಚಾಮರಾಜನಗರ : 3ನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಆಯ್ಕೆಯಾಗಬೇಕು ಹಾಗೂ ದೇಶಕ್ಕೆ ಒಳ್ಳೆಯದಾಗಬೇಕು ಎಂದು ಹೇಳಿರುವ 102 ವರ್ಷದ ಅಜ್ಜಿಯೊಬ್ಬರು ಮಾದಪ್ಪನನ್ನು ಕಾಣಲು ಮಹದೇಶ್ವರಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿರುವ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಮಹದೇಶ್ವರಬೆಟ್ಟದಲ್ಲಿ ಐದು ದಿನಗಳ ಕಾಲ ನಡೆಯುವ ಮಾದಪ್ಪನ ಶಿವರಾತ್ರಿ ಜಾತ್ರೆಗೆ ತುಮಕೂರು ಜಿಲ್ಲೆಯ ತಿಪಟೂರಿನಿಂದ ಮಹದೇಶ್ವರಬೆಟ್ಟಕ್ಕೆ ಆಗಮಿಸಲು ಪಯಣ ಬೆಳೆಸಿದ ಶತಾಯುಷಿ ಅಜ್ಜಿ, ಮಹದೇಶ್ವರಬೆಟ್ಟದ ತಾಳುಬೆಟ್ಟವನ್ನು ತಲುಪಿ ಅಲ್ಲಿಂದ ಯುವಕರಂತೆ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡು ಎಲ್ಲರ ಗಮನ ಸೆಳೆದಿದ್ದಾರೆ.
ದೇಶಕ್ಕೆ ಒಳ್ಳೆಯದಾಗಬೇಕು, ಮಳೆ ಬೆಳೆಯಾದರೆ ರೈತರು ಬದುಕುತ್ತಾರೆ. ಕಾಡು ಪ್ರಾಣಿಗಳಿಗೆ ಕುಡಿಯಲು ನೀರು ಸಿಗದಂತಾಗಿದೆ. ಈ ಎಲ್ಲವೂ ನೆರವೇರಲು ದೇಶಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು ಎನ್ನುವ ಅಜ್ಜಿಯ ಮಾತು ಕೇಳಿದ ಭಕ್ತರು ಚಪ್ಪಾಳೆ ತಟ್ಟಿ ಸೂಪರ್ ಅಜ್ಜಿ ಎಂದು ಸಂತಸಗೊಂಡಿದ್ದಾರೆ.
Leave a comment