ಮಂಡ್ಯ : ಬೆನ್ನಿಗೆ ಕಟ್ಟಿಕೊಂಡು ಓಡಾಡಲು ನಾನು ರಾಕ್ಲೈನ್ ಅಲ್ಲ. ಎಲ್ಲವೂ ಲಿಮಿಟ್ ನಲ್ಲಿ ಇರಬೇಕು ಎಂದು ಡಾ.ರವೀಂದ್ರ ಹೇಳಿಕೆಗೆ ಮಂಡ್ಯ ಸಂಸದೆ ಸುಮಲತಾ ಗರಂ ಆಗಿದ್ದಾರೆ. ಸಿನಿಮಾದಲ್ಲಿ ಅವಕಾಶ ಕೊಡಿ ಎಂದು ಕರೆ ಮಾಡಿದ್ರು. ರಾಕ್ ಲೈನ್ಗೆ ನಿರಂತರವಾಗಿ ಕರೆ ಮಾಡಿದ್ದೆಲ್ಲ ಗೊತ್ತಿದೆ. ಅವರ ಯೋಗ್ಯತೆ ಏನೆಂದು ಅರ್ಥ ಮಾಡಿಕೊಳ್ಳಬೇಕು ಎಂದು ಡಾ.ರವೀಂದ್ರ ವಿರುದ್ಧ ಸಂಸದೆ ಸುಮಲತಾ ಕಿಡಿಕಾರಿದ್ದಾರೆ.
ಇನ್ನು ಇದೇ ವೇಳೆ ಅಂಡರ್ ಪಾಸ್ಗಾಗಿ ಶಾಸಕ ಗಣಿಗ ರವಿ ಉಪವಾಸ ಸತ್ಯಾಗ್ರಹ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಹನಕೆರೆ ಅಂಡರ್ ಪಾಸ್ ಅಪ್ರೂವಲ್ ಆಗಿದೆ. ಮಿನಿಸ್ಟರಿ ಇಂದ ಸಹಿ ಬಾಕಿ ಇದೆ ಅಷ್ಟೇ. ಮಂಡ್ಯ ಶಾಸಕರು ಬಹಳಷ್ಟು ಉತ್ಸುಕರಾಗಿದ್ದಾರೆ. ಆರಂಭವಾಗುವ ಕಾಮಗಾರಿಗೂ ಕ್ರೆಡಿಟ್ ತಗೋಬೇಕು ಅಂತಿದ್ದಾರೆ. ಹನಕೆರೆ ಅಂಡರ್ ಪಾಸ್ ವಿಚಾರದಲ್ಲಿ ಸಾಕಷ್ಟು ಸಭೆ ಮಾಡಿದ್ದೀನಿ. ಸ್ಲಂ ಬೋರ್ಡ್ ವಿಚಾರದಲ್ಲಿ ನನ್ನ ಶ್ರಮವಿತ್ತು. ಹಕ್ಕು ಪತ್ರ ಕೊಡಿಸುವಲ್ಲಿ ಶ್ರಮಿಸಿದ್ದೆ. ಈಗ ಬಂದೂ ಉದ್ಘಾಟನೆ ಅಂತಾರೆ. ಆಗಿರುವ ಕೆಲಸಗಳನ್ನು ನಾನೆ ಮಾಡಿದ್ದೇನೆ ಎನ್ನಬೇಡಿ. ಹಸಿ ಸುಳ್ಳನ್ನ ಜನರ ಮುಂದಿಡಬೇಡಿ. ನೀವು ಬಂದ 6 ತಿಂಗಳಲ್ಲಿ ಎಲ್ಲಾ ಕೆಲಸ ಮಾಡಿಬಿಟ್ರಾ ? ಉಪವಾಸ ಸತ್ಯಾಗ್ರಹ ಕೇವಲ ಕ್ರೆಡಿಟ್ಗಾಗಿ ಎಂದು ಸುಮಲತಾ ಅವರು ತಿಳಿಸಿದರು.