ಮಂಡ್ಯ: ಮೈತ್ರಿ ಸಮಾವೇಶದಲ್ಲಿ ಗೋವಾ ಸಿಎಂ ಪ್ರಮೋದ್ ಸಾವಂತ್ ಭಾಷಣ ಮಾಡಿ, ಮೋದಿ ಕರೆ ಮಾಡಿ 28ಕ್ಕೆ 28 ಸೀಟು ಗೆಲ್ಲಿಸಿಕೊಂಡು ಬರುವಂತೆ ಹೇಳಿದ್ದಾರೆ. ಮೋದಿ ಪ್ರಧಾನಿಯಾಗಿ ಆರ್ಥಿಕ ವಿಕಾಸವನ್ನು ಮೇಲೆತ್ತಲು ಪ್ರಯತ್ನಿಸುತ್ತಿರುವಾಗ, ಕರ್ನಾಟಕದ ರಾಜ್ಯ ಸರ್ಕಾರ ಧರ್ಮದ ಹೆಸರಿನಲ್ಲಿ ನಡೆಯುತ್ತಿದೆ ಎಂದು ಹೇಳಿದರು.
“ನಾವು ಕುಮಾರಸ್ವಾಮಿ ಅವರನ್ನು ಮೋದಿ ಅವರೊಂದಿಗೆ ಕೂರಿಸಲು ಬಂದಿದ್ದೇನೆ, ಮೋದಿ ಸರ್ಕಾರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸದ ಸರ್ಕಾರವಾಗಿದೆ. ಮೋದಿ ನಾರಿ ಶಕ್ತಿ, ಯುವ ಶಕ್ತಿ, ರೈತ ಶಕ್ತಿ, ಬಡವರ ವಿಕಾಸದ ಶಕ್ತಿ ಮೇಲೆ ನಡೆಯುತ್ತಿದ್ದಾರೆ. ಅದೇ ರೀತಿ ಉಜ್ವಲ, ಆವಾಸ್, ಮುದ್ರ ಸೇರಿದಂತೆ ಹಲವು ಯೋಜನೆ ಮಾಡಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ 100 ರೂ. ಕಳುಹಿಸಿದ್ರೆ ರೈತರಿಗೆ 17 ರೂ. ಸಿಗುತ್ತಿತ್ತು, ಈಗ ಕಿಶಾನ್ ಸಮ್ಮಾನ್ ಯೋಜನೆಯ 2000 ರೂ. ರೈತರಿಗೆ ನೇರವಾಗಿ ಅಕೌಂಟ್ಗೆ ಬರುತ್ತೆ ಎಂದು ಹೇಳಿದರು. ಈ ರೀತಿ “ಸಿದ್ದರಾಮಯ್ಯ ಮಾಡಿರುವ ಒಂದೇ ಒಂದು ಸಾಧನೆ ತೋರಿಸಿ.” ʻಎಂದು ಪ್ರಶ್ನಿಸಿದರು.