ತಿರುವನಂತಪುರಂ: ಇಸ್ರೋದಿಂದ ಮೊದಲ ರಾಕೆಟ್ ಉಡಾವಣೆಯಾಗಿ 60 ವರ್ಷ ತುಂಬುತ್ತಿದ್ದು, ಈ ನಿಮಿತ್ತ ಸಂಭ್ರಮಾಚರಣೆಗೆ ಶನಿವಾರ ಕೇಂದ್ರ ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಚಾಲನೆ ನೀಡಿದರು. 1963ರಲ್ಲಿ ಭಾರತ ಮೊದಲ ರಾಕೆಟ್ ಹಾರಿಸಿತ್ತು. ಈ ನಿಮಿತ್ತ ಈಗ 60ನೇ ವರ್ಷಾಚರಣೆಗೆ ಚಾಲನೆ ನೀಡಿ ಮಾತನಾಡಿದ ಸಿಂಗ್, 60ನೇ ವರ್ಷಾಚರಣೆ ವೇಳೆಯೇ ಚಂದ್ರಯಾನ-2 ಯಶಸ್ವಿಯಾಗಿರುವುದು ವಿಶೇಷ. ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರವು ಭಾರತದ ಬಾಹ್ಯಾಕಾಶ ಯಾನದ ಆಕಾಂಕ್ಷೆಗಳನ್ನು ನಿಜ ಮಾಡಿ ತೋರಿಸಿರುವುದು ಹೆಮ್ಮೆಯ ವಿಚಾರ ಎಂದರು.
![](https://www.prathinidhi.net/wp-content/uploads/2023/11/image-2.webp)