ಎಚ್.ಡಿ. ಕೋಟೆ : ನಮ್ಮ ಮುಂದಿರುವುದು ದೇಶದ ಚುನಾವಣೆ, ಯಾವುದೋ ಪಂಚಾಯಿತಿ ಚುನಾವಣೆಯಲ್ಲ. ಐದು ಗ್ಯಾರಂಟಿಗಳನ್ನುರಾಜ್ಯ ಸರ್ಕಾರ ನೀಡುತ್ತಿದ್ದೇವೆ ಎನ್ನುತ್ತಾರೆ, ಆದರೆ ಕೇಂದ್ರ ಸರ್ಕಾರವೇ ಅನುದಾನವನ್ನು ನೀಡುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂಗೌಡ ಮಾತನಾಡಿದರು.
ಪಟ್ಟಣದ ಕನಕಭವನದಲ್ಲಿ ಗುರುವಾರ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಮತ್ತು ಜಾತ್ಯಾತೀತ ಜನತಾ ದಳದ ವತಿಯಿಂದ ಕಾರ್ಯಕರ್ತರ ಸಮನ್ವಯ ಸಭೆ ಉದ್ಘಾಟಿಸಿ ಮಾತನಾಡಿದರು.
ಹತ್ತು ಕೆಜಿ ಅಕ್ಕಿ ಕೊಡುತ್ತೆನೆಂದು ಹೇಳಿ ಕೇಂದ್ರ ಸರ್ಕಾರದ ಐದು ಕೆ.ಜಿ.ಅಕ್ಕಿಯನ್ನು ತಾವು ನೀಡುತ್ತಿದ್ದೇವೆ ಎಂದು ಸುಳ್ಳು ಹೇಳಿಕೊಂಡು ಸರ್ಕಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ 28ಕ್ಕೆ 28 ಸ್ಥಾನವನ್ನು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಗೆಲ್ಲುವ ವಾತಾವರಣ ಸೃಷ್ಠಿಯಾಗಿದೆ ಎಂದರು.
ಶಾಸಕ ಜಿ.ಟಿ. ದೇವೆಗೌಡ ಮಾತನಾಡಿ, ದೇಶ ಉಳಿಯಬೇಕಾದರೆ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ಮಾಜಿ ಪ್ರಧಾನಿ 92 ವರ್ಷದ ಎಚ್.ಡಿ. ದೇವೇಗೌಡರು ಬೆಂಬಲಿಸುತ್ತಿದ್ದಾರೆ. ಬಿಜೆಪಿ ಎಲ್ಲರಿಗೂ ಸಮಾನತೆಯ ಹಕ್ಕನ್ನುನೀಡಬೇಕೆಂದು ಗಿರಿಜನ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದಾರೆ. ಅಲ್ಲದೆ ದಲಿತರನ್ನು ರಾಷ್ಟ್ರಪತಿ ಮಾಡಲಾಗಿತ್ತು ಎಂದರು.
ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತಗತು ಜೆಡಿಎಸ್ ಅಭ್ಯರ್ಥಿಗಳು ಒಟ್ಟು 92 ಸಾವಿರ ಮತಗಳನ್ನು ಪಡೆದಿದ್ದರು, ಈ ಭಾರಿ ತಾಲ್ಲೂಕಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಬಿಜೆಪಿ ಅಭ್ಯರ್ಥಿ ಪಡೆಯಲಿದ್ದು ಇತಿಹಾಸ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ರಾಜ್ಯ ಎಸ್ ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ ಎಂ ಕೃಷ್ಣನಾಯಕ, ತಾಲೂಕು ಅಧ್ಯಕ್ಷರಾದ ಶಂಭೇಗೌಡ, ಗುರುಸ್ವಾಮಿ, ರಾಜೇಂದ್ರ, ಗೋಪಾಲಸ್ವಾಮಿ, ನರಸಿಂಹಸ್ವಾಮಿ, ಮೊತ್ತ ಬಸವರಾಜು, ನರಸಿಂಹೇಗೌಡ, ಎಚ್, ಸಿ, ಲಕ್ಷ್ಮಣ್, ರಮೇಶ್ ಕುಮಾರ್, ಟಿ. ವೆಂಕಟೇಶ್, ದೊಡ್ಡನಾಯಕ, ಕೃಷ್ಣಸ್ವಾಮಿ, ವಯು.ಟಿ. ಮಹೇಶ್, ಸಿ.ಕೆ. ಗಿರೀಶ್, ವೆಂಕಟಸ್ವಾಮಿ, ಎಚ್.ಸಿ. ಶಿವಣ್ಣ, ಮನುಗನಹಳ್ಳಿ ಮಂಜು, ನಾರಾಯಣ್, ಹಂಚೀಪುರ ಗುರುಸ್ವಾಮಿ, ಮಾದಾಪುರ ನಂದೀಶ್, ಮಳಲಿ ಶಾಂತಕುಮಾರ್, ನಾಗನಾಯಕ, ಸಿರಿ, ಯೋಗೇಶ್, ಎಂ.ಡಿ. ಮಂಚಯ್ಯ, ಬಿ ಗುರುಸ್ವಾಮಿ, ಮಾದೇಶ್, ಲೋಕೇಶ್, ಮಹೇಶ್,ಅನೇಕ ಮುಖಂಡರು ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಮಹಿಳೆಯರು ಇದ್ದರು.