PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ವೀರಮರಣವನ್ನಪಿದ ದಸರಾ ಮಾಜಿ ಕ್ಯಾಪ್ಟನ್ ಅರ್ಜುನ ಆನೆಯ ಸಾಹಸ ಗಾಥೆ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಜಿಲ್ಲೆ > ವೀರಮರಣವನ್ನಪಿದ ದಸರಾ ಮಾಜಿ ಕ್ಯಾಪ್ಟನ್ ಅರ್ಜುನ ಆನೆಯ ಸಾಹಸ ಗಾಥೆ
ಜಿಲ್ಲೆ

ವೀರಮರಣವನ್ನಪಿದ ದಸರಾ ಮಾಜಿ ಕ್ಯಾಪ್ಟನ್ ಅರ್ಜುನ ಆನೆಯ ಸಾಹಸ ಗಾಥೆ

Prathinidhi News
Last updated: December 5, 2023 10:19 am
Prathinidhi News
Published December 5, 2023
Share
SHARE

ಗಜ ಗಾಂಭೀರ್ಯ ಪದಕ್ಕೆ ಅರ್ಥ ತಂದು ಕೊಟ್ಟಿದ್ದ ಬಲ ಭೀಮ ದಸರೆಯ ಮಾಜಿ ಕ್ಯಾಪ್ಟನ್ ಅರ್ಜುನ  ಆನೆ ಇನ್ನು ನೆನಪು ಮಾತ್ರ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಯಸಳೂರು ಬಳಿ ಕಾಡಾನೆಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವೇಳೆ ಒಂಟಿಸಲಗದ ಜೊತೆ ಕಾದಾಟ ನಡೆಸಿ ಅರ್ಜುನ ಆನೆ ವೀರಮರಣವನ್ನಪ್ಪಿದೆ. 64 ವರ್ಷದಲ್ಲೂ 24ರ ಚಿರಯುವಕನಂತಿದ್ದ ಅರ್ಜುನ ಇನ್ನು ನೆನಪು ಮಾತ್ರ.

ಅರ್ಜುನ ಆನೆ ಪರಿಚಯ

ಅದು 1968ರ ಕಾಲಘಟ್ಟ. ಕಾಡು ಹೇರಳವಾಗಿ ಹಸಿರಿನಿಂದ ಕಂಗೊಳಿಸುತಿತ್ತು. ಕಾಕನಕೋಟೆ ಅರಣ್ಯ ಪ್ರದೇಶದ ಹೆಸರು ಕೇಳಿದರು ಮೈ ನಡುಗುತಿತ್ತು. ಕಾಕನಕೋಟೆ ಕಾಡಾನೆಗಳ ಬೃಹತ್ ಸಾಮ್ರಾಜ್ಯ. ಇಂತಹ ಕಾಡಾನೆಗಳ ಸಾಮ್ರಾಜ್ಯದಲ್ಲಿ ಖೆಡ್ಡಾಗೆ ಬಿದ್ದವನೇ ಅರ್ಜುನ ಆನೆ. ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಆನೆ ಸೆರೆ ಹಿಡಿಯಲು ಸಿಬ್ಬಂದಿ ಖೆಡ್ಡಾ ತೋಡಿದ್ದರು. ಆ ಖೆಡ್ಡಾಗೆ ಆನೆಯೊಂದು ಬಿದ್ದಿತ್ತು. ಸುಮಾರು 10 ವರ್ಷ ವಯಸ್ಸಿನ ಆನೆ. ಆ ಆನೆಯನ್ನು ನೋಡಿದ ತಕ್ಷಣ ಸಿಬ್ಬಂದಿಗೆ ರೋಮಾಂಚನ. ಯಾಕಂದ್ರೆ ಖೆಡ್ಡಾಗೆ ಬಿದ್ದ ಆನೆಯ ರೂಪ ಆ ರೀತಿ ಇತ್ತು. ಆ ಆನೆ ನೋಡಿದರೆ ಆನೆ ಅಂದರೆ ಹೀಗಿರಬೇಕು ಅನಿಸುವಂತಿತ್ತು. ಅದರ ಮುಖ ಲಕ್ಷಣ ಎತ್ತರ ಹಾವ ಭಾವ ನೋಡಿಯೇ ಅದಕ್ಕೆ ಅರ್ಜುನ ಅಂತಾ ಹೆಸರಿಡಲಾಯ್ತು. ಅರ್ಜುನ ಸೆರೆ ಸಿಕ್ಕಾಗ ಮಹಾ ಕೋಪಿಷ್ಠನಾಗಿದ್ದ. ಆತನನ್ನು ಪಳಗಿಸುವುದೇ ದೊಡ್ಡ ತಲೆ ನೋವಾಗಿತ್ತು. ಅರ್ಜುನ ಆರಂಭದಲ್ಲಿ ಸಾಕಷ್ಟು ಒರಟನಾಗಿದ್ದ ಕೇವಲ 10 ವರ್ಷ ವಯಸ್ಸು ಚಿರ ಯುವಕ ಆತನ ಹತ್ತಿರ ಹೋಗಲು ಎಲ್ಲರೂ ಹೆದರುತ್ತಿದ್ದರು. ಆಗ ಅರ್ಜುನ ಆನೆಯ ಜೊತೆಯಾದವನೇ ಮಾವುತ ಕೂಸಾ‌. ಮಾವುತ ಕೂಸಾನ ಜೊತೆ ಅರ್ಜುನ ಹೊಂದಿಕೊಂಡರು ಆತನ ಸ್ವಭಾವ ಬದಲಾಗಿರಲಿಲ್ಲ. ಅರ್ಜುನ ಒರಟನಾಗಿಯೇ ಇದ್ದ. ಆತನಲ್ಲಿ ಮಹತ್ತದ ಬದಲಾವಣೆ ತಂದಿದ್ದು ಮಾವುತ ದೊಡ್ಡ ಮಾಸ್ತಿ. ದೊಡ್ಡ ಮಾಸ್ತಿ ಸಹ ದೊಡ್ಡ ಆಳು. ಎತ್ತರ ನೀಳಕಾಯ. ದೊಡ್ಡ ಮೀಸೆ. ದೊಡ್ಡ ಮಾಸ್ತಿ ಅರ್ಜುನನಿಗೆ ಜೊತೆಯಾದ ನಂತರ ಆತನ ಸ್ವಭಾವದಲ್ಲಿ ತುಂಬಾ ಬದಲಾವಣೆಯಾಯಿತು. ಅರ್ಜುನ ಆನೆ ಸಾಧುವಾದ. ಎಲ್ಲಾ ಆನೆಗಳಂತೆ ವಿಧೇಯನಾದ.

ಅರ್ಜುನ ಆನೆ ಹಾಗೂ ದಸರಾ

- ಜಾಹೀರಾತು -

ಸಾಮಾನ್ಯವಾಗಿ ಹಿಂದೆ ಯಾವುದೇ ಆನೆ ಖೆಡ್ಡಾಗೆ ಬಿದ್ದರು ಇದು ದಸರಾ ಆನೆ ಆಗುತ್ತಾ? ದಸರೆಗೆ ಸರಿಯಾಗುತ್ತಾ ಅಂತಲೇ ಎಲ್ಲರೂ ಯೋಚಿಸುತ್ತಿದ್ದರು. ವಿಶ್ವವಿಖ್ಯಾತ ಮೈಸೂರು ದಸರೆಗೆ ಆನೆಯನ್ನು ಸಿದ್ದಪಡಿಸುತ್ತಿದ್ದರು. ಆದರೆ ಅರ್ಜುನನಿಗೆ ತಯಾರು ಮಾಡುವ ಅವಶ್ಯಕತೆಯೇ ಇರಲಿಲ್ಲ. ದಸರೆಯಲ್ಲಿ ಭಾಗವಹಿಸುವ ಎಲ್ಲಾ ಕಳೆ ಅರ್ಜುನ ಆನೆಯಲ್ಲಿತ್ತು. ಆ ಕಾರಣಕ್ಕೆ ಅರ್ಜುನ ಆನೆ ವಿಶ್ವವಿಖ್ಯಾತ ಮೈಸೂರು ದಸರೆಯಲ್ಲಿ ಭಾಗಿಯಾದ. 36 ವರ್ಷ ವಯಸ್ಸಿನವನಾಗಿದ್ದಗಲೇ ಒಮ್ಮೆ ಅರ್ಜುನ ಆನೆಗೆ ಚಿನ್ನದ ಅಂಬಾರಿ ಹೊರುವ ಅವಕಾಶ ಸಿಕ್ಕಿತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಕೂಡಾ. ಆದರೆ ಅಂದು ನಡೆದ ಒಂದು ಆಕಸ್ಮಿಕ ಕಹಿ ಘಟನೆ ಅರ್ಜುನನಿಗೆ ಕ್ಯಾಪ್ಟನ್ ಸ್ಥಾನ ಮಾತ್ರವಲ್ಲ ದಸರೆಯಿಂದಲೇ ದೂರ ಮಾಡಿತು.

ಮರೆಯಲಾಗದ ಕಹಿ ಘಟನೆ – ಅರ್ಜುನನಿಗೆ ಅಂಟಿದ ಮಸಿ

ಇದು ತುಂಬಾ ಹಿಂದೆ ನಡೆದಿದ್ದ ಘಟನೆ. ಅರ್ಜುನ ಆನೆ ದಸರಾದಲ್ಲಿ ಭಾಗಿಯಾಗುತ್ತಿದ್ದ ವೇಳೆ ಸಾಮಾನ್ಯವಾಗಿ ದಸರಾ ಆನೆಗಳನ್ನು ಮೈಸೂರು ಅರಮನೆಯಿಂದ ಕಾರಂಜಿ ಕೆರೆಗೆ ಸ್ನಾನ ಮಾಡಿಸಲು ಕರೆದುಕೊಂಡು ಹೋಗಲಾಗುತಿತ್ತು. ಅದೇ ರೀತಿ ಅಂದು ಸಹಾ ಎಲ್ಲಾ ದಸರಾ ಆನೆಗಳನ್ನು ಕಾರಂಜಿ ಕೆರೆಗೆ ಕರೆದುಕೊಂಡು ಹೋಗಲಾಗಿತ್ತು. ಸ್ನಾನ ಮುಗಿಸಿ ವಾಪಸ್ಸು ಬರುವಾಗ ದೊಡ್ಡ ಅವಘಡವೊಂದು ಸಂಭವಿಸಿತು‌. ಸ್ನಾನ ಮುಗಿಸಿ ಮೇಲೆ ಬರುವಾಗ ಅರ್ಜನು ಆನೆಯ ಮುಂದೆ ಇದ್ದ ಬೇರೆ ಆನೆಯ ಕಾವಾಡಿಯೊಬ್ಬ ಕಾಲು ಜಾರಿ ಕೆಳಗೆ ಬಿದ್ದ. ಆತ ಕೆಳಗೆ ಬಿದ್ದದನ್ನು ಗಮನಿಸಿದ ಅರ್ಜುನ ಆನೆ ತನ್ನ ಪಾಡಿಗೆ ತಾನು ಮುಂದೆ ಸಾಗಿದ. ಈ ವೇಳೆ ಅರ್ಜುನ ಆನೆಯ ಪಾದಕ್ಕೆ ಸಿಲುಕಿದ ಆ ಕಾವಾಡಿ ಕೊನೆಯುಸಿರೆಳೆದ. ಇದೊಂದು ಆಕಸ್ಮಿಕವಾಗಿ ನಡೆದ ಘಟನೆಯಾಗಿತ್ತು. ಕಾವಾಡಿ ಬಿದ್ದಿದ್ದು ಅರ್ಜುನ ಆನೆಯ ಗಮನಕ್ಕೆ ಬಂದಿರಲೇ ಇಲ್ಲ. ಆದರೂ ಅರ್ಜುನ ಆನೆಗೆ ಕೊಲೆಗಾರ ಪಟ್ಟವನ್ನು ಕಟ್ಟಲಾಯಿತು‌. ವಾಸ್ತವ ಗೊತ್ತಿದ್ದರು ಯಾವೊಬ್ಬ ಅಧಿಕಾರಿಯೂ ಅದರ ಬಗ್ಗೆ ಮನದಟ್ಟು ಮಾಡಿಕೊಡುವ ಕೆಲಸವನ್ನೇ ಮಾಡಲಿಲ್ಲ. ಪಾಪ ಮೂಕ ಪ್ರಾಣಿ ಅರ್ಜುನ ತಾನೇ ಹೇಗೆ ತನ್ನ ವಾದವನ್ನು ಮಂಡಿಸಿಯಾನು ? ನಿರಪರಾಧಿ ಅರ್ಜುನ ಆನೆ ಅಪರಾಧಿ ಪಟ್ಟ ಕಟ್ಟಿಕೊಂಡು ದಸರಾದಿಂದಲೇ ದೂರ ಉಳಿಯಬೇಕಾಯಿತು. ಇದು ಅರ್ಜು‌ನ ಆನೆಯ ಜೀವನದಲ್ಲಿ ಶಾಶ್ವತ ಕಪ್ಪು ಚುಕ್ಕೆಯಾಗಿ ಉಳಿದು ಹೋಯಿತು.

ಕೊನೆಗೂ ಒಲಿದ ಕ್ಯಾಪ್ಟನ್ ಸ್ಥಾನ – ಕೊಟ್ಟ ಜವಾಬ್ದಾರಿ

ಇದಾದ ದಶಕಗಳ ನಂತರ ಅರ್ಜುನ ಆನೆಗೆ ದಸರೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಬಲರಾಮ ಆನೆ ನಂತರ ಅರ್ಜುನ ಆನೆಗೆ ಅಂಬಾರಿ ಹೊರುವ ಜವಾಬ್ದಾರಿ ನೀಡಲಾಯ್ತು. ಅರ್ಜುನ ಒಟ್ಟು 8 ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗುವ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿ ಸೈ ಎನಿಸಿಕೊಂಡ. ಜಂಬೂಸವಾರಿ ಮೆರವಣಿಗೆಯಲ್ಲಿ ಅರ್ಜುನ ಆನೆ ಚಿನ್ನದ ಅಂಬಾರಿ ಹೊತ್ತು ಸಾಗುವುದನ್ನು ನೋಡುವುದೇ ಒಂದು ಚೆಂದ. ಯಾಕಂದ್ರೆ ಬೇರೆ ಎಲ್ಲಾ ಆನೆಗಳು 750 ಕೆಜಿ ತೂಕದ ಚಿನ್ನದ ಅಂಬಾರಿ ಬೆನ್ನಿನ ಮೇಲೆ ಕೂರುತ್ತಿದ್ದಂತೆ ಭಾರಕ್ಕೆ ತಮ್ಮ ತಲೆ ತಗ್ಗಿಸುತ್ತಿದ್ದವು. ಅದೇ ರೀತಿ ಹೆಜ್ಜೆ ಹಾಕುತ್ತಿದ್ದವು. ಆದರೆ ಅರ್ಜುನ ಆನೆ ಬೆನ್ನಿನ ಮೇಲೆ ಭಾರ ಬಿದ್ದರು ತಲೆ ಎತ್ತಿ ನಿಲ್ಲುವುದು ಮಾತ್ರವಲ್ಲ ತಲೆ ಎತ್ತಿ ನಡೆಯುತ್ತಿದ್ದ. ಇನ್ನೊಂದು ವಿಶೇಷ ಅಂದರೆ ಆತನ ಗಜ ಗಾಂಭೀರ್ಯ ನಡಿಗೆ. ಅತ್ಯಂತ ಬಲಶಾಲಿ ಹಾಗೂ ಅತಿ ಎತ್ತರವಾಗಿದ್ದ ಅರ್ಜುನ ಅತ್ಯಂತ ಆಕರ್ಷಕವಾಗಿ ಹೆಜ್ಜೆ ಹಾಕುತ್ತಿದ್ದ. ಅಷ್ಟೇ ಅಲ್ಲ ಅತ್ಯಂತ ವೇಗವಾಗಿ ತನ್ನ ಗುರಿ ಮುಟ್ಟುತ್ತಿದ್ದ. ಉಳಿದ ಆನೆಗಳು ಮೈಸೂರು ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನ ತಲುಪಲು 2 ಗಂಟೆ 45 ನಿಮಿಷ ಮೂರು ಗಂಟೆ ತೆಗೆದುಕೊಳ್ಳುತ್ತಿದ್ದರೆ, ಅರ್ಜುನ ಆನೆ ಮಾತ್ರ 2 ಗಂಟೆ 10 ನಿಮಿಷಕ್ಕೆ ತಲುಪಿ ದಾಖಲೆ ಬರೆದಿದ್ದ.

ಸಾಧು ಆದರೆ……..!

ಅರ್ಜುನ ಆನೆ ಸಾಧುವಾಗಿದ್ದು ಸತ್ಯ. ಆದರೆ ಆತ ತಿರುಗಿ ಬಿದ್ದರೆ ಯಾವ ಆನೆಯೂ ಆತನ ಮುಂದೆ ನಿಲ್ಲುತ್ತಿರಲಿಲ್ಲ. ಕಾಡಾನೆ ಕಾರ್ಯಾಚರಣೆಯಲ್ಲಿ ಅರ್ಜುನ ಆನೆ ಅತ್ಯಂತ ನಿಪುಣನಾಗಿದ್ದ. ಯಾವುದೇ ಕಾಡಾನೆಯಾಗಲಿ ಬಗ್ಗಿಸಿ ಮಂಡಿಯೂರುವಂತೆ ಮಾಡಿ ಬಿಡುತ್ತಿದ್ದ. ಅರ್ಜುನ ಆನೆ ಕೆರಳಿ ನಿಂತರೆ ಮುಗಿಯಿತು ಎದುರಾಳಿಯ ಆಟ ಏನೂ ನಡೆಯುತ್ತಿರಲಿಲ್ಲ. ಇನ್ನು ಈತನ ಪ್ರತಾಪ ಕೇವಲ ಎದುರಾಳಿಗಳ ವಿರುದ್ಧವಾಗಿರುತಿತ್ತು. ಎಂದೂ ಆತ ತನ್ನ ಕೋಪ ಪ್ರತಾಪವನ್ನು ಜೊತೆಯಾಗಿರುವವರ ಮೇಲೆ ತೋರಿಸುತ್ತಿರಲಿಲ್ಲ. ಅಷ್ಟೇ ಅಲ್ಲ ಜೊತೆಯಲ್ಲಿದ್ದವರ ಪಾಲಿಗೆ ಅರ್ಜುನನೇ ಅಪಾತ್ಬಾಂದವನಾಗಿದ್ದ. ಹುಲಿ ಸೆರೆ ಕಾರ್ಯಾಚರಣೆ, ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಸಾಕಷ್ಟು ಬಾರಿ ತನ್ನ ಮಾವುತ ಕಾವಾಡಿಗಳು ಮಾತ್ರವಲ್ಲ ಅರಣ್ಯ ಇಲಾಖೆಯ ಸಿಬ್ಬಂದಿ ಅಧಿಕಾರಿಗಳ ಪ್ರಾಣವನ್ನು ಉಳಿಸಿದ ಹೆಗ್ಗಳಿಕೆಗೆ ಅರ್ಜುನ ಆನೆ ಭಾಜನನಾಗಿದ್ದ.

ಅರ್ಜುನ – ವೀರಮರಣ

ಯೋಧ ಕೊನೆಯುಸಿರಿರುವವರೆಗೂ ಯೋಧ, ಉಸಿರು ನಿಂತ ಮೇಲೂ ಯೋಧನೆ. ಈ ಮಾತನ್ನು ಅರ್ಜುನ ಆನೆ ಸಾಬೀತುಪಡಿಸಿದ್ದಾನೆ. 64ರ ಇಳಿ ವಯಸ್ಸಿನಲ್ಲೂ ಹರೆಯದ ಯುವಕನಂತೆ ಕಾದಾಡಿ ವೀರಮರಣವನ್ನು ಹೊಂದಿದ್ದಾನೆ. ಅಷ್ಟೇ ಅಲ್ಲ ತನ್ನ ಪ್ರಾಣ ಬಲಿ ಕೊಟ್ಟು, ಮೂರು ಆನೆಗಳ ಮಾವುತರು ಕಾವಾಡಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ಪ್ರಾಣ ಉಳಿಸಿದ್ದಾನೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಯಳಸೂರು ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆದಿತ್ತು. ಈ ವೇಳೆ ತಿರುಗಿ ಬಿದ್ದ ದೈತ್ಯ ಒಂಟಿ ಸಲಗ ಕಾರ್ಯಾಚರಣೆ ನಡೆಸುತ್ತಿದ್ದವರ ಮೇಲೆ ಏಕಾಏಕಿ ದಾಳಿ ನಡೆಸಿದೆ. ಒಂಟಿ ಸಲಗದ ದಾಳಿ ಒಂದು ಕ್ಷಣ ಎಲ್ಲರನ್ನೂ ವಿಚಲಿತಗೊಳಿಸಿದೆ. ಏನು ಆಗುತ್ತಿದೆ ಅಂತಾ ಗೊತ್ತಾಗುವಷ್ಟರಲ್ಲಿ ಎಲ್ಲರೂ ಚೆಲ್ಲಾಪಿಲ್ಲಿಯಾಗಿದ್ದಾರೆ. ಸಾಕಾನೆಗಳು ಹಿಂದಡಿಯಿಟ್ಟಿವೆ. ಆದರೆ ಅರ್ಜುನ ಆನೆ ಮಾತ್ರ ನಿಂತ ಜಾಗದಿಂದ ಕದಲಿಲ್ಲ. ಮಾವುತ ವಿನು ಸಹಾ ಅರ್ಜುನ ಆನೆಯ ಮೇಲೆ ಕುಳಿತಿದ್ದ. ಇದನ್ನು ಕಂಡ ಒಂಟಿ ಸಲಗ ಎಲ್ಲರನ್ನೂ ಬಿಟ್ಟು ಅರ್ಜುನ ಆನೆ ಕಡೆ ತಿರುಗಿತು. ಇದರಿಂದ ಬೇರೆ ಎಲ್ಲರ ಜೀವ ಉಳಿಯಿತು. ಈ ಮೂಲಕ ಅರ್ಜುನ ಆನೆ ಸಾವಿನಲ್ಲೂ ಸಾರ್ಥಕ ಮೆರೆದು ಹುತಾತ್ಮನಾಗಿದ್ದಾನೆ. ವಿಶ್ವವಿಖ್ಯಾತ ಮೈಸೂರು ದಸರೆಯ ಜವಾಬ್ದಾರಿ ನಿರ್ವಹಣೆ ಮಾಡಿದ ಹಾಗೂ ಹಲವರ ಪ್ರಾಣ ರಕ್ಷಣೆ ಮಾಡಿ ವೀರಮರಣವನ್ನಪ್ಪಿದ ಬಲ ಭೀಮ ಅರ್ಜುನ ಆನೆಗೆ ನಮದೊಂದು ಹೃದಯಪೂರ್ವಕ ಸೆಲ್ಯೂಟ್.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಜಿಲ್ಲೆ

ಬೆಳಗಾವಿಯಲ್ಲಿ ಮಹಾರಾಷ್ಟ್ರ ಆರೋಗ್ಯ ವಿಮೆ‌ ಜಾರಿ: ಕೆಎಲ್ಇ, ಅರಿಹಂತ ಆಸ್ಪತ್ರೆಗೆ ನೋಟಿಸ್

January 12, 2024
ಜಿಲ್ಲೆ

ಯದುವೀರ್‌- ತ್ರಿಷಿಕಾ ದಂಪತಿಗೆ ದ್ವಿತೀಯ ಪುತ್ರ ಜನನ – ಅರಮನೆಯ ದಸರಾ ಸಂಭ್ರಮ ದುಪ್ಪಟ್ಟು

October 11, 2024
ಜಿಲ್ಲೆ

ಡಿ.23ರಂದು ಪಿಎಸ್ಐ ಮರು ಪರೀಕ್ಷೆ, ದಿಢೀರ್‌ ನಿರ್ಧಾರಕ್ಕೆ ಆಕಾಂಕ್ಷಿಗಳ ವಿರೋಧ

November 24, 2023
ಜಿಲ್ಲೆ

ವಿಜಯ್‌ ಹಜಾರೆ ಏಕದಿನ ಟೂರ್ನಿ: ಕ್ವಾರ್ಟರ್‌ ಫೈನಲ್‌ಗೆ ಕರ್ನಾಟಕ ಲಗ್ಗೆ

December 6, 2023
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?