ಹನೂರು: ವಿಶ್ವ ರತ್ನ ಮಹಾನ್ ಮಾನವತವಾದಿ ಬಾಬಾ ಸಾಹೇಬ್ ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಕುಮಾರ್ ಹೇಳಿದರು.
ತಾಲೂಕಿನ ಅಜ್ಜೀಪುರ ಗ್ರಾಮದಲ್ಲಿ ಅಂಬೇಡ್ಕರ್ ಸಂಘ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ದೇಶ ವಿದೇಶ ಕಂಡಂತಹ ವಿಶ್ವ ಜ್ಞಾನಿ ಪಡೆದ ನಾಡು ನಮ್ಮದು ಇಂತಹ ಮಹಾನ್ ಚೇತನ ನಮಗೆ ಸಂವಿಧಾನ ಕೊಟ್ಟ ಬಳಿಕವೇ ನಮ್ಮ ಜೀವನ ಹಸನನಾಗಿರುವುದು ಆ ನಿಟ್ಟಿನಲ್ಲಿ ಬಾಬಾ ಸಾಹೇಬರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಜೀವನದಲ್ಲಿ ನಡೆಸಬೇಕು ಎಂದರು.
ಸರ್ವ ಧರ್ಮದವರಿಂದಲೂ ಆಚರಣೆ: ಅಜ್ಜೀಪುರ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಸಂದರ್ಭದಲ್ಲಿ ಪ್ರತಿ ಬಾರಿ ಸಹ ಅನ್ಯ ಧರ್ಮಿಯರು ಸೇರಿಕೊಂಡು ಬಹಳ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.
ಗ್ರಾಮದ ಮುಖಂಡರಾದ ಮಹಾದೇವ, ಬೈರಾಜು, ಶಿವನಯ್ಯ, ಮಹೇಶ್, ಚಂದ್ರು, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಕಾರ್ಯದರ್ಶಿ ಬುದ್ಧ, ಪದಾಧಿಕಾರಿಗಳಾದ ಶಾಸ್ತ್ರೀ, ಲೋಕೇಶ್, ಪ್ರದೀಪ್, ಕುಮಾರ್, ಸಿದ್ದರಾಜು, ಅಪ್ಪು, ರಾಜು, ನಾಗರಾಜು, ಜಗ್ಗು ಸೇರಿದಂತೆ ಇನ್ನಿತರ ಎಲ್ಲ ಪದಾಧಿಕಾರಿಗಳು, ಗ್ರಾಮಸ್ಥರು, ಯುವಕರು, ಮಕ್ಕಳು ಇದ್ದರು.