ಪ್ರತಿನಿಧಿ ವರದಿ ಮೈಸೂರು
ರಾವಂದೂರು ಗ್ರಾಮದ ತನ್ಮಯ್ ಶೆಟ್ಟಿ ದ್ವಿತೀಯ ಪಿಯುಸಿಯಲ್ಲಿ 591 ಅಂಕಗಳನ್ನ ಗಳಿಸಿ ರಾಜ್ಯಕ್ಕೆ 8ನೇ ರಾಂಕ್ ಪಡೆದಿದ್ದಾನೆ,
ಕಾರ್ಕಳ ಜ್ಞಾನಸುಧಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಗಣಿತ ಮತ್ತು ಜೀವಶಾಸ್ತ್ರ ವಿಷಯದಲ್ಲಿ 100 ಅಂಕ ಗಳಿಸಿದ್ದಾನೆ. ತಂದೆ ತೋಟಪ್ಪ ಶೆಟ್ಟಿಮೈಸೂರಿನ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣದ ಉದ್ಯೋಗಿ ಮತ್ತು ತಾಯಿ ಶುಭ ಗೃಹಿಣಿ ಯಾಗಿದ್ದು, ಮೈಸೂರಿನಲ್ಲಿ ವಾಸವಿದ್ದಾರೆ.
ನಿಖಿತಾಗೆ 544 ಅಂಕ
ಪ್ರತಿನಿಧಿ ವರದಿ ಮೈಸೂರು
ಮೈಸೂರಿನ ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆರ್.ನಿಖಿತಾ ದ್ವಿತೀಯ ಪಿಯುಸಿ (ಕಲಾ ವಿಭಾಗ) ಪರೀಕ್ಷೆಯಲ್ಲಿ 600 ಅಂಕಗಳಿಗೆ 544 (ಶೇ.91) ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚನ್ನವಡೆಯನಪುರ ಗ್ರಾಮದ ರೈತ ರಾಜೇಶ್ ಅವರ ಪುತ್ರಿ.
ಕೆಪಿಎಸ್ ಶಾಲೆಯಲ್ಲಿ 55 ಜನ ಉತ್ತೀರ್ಣ
ಮೂಗೂರು : ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಕೆ .ಪಿ. ಎಸ್ ಕಾಲೇಜಿಗೆ ಶೇ . 85 ಪಲಿತಾಂಶ ಲಭಿಸಿದೆ. ಹಾಜರಾದ ಒಟ್ಟು 65 ವಿದ್ಯಾರ್ಥಿಗಳಲ್ಲಿ 55 ಜನ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗ ದಿಂದ 19 ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ವಿಬಾಗದಿಂದ 21 ವಿದ್ಯಾರ್ಥಿಗಳು ಮತ್ತು ಕಲಾ ವಿಭಾಗದಿಂದ 15 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಎಲ್ ಸಂಜನಾ 513 ಅಂಕಗಳು ಎಸ್.ಉಷಾ 510 ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಪ್ರಥಮ ದರ್ಜೆಯಲ್ಲಿ 35 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ 11 ತೃತೀಯ ದರ್ಜೆಯಲ್ಲಿ 7 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಪ್ರಾಂಶುಪಾಲ ಬಿ ಮಹೇಶ ತಿಳಿಸಿದ್ದಾರೆ.
ಎಂ.ಯಶಸ್ವಿನಿಗೆ ಶೇ.98 ಅಂಕ
ಮೈಸೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮರಿಮಲ್ಲಪ್ಪ ಪದವಿಪೂರ್ವ ಕಾಲೇಜಿನ ಎಂ.ಯಶಸ್ವಿನಿ ವಿಜ್ಞಾನ ವಿಭಾಗದಲ್ಲಿ ಶೇ.98 ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರಲ್ಲದೇ, 2ನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಭೌತಶಾಸ್ತ್ರ, ಜೀವಶಾಸ್ತ್ರದಲ್ಲಿ 100, ಸಂಸ್ಕೃತ, ರಸಾಯನಶಾಸ್ತ್ರ, ಗಣಿತದಲ್ಲಿ 99 ಹಾಗೂ ಇಂಗ್ಲಿಷ್ನಲ್ಲಿ 92 ಅಂಕಗಳನ್ನು ಗಳಿಸಿದ್ದಾರೆ. ಈಕೆ ಕೆ.ಆರ್. ಮೊಹಲ್ಲಾ ನಿವಾಸಿ ವಿ.ಮಂಜುನಾಥ್, ರೇಖಾ ದಂಪತಿ ಪುತ್ರಿ.