ಚನ್ನರಾಯಪಟ್ಟಣ: ತಾಲೂಕಿನ ಶ್ರೀರಾಮ್ ಫೈನಾನ್ಸ್ ವತಿಯಿಂದ ತಾಲೂಕಿನ 500 ಜನ ಬಡ ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರಿಗೂ ತಲಾ ಮೂರು ಸಾವಿರದಂತೆ ಸ್ಕಾಲರ್ಶಿಪ್ ಅನ್ನು ವಿತರಿಸುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆ ಮಾಡಿದ ಶಾಸಕ ಸಿಎನ್ ಬಾಲಕೃಷ್ಣ ಅವರು ಮಾತನಾಡಿ ಶ್ರೀರಾಮ್ ಫೈನಾನ್ಸ್ ರವರು ಬಡವರ ಪರವಾಗಿ ಮಾದರಿ ಕಾರ್ಯಗಳನ್ನು ಮಾಡುತ್ತಿರುವುದು ತುಂಬಾ ಶ್ಲಾಘನೀಯ ಎಂದರು, ಮುಂದಿನ ದಿನಗಳನ್ನು ಸಹ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡುವಂತಹ ಯೋಜನೆಗಳನ್ನು ಜಾರಿ ಮಾಡಲಿ ಎಂದು ಶುಭ ಹಾರೈಸಿದರು. ಇನ್ನು ಚನ್ನರಾಯಪಟ್ಟಣ ತಾಲೂಕಿನಲ್ಲಿ ಕಳೆದ ವರ್ಷ 100 ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ವೇತನಗಳನ್ನು ವಿತರಣೆಯನ್ನು ಮಾಡಲಾಗಿತ್ತು. ಈ ವರ್ಷ ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಲಾ 3 ಸಾವಿರದಂತೆ ಹದಿನೈದು ಲಕ್ಷ ರೂಪಾಯಿಗಳನ್ನು ಸ್ಕಾಲರ್ಶಿಪ್ ರೂಪದಲ್ಲಿ ಪ್ರೋತ್ಸಾಹ ಧನ ನೀಡುತ್ತಿರುವುದು ಅಭಿನಂದನೆಯ ಕೆಲಸವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು, ಶ್ರೀರಾಮ್ ಫೈನಾನ್ಸ್ ಬಡವರಿಗೆ ಸಾಲ ಸೌಲಭ್ಯ ನೀಡುವ ಜೊತೆಗೆ ಅವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನದ ರೂಪದಲ್ಲಿ 8ನೇ ತರಗತಿಯಿಂದ 12ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಬಡವಿದ್ಯಾರ್ಥಿಗಳಿಗೆ ತಲಾ ಮೂರು ಸಾವಿರ ರೂಪಾಯಿಗಳನ್ನು ಪ್ರೋತ್ಸಾಹ ಧನ ನೀಡುತ್ತಾ ಬಂದಿರುತ್ತಾರೆ. ಇವರು ಸೇವೆಯು ನಮ್ಮ ತಾಲೂಕಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ದೊರೆಯಲಿ ಎಂದು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಶ್ರವಣಬೆಳಗೋಳ ಕ್ಷೇತ್ರದ ಶಾಸಕರಾದ ಸಿಎನ್ ಬಾಲಕೃಷ್ಣ, ಬಿ ಇ ಓ ದೀಪ, ಕ್ಲಸ್ಟರ್ ಹೆಡ್ ಶ್ರೀರಾಮ್ ಫೈನಾನ್ಸ್ ಹಾಸನ ಅರವಿಂದ್, ಪ್ರಾದೇಶಿಕ ಆರ್ಥಿಕ ಸಲಹೇಗಾರ ಸಂಜಯ್ ಕುಮಾರ್ ,ಚನ್ನರಾಯಪಟ್ಟಣ ಬ್ರಾಂಚ್ ಶ್ರೀರಾಮ್ ಫೈನಾನ್ಸ್ ಕಲೆಕ್ಷನ್ ಮ್ಯಾನೇಜರ್ ಕೆ ಬಿ ಪವನ್ ಕುಮಾರ್, ಪಿ.ಆ ರ್ ದನೇಂದ್ರ, ಚನ್ನರಾಯಪಟ್ಟಣ ಬ್ರಾಂಚ್ ಮ್ಯಾನೇಜರ್ ಕೆ ಸಿ ಕಿರಣ್ ಕುಮಾರ್, ಆರ್ ಟಿ ಎಲ್ ಆರ್ ಪಾಲಾಕ್ಷ, ಸುನಿಲ್ ಕುಮಾರ್, ಶ್ರೀರಾಮ್ ಫೈನಾನ್ಸ್ ಸಿಬ್ಬಂದಿಗಳು ಸೇರಿದಂತೆ ಇತರರಿದ್ದರು.
![](https://www.prathinidhi.net/wp-content/uploads/2024/02/JPG-11.jpg)