ಕೆ.ಎಂ.ದೊಡ್ಡಿ: ಮಾಜಿ ಸಂಸದ ರೈತ ಹೋರಾಟಗಾರ ದಿವಂಗತ ಜಿ. ಮಾದೇಗೌಡ ಅವರು ಕಾವೇರಿ ಚಳುವಳಿ ಸೇರಿದಂತೆ ರೈತಪರ ಚಳುವಳಿಗಳನ್ನು ಗಟ್ಟಿ ದ್ವನಿಯಲ್ಲಿ ಹೋರಾಟ ಮಾಡುತ್ತ ಆಳುವ ಸರಕಾರಗಳಿಗೆ ಚಾಟಿ ಬೀಸುತಿದ್ದು ಅವರ ನಂತರ ಹೋರಾಟಗಳು ಸತ್ವ ಕಳೆದು ಕೊಳ್ಳುತ್ತಿವೆ ಎಂದು ಮಾಜಿ ಶಾಸಕಿ ಬಿ.ಮಲ್ಲಾಜಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಭಾರತೀಎಜುಕೇಷನ್ ಟ್ರಸ್ಟ್ನ ಆಡಳಿತ ಕಚೇರಿಗೆ ಆಗಮಿಸಿದ ವೇಳೆ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರನ್ನು ಬೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಾಮಾನದ ಕುರಿತು ಚರ್ಚೆ ನಡೆಸಿದ ಬಳಿಕ ಅಭಿನಂಧನೆ ಸ್ವೀಕರಿಸಿದರು.
ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಮಾಜಿ ಶಾಸಕಿ ಮಲ್ಲಾಜಮ್ಮ, ಜಿಲ್ಲೆಯ ಹಿರಿಯ ಮುತ್ಸದಿ ರಾಜಕಾರಣಿಗಳಾದ ಕೆ.ವಿ.ಶಂಕರಗೌಡ, ಜಿ.ಮಾದೇಗೌಡ, ಎಚ್.ಕೆ.ವೀರಣ್ಣಗೌಡ, ಎಸ್.ಎಂ.ಕೃಷ್ಣ, ಚೌಡಯ್ಯ ಸೇರಿದಂತೆ ಹಲವಾರು ರಾಜಕಾರಣಿಗಳು ಜಿಲ್ಲೆ ಮತ್ತು ರಾಜ್ಯದ ಅಭಿವೃದ್ಧಿ ಕುರಿತಂತೆ ತಮ್ಮದೇ ಶೈಲಿಯಲ್ಲಿ ರಾಜಕಾರಣ ಮಾಡುತ್ತಾ ಬಂದಿದ್ದರು ಎಂದು ತಮ್ಮ ರಾಜಕೀಯ ದಿನಗಳನ್ನು ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಎಂ.ನಂಜೇಗೌಡ, ಕಾವೇರಿ ನೀರಾವರಿ ನಿಗಮದ ನಿವೃತ್ತ ಕಾರ್ಯಪಾಲಕ ಅಭಿಯಂತರ ಬಸವರಾಜೇಗೌಡ, ತಾ.ಪಂ ಮಾಜಿ ಸದಸ್ಯರಾದ ಬಿ.ಗಿರೀಶ್, ಕಾಡುಕೊತ್ತನಹಳ್ಳಿ ಕೆಂಪರಾಜು, ಮುಖಮಡರಾದ ಆರ್.ಸಿದ್ದಪ್ಪ, ಕಾರ್ಕಹಳ್ಳಿ ಸ್ವರೂಪ್ ಚಂದ್ರ, ವಿನಯ್ ಹೊನ್ನೇಗೌಡ, ಹಾಗಲಹಳ್ಳಿ ಪುಟ್ಟಸ್ವಾಮಿಗೌಡ, ಮಣಿಗೆರೆ ಕೆ. ಕಬ್ಬಾಳಯ್ಯ, ಚಂದೂಪುರ ಪ್ರಭು, ಬೊಪ್ಪಸಮುದ್ರದ ಶ್ರೀಕಂಠ ಸೇರಿದಂತೆ ಹಲವರಿದ್ದರು.
ಫೋಟೋ ಶಿರ್ಷಿಕೆ
೨ಏಒಆ-೧ ಭಾರತೀನಗರದ ಭಾರತೀಎಜುಕೇಷನ್ ಟ್ರಸ್ಟ್ನ ಆಡಳಿತ ಕಚೇರಿಗೆ ಆಗಮಿಸಿದ ವೇಳೆ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರು ಮಾಜಿ ಶಾಸಕಿ ಮಲ್ಲಾಜಮ್ಮ ಅವರನ್ನು ಅಭಿನಂಧಸಿದರು.