ಮೈಸೂರು, ಫೆಬ್ರವರಿ 12, 2026 : ಜಿಲ್ಲೆಯ ಇಲವಾಲ ಸಮೀಪದ ಮಥುರಾ ನಗರದಲ್ಲಿ ಶಾಲಾ ಬ್ಯಾಗ್ ಒಂದರಲ್ಲಿ ನಾಗರಹಾವು ಪತ್ತೆಯಾಗುವ ಮೂಲಕ ಪೋಷಕರು ಹಾಗೂ ಸ್ಥಳೀಯರು ಬೆಚ್ಚಿಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಶಾಲೆಯಿಂದ ಮನೆಗೆ ಬಂದಿದ್ದ ಮಗುವಿನ ಬ್ಯಾಗ್ನಲ್ಲಿ ನಾಗರಹಾವು ಅವಿತು ಕುಳಿತಿತ್ತು. ಅಕಸ್ಮಾತ್ತಾಗಿ ಪೋಷಕರು ಬ್ಯಾಗ್ ಗಮನಿಸಿದಾಗ ಹಾವು ಇರುವುದು ಪತ್ತೆಯಾಗಿದೆ, ಇದರಿಂದ ಮನೆಯವರು ಗಾಬರಿಗೊಂಡಿದ್ದಾರೆ. ಕೂಡಲೇ ಅವರು ಖ್ಯಾತ ಉರಗ ಸಂರಕ್ಷಕ ಸ್ನೇಕ್ ಶಾಮ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಸ್ನೇಕ್ ಶಾಮ್ ಅವರು ಬ್ಯಾಗ್ನಲ್ಲಿದ್ದ ನಾಗರಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿದ್ದಾರೆ. ಈ ಮೂಲಕ ಅತಂಕದಲ್ಲಿದ್ದ ಕುಟುಂಬಸ್ಥರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಮಕ್ಕಳ ಶಾಲಾ ಬ್ಯಾಗ್ಗಳನ್ನು ಎಲ್ಲೆಂದರಲ್ಲಿ ಇಡದಂತೆ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ರಕ್ಷಿಸಲಾದ ನಾಗರಹಾವನ್ನು ನಂತರ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡಲಾಗಿದೆ.
