ಪ್ರತಿನಿಧಿ ವರದಿ ಕೊಳ್ಳೇಗಾಲ
ಮಾಜಿ ಸಚಿವ ಎನ್.ಮಹೇಶ್ ಅವರ ಪತ್ನಿ ದಿ.ವಿಜಯ ಅವರ ಜನ್ಮದಿನದ ಅಂಗವಾಗಿ ಎನ್.ಮಹೇಶ್ ಅವರ ಸ್ವಗ್ರಾಮ ಶಂಕನಪುರದ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಬಾಪುನಗರದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗುರುವಾರ ಎನ್.ಮಹೇಶ್ ಅಭಿಮಾನಿ ಬಳಗ ನೋಟ್ ಪುಸ್ತಕ ಹಾಗೂ ಸಾಮಾಗ್ರಿಗಳನ್ನು ವಿತರಿಸಿತು.
10ಕ್ಕೂ ಹೆಚ್ಚು ವಿಶೇಸಚೇತನರು ಮತ್ತು ಅನಾರೋಗ್ಯ ಪೀಡಿತರಿಗೆ ಎನ್.ಮಹೇಶ್ ಅಭಿಮಾನಿ ಬಳಗದ ನರೇಂದ್ರಕುಮಾರ್ ಅವರು ಧನ ಸಹಾಯ ಮಾಡಿ ಮಾತನಾಡಿ, ದಿ.ವಿಜಯ ಅವರು ಸಮಾಜದ ಪೂರ್ವಿಕರ ಬಗ್ಗೆ ಸಂಶೋಧನೆ ನಡೆಸಿ, ಅನೇಕ ಪುಸ್ತಕಗಳನ್ನು ಬರೆಯುವ ಮೂಲಕ ಲೇಖಕಿಯಾಗಿ ಗುರುತಿಸಿಕೊಂಡಿದ್ದರು. ಅವರ ಮಾರ್ಗದರ್ಶನದಲ್ಲಿ ಅನೇಕರು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಎನ್.ಮಹೇಶ್ ಅಭಿಮಾನಿ ಬಳಗದ ಎಸ್.ನಾಗರಾಜು, ಸಂಪಗಿ, ಶಂಕನಪುರ ಜಗದೀಶ್, ಯಜಮಾನ್ ಮೋಹನ್, ಪರಶಿವ, ದೊಡ್ಡ ಸಿದ್ದಯ್ಯ, ಮಲ್ಲಯ್ಯ, ಶಂಕನಪುರ ಶಾಲೆಯ ಮುಖ್ಯಶಿಕ್ಷಕ ಪ್ರಭುಸ್ವಾಮಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಪುಷ್ಪಲತಾ ಸೇರಿದಂತೆ ಇತರರು ಇದ್ದರು.
16ಕೆಜಿಎಲ್-3
ಫೋಟೋ ಶೀರ್ಷಿಕೆ:
ಕೊಳ್ಳೇಗಾಲದ ಶಂಕನಪುರ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಗುರುವಾರ ಎನ್.ಮಹೇಶ್ ಅಭಿಮಾನಿ ಬಳಗ ದಿ.ವಿಜಯ ಅವರ ಜನ್ಮದಿನದ ಅಂಗವಾಗಿ ನೋಟ್ ಪುಸ್ತಕ ಹಾಗೂ ಸಾಮಾಗ್ರಿಗಳನ್ನು ವಿತರಿಸಿತು.