ಪ್ರತಿನಿಧಿ ವರದಿ ಮದ್ದೂರು
ಕನ್ನಡದಲ್ಲಿ ಪ್ರಥಮ ಬಾರಿಗೆ ಐ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದ ಕೆ.ಶಿವರಾಮ್ ರವರ ಅಗಲಿಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಅಭಿಪ್ರಾಯ ಪಟ್ಟರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕೆ.ಶಿವರಾಮ್ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನುಡಿನಮನ: ಕೆ.ಶಿವರಾಮ್ ರವರ ನುಡಿನಮನ ಕಾರ್ಯಕ್ರಮದ ವೇಳೆ ವಿವಿಧ ಕಲಾ ತಂಡಗಳು ಬಾಗವಹಿಸಿ ಶಿವರಾಮ್ ರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶ್ರದ್ದಾಂಜಲಿ ಸಲ್ಲಿಸಿದರು.
ಗಾ.ಪಂ.ಸದಸ್ಯರಾದ ರವಿಕುಮಾರ್, ಮಾದೇಶ್, ಅಗರಲಿಂಗನದೊಡ್ಡಿ ಶಂಕರ್, ಮುಖಂಡರಾದ ನಿಡಘಟ್ಟ ದೊರೆಸ್ವಾಮಿ, ಪ್ರಸನ್ನ, ಅಂಬರೀಷ್, ಮುತ್ತಯ್ಯ, ತಿಮ್ಮಯ್ಯ, ಕರಡಕೆರೆ ಯೋಗೇಶ್, ಈಶ್ವರ್, ಅರುವನಹಳ್ಳಿ ಸಿದ್ದರಾಜು, ಪುಟ್ಟಯ್ಯ, ನಿತ್ಯಾನಂದ, ಸುರೇಶ್, ಪ್ರಕಾಶ್, ಬಿ.ಪಿ.ಗಿರೀಶ್, ಸತ್ಯಪ್ಪ, ಸಣ್ಣಪ್ಪ ಇದ್ದರು.
ಪೋಟೋ
ಮದ್ದೂರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕೆ.ಶಿವರಾಮ್ ರವರ ನುಡಿನಮನ ಕಾರ್ಯಕ್ರದ ವೇಳೆ ಶಿವರಾಮ್ ರವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಕಂಠಿ ಸುರೇಶ್, ರವಿಕುಮಾರ್, ಮಾದೇಶ್, ಅಗರಲಿಂಗನದೊಡ್ಡಿ ಶಂಕರ್, ನಿಡಘಟ್ಟ ದೊರೆಸ್ವಾಮಿ, ಪ್ರಸನ್ನ, ಅಂಬರೀಷ್, ಮುತ್ತಯ್ಯ, ತಿಮ್ಮಯ್ಯ, ಕರಡಕೆರೆ ಯೋಗೇಶ್, ಈಶ್ವರ್, ಅರುವನಹಳ್ಳಿ ಸಿದ್ದರಾಜು ಇದ್ದರು.