ಗುಂಡ್ಲುಪೇಟೆ : ಬೇಗೂರಿನ ಕಾರ್ಮಿಕರ ಸಿಐಟಿಯು ಸಂಘಟನೆಯ ಬೇಗೂರಿನ ಸಂಘದ ಕಚೇರಿಯಲ್ಲಿ ಮೇ 1ರ ಕಾರ್ಮಿಕ ದಿನಾಚರಣೆಯ ಆಚರಣೆಯ ಬಗ್ಗೆ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಸೇರಿದ ಸಂಘದ ಸದಸ್ಯರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಂಘದ ಎಲ್ಲ ಕಾರ್ಮಿಕರು ಸೇರಿ ಕಳೆದ ವರ್ಷ ಎಸ್ ಎಸ್ ಎಲ್ ಸಿ ಯಲ್ಲಿ ಗರಿಷ್ಠ ಅಂಕವನ್ನು ಪಡೆದ ಸಂಘದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಬಹುಮಾನವನ್ನು ಕೊಡಬೇಕೆಂದು ತೀರ್ಮಾನಿಸಲಾಯಿತು. ಜತೆಗೆ ಆ ದಿನ ಸಂಘದ ಕಚೇರಿಯಲ್ಲಿ ಬಾವುಟವನ್ನು ಹಾರಿಸಿದ ನಂತರ ಎಲ್ಲರಿಗೂ ಸಿಹಿ ವಿತರಣೆ ಹಾಗೂ ತಿಂಡಿಯ ವ್ಯವಸ್ಥೆಯನ್ನು ಮಾಡಬೇಕೆಂದು ತೀರ್ಮಾನಿಸಲಾಯಿತು. ಚುನಾವಣಾ ನೀತಿ ಸಂಹಿತೆ ಜಾರಿಯಿರುವುದರಿಂದ ಕೆಲವೊಂದು ಕಾರ್ಯಕ್ರಮಗಳನ್ನು ಕೈಬಿಡಲಾಯಿತು.
ಸಿ ಐ ಟಿ ಯು ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ಸಿ ಜಿ ಚಂದ್ರಶೇಖರ್ ಮೂರ್ತಿ ರವರು, ನಂಜುಂಡಸ್ವಾಮಿ, ಸುರೇಶ,ಮಹದೇವಪ್ಪ, ಪರಶುರಾಮ, ಸೋಮಪ್ಪ, ಕೃಷ್ಣಮೂರ್ತಿ, ಮಹೇಶ್,ಮಹದೇವಸ್ವಾಮಿ, ಶಿವಣ್ಣ, ಹಾಗೂ ಕಂಪ್ಯೂಟರ್ ಸೆಂಟರ್ ಮಾಲೀಕರಾದ ವೆಂಕಟರಾಜು ಹಾಜರಿದ್ದರು.
ಫೋಟೋ ಇದೆ