ದೇವನಹಳ್ಳಿ: ಅಂತಾರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನೆಹರು ಯುವ ಕೇಂದ್ರ ಬೆಂಗಳೂರು, ಗ್ರಾಮಾಂತರ ಜಿಲ್ಲೆ ಪರಿವರ್ತನಾ ಕಲಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಾರಿ ಶಕ್ತಿ ಫಿಟ್ನೆಸ್ ರನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ದೇವನಹಳ್ಳಿ ಟಿ ಅಗ್ರಹಾರದ ಬಾಟಮ್ಮ ವೃತ್ತದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಉದಯ ಟಿ.ವಿ.ಜನನಿ ಧಾರಾವಾಹಿ ಬರಹಗಾರ್ತಿ ಶ್ರೀದೇವಿ ಮಂಜುನಾಥ್ ಅವರು ಉದ್ಘಾಟಿಸಿದರು.
ಬಳಿಕ ಮಾತಾನಾಡಿ, ನಡಿಗೆ ಮತ್ತು ಓಟದೊಂದಿಗೆ ಉತ್ತಮ ಗಾಳಿ ಸೇವಿಸುವುದರಿಂದ ದೈಹಿಕ ಮತ್ತು ಮಾನಸಿಕ ಸದೃಢರಾಗಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಪ್ರತಿನಿತ್ಯದ ಉಲ್ಲಾಸದ ಬದುಕಿಗೆ ನಾಂದಿ ಹಾಡುವುದರ ಜತೆಗೆ ಸದೃಢ ಆರೋಗ್ಯವನ್ನು ಹೊಂದಲು ಪ್ರತಿನಿತ್ಯ ವ್ಯಾಯಾಮ ಮಾಡುವುದು ಅವಶ್ಯಕ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಓಟ ಸ್ಪರ್ಧೆದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಿಳಾ ಜಾತ್ಯತೀತ ಮಹಿಳಾ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಕನ್ನಡ ರತ್ನ, ಪರಿವರ್ತನಾ ಕಲಾ ಸಂಸ್ಥೆಯ ಕಾರ್ಯದರ್ಶಿ, ನೃತ್ಯ ಸಂಯೋಜಕಿ ದೀಪಿಕಾ ದೇವರಾಜ್, ನೆಹರು ಯುವ ಕೇಂದ್ರದ ಕಾರ್ಯಕ್ರಮ ವ್ಯವಸ್ಥಾಪಕಿ ಸುಂದರಮ್ಮ, ದೇವನಹಳ್ಳಿ ಶಿಲ್ಪಕಲಾ ಶಾಲೆಯ ವ್ಯವಸ್ಥಾಪಕಿ ಸಾರಿಕಾ ಮಧುಸೂದನ್, ಕೌಶಲ್ಯ ಅಭಿವೃದ್ಧಿ ಇಲಾಖೆಯ ತರಬೇತಿದಾರರಾದ ಪ್ರಿಯಾಂಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಅರುಣ್ ಕುಮಾರಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಚನ್ನಹಳ್ಳಿ ನಾಗಮ್ಮ, ಚನ್ನರಾಯಪಟ್ಟಣ ಮಂಜುಳಾ, ದಾದಿ ಸುನಿತಾ, ತೆಲ್ಲೋಹಳ್ಳಿ ನಂದಿನಿ ವಿಜಯ್ ಕುಮಾರ್, ವೆಂಕಟಗಿರಿಕೋಟೆ ಪಾರುರೆಡ್ಡಿ ಹಾಜರಿದ್ದರು.