ಮೈಸೂರು, ಡಿಸೆಂಬರ್ 2, 2025 : ಯಾವುದೇ ಅಹಿತಕರ ಘಟನೆ ನಡೆಯದ ರೀತಿಯಲ್ಲಿ ಶಾಂತಿಯುತವಾಗಿ ಹನುಮ ಮಾಲಾ ಸಂಕೀರ್ತನ ಯಾತ್ರೆ ಮಾಡುವ ಉದ್ಧೇಶ ಹೊಂದಿದ್ದು, ನಾಳೆ ನಡೆಯುವ ಹನುಮ ಮಾಲಾ ಸಂಕೀರ್ತನ ಯಾತ್ರೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚಿನ ಹನುಮ ಮಾಲಾಧಾರಿಗಳು ಭಾಗಿಯಾಗುವ ನಿರೀಕ್ಷೆಯಿದೆ ಎಂದು ಶ್ರೀ ಮೂಡಲ ಬಾಗಿಲು ಹನುಮ ಮಾಲ ಸಮಿತಿ ಅಧ್ಯಕ್ಷ ಲೋಹಿತ್ ವಿ ಅರಸ್ ತಿಳಿಸಿದ್ದಾರೆ.
ನಾಳೆ ಶ್ರೀ ರಂಗಪಟ್ಟಣದಲ್ಲಿ ಹನುಮ ಮಾಲಾ ಸಂಕೀರ್ತನ ಯಾತ್ರೆ ಹಿನ್ನೆಲೆ ಮೈಸೂರಿನ ಪತ್ರಕರ್ತರ ಭವನದಲ್ಲಿಂದು ಶ್ರೀ ಮೂಡಲ ಬಾಗಿಲು ಹನುಮ ಸಂಕಲ್ಪ ಮಾಲೆ, ಹಿಂಧೂ ಜಾಗರಣಾ ವೇದಿಕೆ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ಲೋಹಿತ್ ವಿ, ನಾಳೆ ಬೆಳಗ್ಗೆ 11 ಗಂಟೆಗೆ ನಿಮಿಷಾಂಬ ದೇವಾಲಯದಿಂದ ಆರಂಭಗೊಳ್ಳುವ ಹನುಮ ಮಾಲಾ ಸಂಕೀರ್ತನ ಯಾತ್ರೆಯು ರಂಗನಾಥಸ್ವಾಮಿ ದೇವಸ್ಥಾನದ ಅವರಣದಲ್ಲಿ ಮುಕ್ತಾಯಗೊಳ್ಳಲಿದೆ. ಹಾಗೂ ದೇವಾಲಯದ ಸನಿಹದ ಮೈದಾನದಲ್ಲಿಯೇ ಹನುಮ ಮಾಲಾಧಾರಿಗಳು ಮಾಲಾ ವಿಸರ್ಜನೆ ಮಾಡಲಿದ್ದಾರೆ ಎಂದು ತಿಳಿಸಿದರು.
ಮಂಡ್ಯ, ಮೈಸೂರು, ಹಾಸನ ಚಾಮರಾಜನಗರ, ರಾಮನಗರದಿಂದ ಹನುಮ ಮಾಲಾ ಸಂಕೀರ್ತನ ಯಾತ್ರೆಗೆ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಅಯೋಧ್ಯೆ ಮಾದರಿಯಲ್ಲಿ ಶ್ರೀರಂಗಪಟ್ಟಣದಲ್ಲೂ ಹನುಮ ಮಂದಿರ ಕಟ್ಟುವುದೇ ನಮ್ಮ ಧ್ಯೇಯ. ಹಾಗು ಯಾವುದೇ ಅಹಿತಕರ ಘಟನೆ ನಡೆಯದ ರೀತಿಯಲ್ಲಿ ಶಾಂತಿಯುತವಾಗಿ ಹನುಮ ಮಾಲಾ ಸಂಕೀರ್ತನ ಯಾತ್ರೆ ಮಾಡುವ ಉದ್ಧೇಶ ಹೊಂದಿದ್ದೇವೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಬಾಲರಾಜ್, ಸೃಜನ್ ಗೌಡ, ರಂಗಸ್ವಾಮಿ, ಲಕ್ಷ್ಮಿ ನಾರಾಯಣ್ ಉಪಸ್ಥಿತರಿದ್ದರು.
