ಪ್ರತಿನಿಧಿ ವರದಿ ಕುಶಾಲನಗರ
ನೂತನವಾಗಿ ಆಯ್ಕೆಯಾದ ಹಾರಂಗಿ ನೀರಾವರಿ ಯೋಜನೆಯ ಸಲಹಾ ಸಮಿತಿ ಸದಸ್ಯರಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರಿಗೆ ಕೃತಜ್ಞತೆ ಸಮರ್ಪಿಸಲಾಯಿತು.
ಶಾಸಕರಿಂದ ತಮ್ಮ ಕಾರ್ಯವ್ಯಾಪ್ತಿ ಹಾಗೂ ಸೂಕ್ತ ಮಾರ್ಗದರ್ಶನವನ್ನು ಪಡೆದ ಹಾರಂಗಿ ನೀರಾವರಿ ಯೋಜನೆಯ ಸಲಹಾ ಸಮಿತಿ ಸದಸ್ಯರು, ಶಾಸಕರ ಸಹಕಾರದೊಂದಿಗೆ ಹಾರಂಗಿ ನೀರಾವರಿ ಯೋಜನೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ನಂತರ ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭ ಹಾರಂಗಿ ನೀರಾವರಿ ಯೋಜನೆಯ ಸಲಹಾ ಸಮಿತಿ ಸದಸ್ಯರಾದ ಎಂ.ಮುಸ್ತಫಾ, ಕಣ್ಣಂಗಾಲದ ಕೆ.ಎಸ್.ಗೋಪಾಲಕೃಷ್ಣ, ಹಾರಂಗಿಯ ಸುರೇಶ್ ಬಾಬು, ಹುದಗೂರಿನ ಉಪಾ ಪ್ರಭಾಕರ್, ತೊರೆನೂರಿನ ಟಿ.ಕೆ.ಪ್ರಭಾಕರ್, ನಾಕೂರು ಶಿರಂಗಾಲದ ಕುಜ್ಞಿಕೃಷ್ಣ, ಐಗೂರಿನ ಎ.ಪಿ.ಸುಬ್ಬಯ್ಯ ಇದ್ದರು.