ಪ್ರತಿನಿಧಿ ವರದಿ ಕೊಳ್ಳೇಗಾಲ
ಪಟ್ಟಣದ 1ನೇ ವಾರ್ಡಿಗೆ ಸೇರಿದ ಜಿ.ಪಿ.ಮಲ್ಲಪ್ಪಪುರಂ ಬಡಾವಣೆಗೆ ಹೊಂದಿಕೊAಡಿರುವ ನೀರಾವರಿ ಇಲಾಖೆಯ ತೆರೆದ ನಾಲೆಗೆ ಕೆಲ ನಿವಾಸಿಗಳು ಯುಜಿಡಿ(ಒಳ ಚರಂಡಿ ನೀರು) ಪೈಪ್ ಮೂಲಕ ಶೌಚಗೃಹದ ಪೈಪ್ ಅಳವಡಿಸಿ ಅನೈರ್ಮಲ್ಯ ಉಂಟು ಮಾಡುತ್ತಿರುವುದನ್ನು ತಡೆಯುವಂತೆ ನಗರಸಭಾ ಪೌರಾಯುಕ್ತರನ್ನು ನಿವಾಸಿ ಎಸ್.ಸತೀಶ್ ಕುಮಾರ್ ಆಗ್ರಹಿಸಿದ್ದಾರೆ.
ಶ್ರೀ ಬಸವೇಶ್ವರ ರೈಸ್ ಮಿಲ್ ಎದುರಿನ ಮನೆಯಲ್ಲಿ ಖಾಯಂ ನಿವಾಸಿಯಾಗಿ ವಾಸಿಯಾಗಿರುವ ಲೇಟ್ ಎಂ.ಸಣ್ಣಮಲ್ಲಯ್ಯ ಅವರ ಪುತ್ರ ಎಸ್.ಸತೀಶ್ ಕುಮಾರ್ಕೀ ಸಂಬಂಧ 2023 ಫೆ.23 ರಂದು ನಗರಸಭೆಗೆ ಲಿಖಿತ ದೂರು ನೀಡಿದ್ದಾರೆ. ಆದರೂ, ಈ ಬಗ್ಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳದ ಹಿನ್ನೆಲೆ ಸೋಮವಾರ 2ನೇ ದೂರನ್ನು ನಗರಸಭಾ ಕಚೇರಿಗೆ ನೀಡಿದ್ದು, ಈ ಕುರಿತು ತುರ್ತು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
ದೂರಿನಲ್ಲಿ ಅವರು, ಒಂದೂವರೆ ವರ್ಷದಿಂದ ನಮ್ಮ ಮನೆ ಪಕ್ಕದಲ್ಲಿ ಹರಿಯುತ್ತಿರುವ ಕೃಷಿಗೆ ಬಳಕೆಯಾಗುತ್ತಿರುವ ನೀರಿನ ಕಾಲುವೆಗೆ ಒಳ ಚರಂಡಿ ನೀರನ್ನು ಪೈಪಿನ ಮುಖಾಂತರ ಬಿಟ್ಟಿದ್ದು, ಅದರಿಂದ ತುಂಬಾ ದುರ್ವಾಸನೆ ಬರುತ್ತಿದೆ. ಹಾಗಾಗಿ, ಅಲ್ಲಿ ವಾಸ ಮಾಡಲು ಕಷ್ಟಕರವಾಗಿದ್ದು, ಹತ್ತಿರದಲ್ಲೇ ತಾತ್ಕಾಲಿಕ ಬಸ್ ನಿಲ್ದಾಣ ಇರುವುದರಿಂದ ಸಾರ್ವಜನಿಕರಿಗೂ ಈ ದುರ್ವಾಸನೆಯಿಂದ ತುಂಬ ತೊಂದರೆಯಾಗಿರುತ್ತದೆ.
ಈ ವಿಷಯವನ್ನು ಸಂಬಂಧಪಟ್ಟ ನಗರಸಭಾ ಸದಸ್ಯರ ಗನಮಕ್ಕೂ ಸಹ ತರಲಾಗಿದೆ. ಆದ್ದರಿಂದ ತಾವುಗಳು ದಯಮಾಡಿ ಕಾಲುವೆ ಹೂಳನ್ನು ತೆಗೆಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿಸಿಕೊಡಬೇಕಾಗಿ ಹಾಗೂ ಒಳ ಚರಂಡಿ ನೀರನ್ನು ಬಂದ್ ಮಾಡಿಸಬೇಕಾಗಿ ಈ ಮೂಲಕ ಪ್ರಾರ್ಥಿಸಿಕೊಳ್ಳುತ್ತೇವೆ ಎಂದು ಪೌರಾಯುಕ್ತ ಎ.ರಮೇಶ್ ಅವರಿಗೆ ಮನವಿ ಮಾಡಿದ್ದಾರೆ.
18ಕೆಜಿಎಲ್-1
ಫೋಟೋ ಶೀರ್ಷಿಕೆ:
ಕೊಳ್ಳೇಗಾಲದ ಜಿ.ಪಿ.ಮಲ್ಲಪ್ಪಪುರಂ ಬಡಾವಣೆಗೆ ಹೊಂದಿಕೊAಡಿರುವ ನೀರಾವರಿ ನಾಲೆಗೆ ನಿವಾಸಿಯೊಬ್ಬರು ಯುಜಿಡಿ(ಒಳ ಚರಂಡಿ ನೀರು) ಪೈಪ್ ಬಿಟ್ಟಿರುವ ಫೋಟೋ ಇದೆ.
ಇನ್ನೊಂದು ಚಿತ್ರದಲ್ಲಿ ನಗರಸಭಾ ಪೌರಾಯುಕ್ತರಿಗೆ ನಿವಾಸಿ ಎಸ್.ಸತೀಶ್ ಕುಮಾರ್ ನೀಡಿರುವ ಲಿಖಿತ ದೂರಿನ ಪ್ರತಿ ಇದೆ.