PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಗುಡ್ಡದ ಭೂತಕ್ಕೆ ದೇವರನಾಡು ತತ್ತರ..! ಸಾವಿನ ಸಂಖ್ಯೆ 157ಕ್ಕೆ ಏರಿಕೆ.. ಮೈಸೂರು ಜಿಲ್ಲಾಡಳಿತದಿಂದ ನೆರವಿಗೆ ಸಿದ್ಧತೆ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮುಖಪುಟ > ಗುಡ್ಡದ ಭೂತಕ್ಕೆ ದೇವರನಾಡು ತತ್ತರ..! ಸಾವಿನ ಸಂಖ್ಯೆ 157ಕ್ಕೆ ಏರಿಕೆ.. ಮೈಸೂರು ಜಿಲ್ಲಾಡಳಿತದಿಂದ ನೆರವಿಗೆ ಸಿದ್ಧತೆ
ಮುಖಪುಟಮೈಸೂರು ನಗರಸಮಗ್ರ

ಗುಡ್ಡದ ಭೂತಕ್ಕೆ ದೇವರನಾಡು ತತ್ತರ..! ಸಾವಿನ ಸಂಖ್ಯೆ 157ಕ್ಕೆ ಏರಿಕೆ.. ಮೈಸೂರು ಜಿಲ್ಲಾಡಳಿತದಿಂದ ನೆರವಿಗೆ ಸಿದ್ಧತೆ

Prathinidhi News
Last updated: July 31, 2024 1:23 pm
Prathinidhi News
Published July 31, 2024
Share
SHARE

ರಣಮಳೆ ಭೀಕರತೆಗೆ ಕೇರಳದ ವೈನಾಡು ಸಂಪೂರ್ಣ ನೆಲಸಮವಾಗಿದೆ. ಎಲ್ಲಿ ನೋಡಿದರೂ ನೀರು, ನೀರಿನಲ್ಲಿ ತೇಲಿಬರುತ್ತಿರುವ ಪಾರ್ಥೀವ ಶರೀರಗಳು ನೋಡುವವರ ಮನಕಲಕುತ್ತಿದೆ. ರಾತ್ರೋ ರಾತ್ರಿ ಹಠಾತ್ತನೆ ಕುಸಿದ ಬೆಟ್ಟಕ್ಕೆ ಇಡೀ ಊರಿಗೂರೇ ನೆಲಕಚ್ಚಿದೆ. ಮಂಗಳವಾರ ನಸುಕಿನ ಜಾವ ಕೇರಳದ ವೈನಾಡಿನ ಮುಂಡಕ್ಕೈ, ಚೂರಲ್ಮಾಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಭೂದೇವಿಯ ರುದ್ರನರ್ತನಕ್ಕೆ ನಲುಗಿ ಹೋಗಿವೆ. ಬಹುಶಃ ಇಲ್ಲಿ ಏನಾಗುತ್ತಿದೆ ಎಂದು ಕಣ್ತೆರೆದು ನೋಡಲು ಕೂಡ ಸಮಯಾವಕಾಶವನ್ನ ಭೂತಾಯಿ ನೀಡಿಲ್ಲ.

ವೈನಾಡಿನ ಭೂಕುಸಿತಕ್ಕೆ 4 ಗ್ರಾಮಗಳು ಸಂಪೂರ್ಣವಾಗಿ ನಾಶವಾಗಿವೆ. 400 ಕುಟುಂಬಗಳು ಸೇರಿದಂತೆ ಹಲವಾರು ವಲಸೆ ಕಾರ್ಮಿಕರು ಮಣ್ಣಿನಲ್ಲಿ ಹುದುಗಿಹೋಗಿರುವ ಬಗ್ಗೆ ಅಂದಾಜಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ವರುಣ ಅನುವು ಮಾಡಿಕೊಡುತ್ತಿಲ್ಲವಾದರೂ, ನೌಕಾಪಡೆ ಮತ್ತು ಎನ್‌ಡಿಆರ್‌ಎಫ್ ನ ರಕ್ಷಣಾ ತಂಡ, ಪೋಲೀಸ್‌ ಹಾಗೂ ಅರಣ್ಯ ಅಧಿಕಾರಿಗಳು ಪ್ರತಿಕೂಲ ಹವಾಮಾನದ ನಡುವೆ ಸಂತ್ರಸ್ತರನ್ನು ಹುಡುಕುವ ಕಾರ್ಯವನ್ನು 1000 ಕ್ಕೂ ಅಧಿಕ ಮಂದಿ ಮುಂದುವರೆಸಿದ್ದಾರೆ. ಈವರೆಗೂ 146 ಮೃತದೇಹಗಳನ್ನ ಹೊರತೆಗೆಯಲಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. 128 ಮಂದಿ ಗಾಯಗೊಂಡವರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗಳಿಗೆ ಏರ್‌ ಲಿಫ್ಟ್‌ ಮಾಡಲಾಗಿದೆ.

ಮೈಸೂರು ಜಿಲ್ಲಾಡಳಿತದಿಂದ ನೆರವಿಗೆ ಸಿದ್ಧತೆ!

- ಜಾಹೀರಾತು -

ಕೇರಳದ ವಯನಾಡಿನಲ್ಲಿ ಭೂ ಕುಸಿತದ ತೀವ್ರತೆ ಬಹಳವಾಗಿದ್ದು, ಇಲ್ಲಿ ಕಾಣೆಯಾಗಿರುವ ರಾಜ್ಯದ ಜನರ ಸಹಾಯಕ್ಕಾಗಿ ಮೈಸೂರು ಜಿಲ್ಲಾಡಳಿತ ಸಹಾಯವಾಣಿ ತೆರೆದಿದೆ. ಅಲ್ಲದೆ ಜಿಲ್ಲಾ ವಿಪತ್ತು ನಿರ್ವಹಣಾ ಕೊಠಡಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾಹಿತಿಯನ್ನ ನೀಡಿದ್ದಾರೆ. ಅಲ್ಲದೆ ಹೆಚ್.ಡಿ.ಕೋಟೆಯ ತಾಲ್ಲೂಕು ಆಸ್ಪತ್ರೆ ಹಾಗೂ ಮೈಸೂರಿನ ಕೆ.ಆರ್‌. ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯಕೀಯ ನೆರವಿಗೆ ಎಲ್ಲಾ ಸಿದ್ಧತೆಗಳನ್ನ ಮಅಡಿಕೊಂಡಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರಲು ಸಾಕಷ್ಟು ವಾಹನಗಳನ್ನು ಕೂಡ ಅಣಿಗೊಳಿಸಲಾಗಿದೆ. ಹಾಗೂ ಪರ್ಥೀವ ಶರೀರಗಳ  ಸಂರಕ್ಷಣೆಗೆ ಶೈತ್ಯಗಾರ ಘಟಕಗಳನ್ನು ಒದಗಿಸುವ ಸರಬರಾಜುದಾರರನ್ನು ಸಹ ಗುರುತಿಸಿ ಅಗತ್ಯ ಬಿದ್ದರೆ ಗಾಯಾಳುಗಳನ್ನು ಕರೆತಂದು ವೈದ್ಯಕೀಯ ನೆರವು ನೀಡಲು ಮೈಸೂರು ಜಿಲ್ಲಾಡಳಿತ ಸಿದ್ದವಾಗಿದೆ.

ಸಹಾಯಕ್ಕಾಗಿ 0821-2423800 ಅಥವಾ 1077 ದೂರವಾಣಿಗೆ ಕರೆ ಮಾಡುವಂತೆ ಮನವಿಮಾಡಿದ್ದಾರೆ.

ಕರ್ನಾಟಕ-ಕೇರಳ ಬಸ್‌ ಸಂಚಾರ ಸ್ಥಗಿತ!

ಕರ್ನಾಟಕ ಮತ್ತು ಕೇರಳ ಸಂಪರ್ಕಿಸುವ ಮೈಸೂರು-ಸುಲ್ತಾನ್ ಬತ್ತೇರಿ-ವಯನಾಡ್ ರಸ್ತೆಯನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿದೆ. ಬೆಂಗಳೂರಿನಿಂದ ಕೇರಳಕ್ಕೆ ಸಂಚರಿಸುವ ಬಹುತೇಕ ಬಸ್ಸುಗಳ ಸಂಚಾರವನ್ನು ಸಹ ಸ್ಥಗಿತಗೊಳಿಸಲಾಗಿದೆ. ಬೆಂಗಳೂರು-ವಯನಾಡ್ ರಾಷ್ಟ್ರೀಯ ಹೆದ್ದಾರಿ 766ರ ಮಾರ್ಗದಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಗುಂಡ್ಲುಪೇಟೆ-ಬಂಡೀಪುರ-ಗುಡಲೂರ ಮಾರ್ಗದಲ್ಲಿ ತೆರಳಲು ಸೂಚಿಸಲಾಗಿದೆ. ಕಣ್ಣೂರು, ನಿಲಾಂಬೂರು, ಕೋಝಿಕ್ಕೋಡ್, ವಡಗಾರ, ತಲಚೇರಿ ಸೇರಿ ಕೆಲ ಭಾಗಗಳಿಗೆ ಮಾತ್ರ ಬೇರೆ ಮಾರ್ಗಗಳಿಂದ ಸಂಚಾರವನ್ನ ನಡೆಸಲಾಗುತ್ತಿದೆ.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಸಮಗ್ರ

ವಿಶ್ವ ಜನಸಂಖ್ಯೆ ದಿನಾಚರಣೆಯ ಜಾಥಾ

July 11, 2024
ಬೆಂಗಳೂರುಮುಖಪುಟ

ರಾಜ್ಯದ ಜನರಿಗೆ ಮತ್ತೊಂದು ಶಾಕ್‌ : ಆಗಸ್ಟ್​ 31ರಿಂದ ಪರಿಷ್ಕೃತ ಆಸ್ತಿ ನೋಂದಣಿ ಶುಲ್ಕ ಜಾರಿಗೆ

August 30, 2025
ಸಮಗ್ರ

ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ, ಹೂಡಿಕೆದಾರರಿಗೆ ಸಂಕಷ್ಟ !

August 2, 2024
ಮುಖಪುಟಮೈಸೂರು ನಗರ

ಮೈಸೂರು ಅರಮನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್ ಭೇಟಿ

September 2, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?