ಡಿಸಿಸಿ ಬ್ಯಾಂಕ್ ಚುನಾವಣೆ: ಟಿ.ಆರ್ ಶರಣ್ ಕುಮಾರ್ ಜಯಭೇರಿ
ಕುಶಾಲನಗರ,ಮಾ17: ಸಹಕಾರಿ ಧುರೀಣ ಎಂದೇ ಪ್ರಖ್ಯಾತರಾಗಿರುವ ಕುಶಾಲನಗರದ ಟಿ.ಆರ್ ಶರಣ್ ಕುಮಾರ್ ಅವರು ಡಿ.ಸಿ.ಸಿ ಬ್ಯಾಂಕ್ ನ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 29 ಮತದಲ್ಲಿ 17 ಮತಗಳನ್ನು ಪಡೆದು ಭರ್ಜರಿ ಗೆಲುವನ್ನು ಸಾಧಿಸಿರುವ ಇವರು, ೬೦ ವರ್ಷಗಳ ನಂತರ ಕುಶಾಲನಗರದಿಂದ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಟಿ.ಆರ್.ಶರವಣ ಕುಮಾರ್ ಎದುರು ಸ್ಪರ್ಧಿಸಿದ್ದ ಕಣ್ಣಂಡ ಸಂಪತ್ ೧೦ ಮತ ಗಳಿಸಿದರೆ, ನಲ್ಲಮಕ್ಕಡ ಮುತ್ತಣ್ಣ ೨ ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಟಿ.ಆರ್.ಶರವಣ ಕುಮಾರ್ ಅವರಿಗೆ ಕುಶಾಲನಗರದ ಸ್ನೇಹಿತರು, ಹಿತೈಷಿಗಳು, ವರ್ತಕ ವೃಂದದವರು ಅಭಿನಂದನೆಗಳನ್ನು ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಲಿ ಎಂದು ಶುಭಹಾರೈಸಿದ್ದಾರೆ.
![](https://www.prathinidhi.net/wp-content/uploads/2024/03/IMG-20240317-WA0085.jpg)
Leave a comment