ಪ್ರತಿನಿಧಿ ವರದಿ ಗುಂಡ್ಲುಪೇಟೆ
ತಾಲೂಕಿನ ಬೇಗೂರಿನ ಸಮೀಪ ನಿಟ್ರೆ ಗ್ರಾಮದಲ್ಲಿ ಜೋಳದ ಮೆದೆಗೆ ಬೆಂಕಿ ಬಿದ್ದು ಜೋಳದ ಮೆದೆ ಸಂಪೂರ್ಣ ಬೆಂಕಿಗೆ ಹಾವತಿ ಆಗಿರುವ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ.
ಮಹೇಶ್, ಸಿದ್ದಶೆಟ್ಟಿ ಮತ್ತು ಮಹಾದೇವಶೆಟ್ಟಿ ಎಂಬುವರಿಗೆ ಸೇರಿದ ಜೋಳದ ಮೆದೆಗೆ ಬೆಂಕಿ ತಗುಲಿದ್ದು ಆಕಸ್ಮಿಕ ಅಥವಾ ಕಿಡಿ ಕೆಡಿಗಳ ಕೈವಾಡವು ತಿಳಿದು ಬಂದಿಲ್ಲ ಎನ್ನಲಾಗಿದೆ . ಸ್ಥಳೀಯರ ಮಾಹಿತಿಯ ಮೇರೆಗೆ ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.