ರಾಮನಗರ : ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೂಟಗಲ್ ಹೋಬಳಿಯಲ್ಲಿ ನಡೆದ ಜೆಡಿಎಸ್ – ಬಿಜೆಪಿ ಪ್ರಮುಖ ಮುಖಂಡರ ಸಭೆಯಲ್ಲಿ ಗೌರವ ಡಾಕ್ಟರೇಟ್ ಪಡೆದಿರುವ ನಿವೃತ್ತ ತಹಸೀಲ್ದಾರ್ ಎಸ್ . ಶಿವಣ್ಣ ಅವರನ್ನು ಅಭಿನಂದಿಸಲಾಯಿತು.
ಏಷಿಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಸರ್ಚ್ ಯುನಿವರ್ಸಟಿ ನಡೆಸಿದ ಹಾನರ್ ಡಾಕ್ಟರೇಟ್ ಅವಾರ್ಡ್ ಕಾರ್ಯಕ್ರಮದಲ್ಲಿ ಎಸ್ .ಶಿವಣ್ಣ ಅವರ ಸಮಾಜ ಸೇವೆಯನ್ನು ಗುರುತಿಸಿ ಡಾಕ್ಟರೇಟ್ ಅವಾರ್ಡ್ ಪ್ರದಾನ ಮಾಡಲಾಗಿದೆ.
ಮಾಜಿ ಶಾಸಕ ಎ. ಮಂಜುನಾಥ್ , ಹಿರಿಯ ಮುಖಂಡ ಎನ್. ಸುಬ್ಬಾಶಾಸ್ತ್ರಿ, ಅಕ್ಕೂರು ವಿಎಸ್ ಎಸ್ ಎನ್ ಅಧ್ಯಕ್ಷ ಶಿವುಗೌಡ, ಯರೇಹಳ್ಳಿ ಶಿವರಾಜ, ಜಾಲಮಂಗಲ ಗ್ರಾಪಂ ಮಾಜಿ ಅಧ್ಯಕ್ಷ ರಾಜು, ದಿನೇಶ್ , ಮಲ್ಲೇಶ್ , ಚಂದ್ರು, ಅರುಣ, ದೊಡ್ಡಗಂಗವಾಡಿ ಶಿವಕುಮಾರ್ ಮತ್ತಿತರರು ಎಸ್ .ಶಿವಣ್ಣ ಅವರನ್ನು ಅಭಿನಂದಿಸಿದರು.
![](https://www.prathinidhi.net/wp-content/uploads/2024/04/600x450.jpg)