ಮಾಲೂರು: ಯುಗಾದಿ ಹಬ್ಬದ ಪ್ರಯುಕ್ತ ಶಾಸಕ ಕೆ.ವೈ.ನಂಜೇಗೌಡ ಅವರು ಸ್ವಗ್ರಾಮವಾದ ಕೊಮ್ಮನಹಳ್ಳಿಯಲ್ಲಿ ಸಂಪ್ರದಾಯದಂತೆ ಶ್ರೀ ಚನ್ನರಾಯಸ್ವಾಮಿ ದೇವರ ಉತ್ಸವವನ್ನು ಏಳು ಗ್ರಾಮಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ವಿಶೇಷ ಪೂಜಾ ಸಲ್ಲಿಸಿದರು.
ಗ್ರಾಮದ ಜಿ.ಪಂ.ಮಾಜಿ ಅಧ್ಯಕ್ಷೆ ರತ್ನಮ್ಮ ನಂಜೇಗೌಡ, ಮುಖಂಡರಾದ ಕೆ.ವೈ.ಈರಣ್ಣಗೌಡ, ಯುವ ಮುಖಂಡ ಸುನೀಲ್ ನಂಜೇಗೌಡ, ನಾಗರಾಜ್, ಸುತ್ತ ಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.