ಮೈಸೂರು, ಜನವರಿ 28, 2026 :ನಗರದ ಶ್ರೀರಾಂಪುರ ಎರಡನೇ ಹಂತದ ಬೆಮೆಲ್ ಬಡಾವಣೆಯಲ್ಲಿರುವ ಗೀತಾಂಜಲಿ ಇಂಟರ್ನ್ಯಾಷನಲ್ ಗ್ಲೋಬಲ್ ಶಾಲೆಯಲ್ಲಿ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ಅರಳು ಪ್ರತಿಭೆ ಚಿತ್ರಕಲಾ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಪಾಲ್ಗೊಂಡು ವಿವಿಧ ಚಿತ್ರಗಳನ್ನ ಬಿಡಿಸಿ ಬಣ್ಣಗಳಿಂದ ಆಕರ್ಷಣೀಯವಾಗಿಸಿ ಬಹುಮಾನಗಳನ್ನು ಪಡೆದರು.

ಗಣರಾಜ್ಯೋತ್ಸವದ ಅಂಗವಾಗಿ ಶಾಲೆಯ ನೂತನ ಸುಸಜ್ಜಿತ ಕ್ಯಾಂಪಸ್ ನಲ್ಲಿ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧಾ ಕಾರ್ಯಕ್ರಮದಲ್ಲಿ ನೂರಾರು ಮಕ್ಕಳು ಪಾಲ್ಗೊಂಡಿದ್ದರೆ, ಅವರ ಪೋಷಕರು ಅರಳು ಪ್ರತಿಭೆ ಗಳನ್ನು ಪ್ರೋತ್ಸಾಹಿಸಿದರು. ವೇದಿಕೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೀತಾಂಜಲಿ ಎಜುಕೇಶನ್ ಟ್ರಸ್ಟ್ನ ಮುಖ್ಯಸ್ಥರಾದ ಆದಿಶೇಷನ ಗೌಡ, ಮಕ್ಕಳ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ರಚನಾತ್ಮಕ ಕಲಿಕೆ ಹಾಗೂ ಗುಣಮಟ್ಟದ ಶಿಕ್ಷಣ ದೊಂದಿಗೆ ಎಳೆಯ ಮನಸ್ಸುಗಳಿಗೆ ಉತ್ತಮ ಶಾಲಾ ಪರಿಸರ ಹಾಗೂ ಶ್ರೇಷ್ಠ ಮೌಲ್ಯಗಳನ್ನು ಕಲಿಸುವುದು ನಮ್ಮ ಶಿಕ್ಷಣ ಸಂಸ್ಥೆಯ ಉದ್ದೇಶವಾಗಿದೆ ಎಂದರು.

ಜ್ಯೋತಿ ಗುರುಕುಲ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಪುಷ್ಪಜ್ಯೋತಿ ಅವರು ಮಾತನಾಡಿದರು. ಮೈಸೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶ ಗಳಿಂದ ಆಗಮಿಸಿದ್ದ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಮೂರು ವಿಭಾಗ ಗಳಲ್ಲಿ ವಿಜೇತರಾಗಿ ಪ್ರಶಸ್ತಿ ಫಲಕ ಪಡೆದುಕೊಂಡರು. ಅಲ್ಲದೆ ಪಾಲ್ಗೊಂಡು ಚಿತ್ರಕಲೆ ಬಿಡಿಸಿದ ಎಲ್ಲ ಮಕ್ಕಳಿಗೂ ಪ್ರಮಾಣಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗೀತಾಂಜಲಿ ಎಜುಕೇಶನ್ ಟ್ರಸ್ಟ್ನ ಕಾರ್ಯದರ್ಶಿ, ಸೌಮ್ಯ ಆದಿಶೇಷನ್ ಗೌಡ, ಟ್ರಸ್ಟಿಗಳಾದ ನಂಜೇಗೌಡ ಹಾಗೂ ಸುಧಾ, ವ್ಯವಸ್ಥಾಪಕ ಪನ್ನಗಪ್ರಭು, ಕರ್ನಾಟಕ ಮುಕ್ತ ವಿವಿ ಪ್ರಾಧ್ಯಾಪಕ ಪ್ರೊಫೆಸರ್ ಪಾಂಡುರಂಗ, ಸಾತಗಳ್ಳಿ ಮಹಾತ್ಮ ಗಾಂಧಿ ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಡಾ. ಶಿವಕುಮಾರ್, ಗೀತಾಂಜಲಿ ಶಾಲೆಯ ಶಿಕ್ಷಕಿಯರಾದ ಪುಷ್ಪಾ, ಜಯಶ್ರೀ, ಸಿಬ್ಬಂದಿ ಲಕ್ಷ್ಮೀ, ಮಹೇಶ, ಲಕ್ಷ್ಮಮ್ಮ ಮನೋಹರ ಉಪಸ್ಥಿತರಿದ್ದರು.
