ಬೆಂಗಳೂರು, ಮಾರ್ಚ್ 3, 2026 : ನಭೋ ಮಂಡಲ ಇವತ್ತು ಚಂದ್ರಗ್ರಹಣದ ಕೌತಕಕ್ಕೆ ಸಾಕ್ಷ್ಯಿಯಾಗಲಿದೆ. ಈ ರಕ್ತ ಚಂದ್ರಗ್ರಹಣ ಇಂದು ಮಧ್ಯಾಹ್ನ ಆರಂಭವಾಗಿ ಸಂಜೆ ವೇಳೆಗೆ ಅಂತ್ಯವಾಗಲಿದೆ.
ನಮ್ಮ ರಾಜ್ಯದಲ್ಲಿ ಚಂದ್ರಗ್ರಹಣದ ಗೋಚರವಾಗದೇ ಇದ್ದರೂ ಗ್ರಹಣದ ಪ್ರಭಾವ ಇರಲಿದೆ.ಇಂದು ಮಧ್ಯಾಹ್ನ 3:27ಕ್ಕೆ ರಕ್ತಚಂದ್ರಗ್ರಹಣ ಆರಂಭವಾಗಿ ಸಂಜೆ 6:46ಕ್ಕೆ ಮೋಕ್ಷಗೊಳ್ಳಲಿದೆ. ಈ ಸಮಯದಲ್ಲಿ ರಾಜ್ಯದ ಬಹುತೇಕ ಎಲ್ಲಾ ದೇವಾಲಯ ಬಂದ್ ಆಗಲಿದೆ. ಗ್ರಹಣದ ಕಾರಣದಿಂದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಭಾರತೀಯರಿಗೆ ಇದು ಗ್ರಹಣವೆಂದು ಅನಿಸುವುದಿಲ್ಲ. ಯಾಕೆಂದರೆ ಈ ಗ್ರಹಣ ಸಂಪೂರ್ಣ ಮುಗಿಯುವ ಹಂತದಲ್ಲಿ ಚಂದ್ರೋದಯವಾಗಲಿದೆ. ಇದರಿಂದ ಗ್ರಹಣದ ಚಂದ್ರ ಕೇವಲ 9 ನಿಮಿಷ ಮಾತ್ರ ಕಾಣಲಿದೆ.
ಇವತ್ತು ವಿಶ್ವಾವಸು ಸಂವತ್ಸರದ ಫಾಲ್ಗುಣ ಶುಕ್ಲ ಹುಣ್ಣಿಮೆ ದಿನವಾಗಿದೆ. ಪೂರ್ವಾ ನಕ್ಷತ್ರ, ಸಿಂಹ ರಾಶಿಯಲ್ಲಿ ಚಂದ್ರನಿಗೆ ಪೂರ್ಣಗ್ರಾಸ ಕೇತು ಗ್ರಹಣ ಸಂಭವಿಸಲಿದೆ. ಗ್ರಸ್ತೋದಯ ಗ್ರಹಣ ಆಗಿರೋದ್ರಿಂದ ಈ ದಿನ ಹಗಲು ಭೋಜನ ನಿಷಿದ್ಧವಾಗಿದೆ ಗ್ರಹಣ ಬಳಿಕ ಸ್ನಾನ ಮಾಡಿ ಆಹಾರ ಸ್ವೀಕರಿಸಬಹುದು ಎಂದು ಪಂಚಾಂಗಗಳಲ್ಲಿ ಉಲ್ಲೇಖಿಸಲಾಗಿದೆ.
