ಸಂಜೆವಾಣಿ, ವಿಜಯಕರ್ನಾಟಕ, ಪ್ರಜಾನುಡಿ, ವಿಜಯವಾಣಿ… ಮೊದಲಾದ ಪತ್ರಿಕೆಗಳಲ್ಲಿ ಉಪ ಸಂಪಾದಕನಾಗಿ, ವರದಿಗಾರನಾಗಿ, ಸ್ಥಾನಿಕ ಸಂಪಾದಕನಾಗಿ ಸೇವೆ ಸಲ್ಲಿಸಿದ್ದೇನೆ. ಬೆಂಗಳೂರು, ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ವರದಿಗಾರನಾಗಿ ಸೇವೆ ಸಲ್ಲಿಸಿದ್ದೇನೆ.


ವಿಜಯಕರ್ನಾಟಕ ಹಾಗೂ ವಿಜಯವಾಣಿ ಪತ್ರಿಕೆಗಳಲ್ಲಿ ಸ್ಥಾನಿಕ ಸಂಪಾದಕನಾಗಿ ಹಾಸನ, ಮಂಡ್ಯ, ಚಾಮರಾಜನಗರ, ಕೊಡಗು ಹಾಗೂ ಮೈಸೂರು ಜಿಲ್ಲೆಗಳ ಮುಖ್ಯಸ್ಥನಾಗಿ ಕೆಲಸ ಮಾಡಿದ್ದೇನೆ. ಇದರಿಂದ ಈ ಭಾಗದ ಎಲ್ಲ ಪತ್ರಕರ್ತರು, ಪ್ರಮುಖರ ಸಂಪರ್ಕವನ್ನು ಹೊಂದುವ ಅವಕಾಶ ಸಿಕ್ಕಿತು.


ಹೀಗೆ ಕೆಲಸ ಮಾಡಿದ ಅನುಭವದ ನಂತರ ನಮ್ಮದೇ ಪತ್ರಿಕೆ ಆರಂಭಿಸುವ ಸಾಹಸಕ್ಕೆ ಕೈ ಹಾಕಿದ್ದೇವೆ. ಮುದ್ರಣ ಹಾಗೂ ಡಿಜಿಟಲ್‌ ವೇದಿಕೆ ಮೂಲಕ ಪ್ರತಿನಿಧಿ ಪತ್ರಿಕೆಯನ್ನು ಓದುಗರಿಗೆ ತಲುಪಿಸುವ ಪ್ರಯತ್ನ ಮಾಡಿದ್ದೇವೆ. ನಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಓದುಗರಿಂದ ಈವರೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮುಂದೆಯೂ ಇಂತಹುದೇ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ ಮುಂದೆ ಸಾಗುತ್ತೇವೆ.


ನಮಸ್ಕಾರಗಳೊಂದಿಗೆ


ಸಿ.ಕೆ.ಮಹೇಂದ್ರ
ಪ್ರಧಾನ ಸಂಪಾದಕರು