PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಪಡಸಲನತ್ತ ಗ್ರಾಮದ ಜನರ ಗೋಳು ಕೇಳುವವರು ಯಾರು?
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಚಾಮರಾಜನಗರ > ಪಡಸಲನತ್ತ ಗ್ರಾಮದ ಜನರ ಗೋಳು ಕೇಳುವವರು ಯಾರು?
ಚಾಮರಾಜನಗರ

ಪಡಸಲನತ್ತ ಗ್ರಾಮದ ಜನರ ಗೋಳು ಕೇಳುವವರು ಯಾರು?

ಪ್ರತಿನಿಧಿ
Last updated: April 4, 2024 8:44 pm
ಪ್ರತಿನಿಧಿ
Published April 4, 2024
Share
SHARE

ಸುರೇಶ್ ಅಜ್ಜೀಪುರ ಹನೂರು

ರಸ್ತೆಯಿಲ್ಲ, ವಿದ್ಯುತ್ ಇಲ್ಲ, ವಾಹನಗಳ ವ್ಯವಸ್ಥೆಯಂತೂ ಇಲ್ಲ. ಆರೋಗ್ಯ ಹದಗೆಟ್ಟರೆ ಡೋಲಿಯೇ ಗತಿ, ಕುಡಿಯಲು ಬಾವಿ ನೀರೇ ಗತಿ… ಇದು ಪಡಸಲನತ್ತ ಗ್ರಾಮದ ಪರಿಸ್ಥಿತಿ.

ತಾಲೂಕಿನ ದಟ್ಟಾರಣ್ಯದಲ್ಲಿರುವ ಪಡಸಲನತ್ತ ಗ್ರಾಮವು ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕುಗ್ರಾಮವಾಗಿದ್ದು, ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.

ಸುಸಜ್ಜಿತ ರಸ್ತೆಯಿಲ್ಲ: ಗ್ರಾಮಕ್ಕೆ ಎರಡು ಮಾರ್ಗದಲ್ಲಿ ರಸ್ತೆಯಿದ್ದು, ಒಂದು ಇಂಡಿಗನತ್ತ ಮೂಲಕ ತೇಕಣೆ ಸಮೀಪದ ಹಾದಿಯಲ್ಲಿ, ಇನ್ನೊಂದು ಪಾಲಾರ್ ನ ಕೊಕ್ಕರೆಹಳ್ಳ ಸಮೀಪದ ರಸ್ತೆ. ಈ ಎರಡೂ ರಸ್ತೆಗಳು ದಟ್ಟಾರಣ್ಯದ ಒಳಗೆ ಇವೆ. ಮುಖ್ಯವಾಗಿ, ಎರಡೂ ರಸ್ತೆಯ ಮಾರ್ಗ ಕಲ್ಲುಗಳಿಂದ ಕೂಡಿದ್ದು, ದುರ್ಗಮ ಹಾದಿಯಾಗಿವೆ. ಇದರಿಂದ ಸಂಚರಿಸಲು ಯೋಗ್ಯವಾಗಿಲ್ಲ. ಪರಿಣಾಮ, ಇಲ್ಲಿನ ಜನತೆ ಹೈರಾಣಾಗಿದ್ದಾರೆ. ಸ್ಥಳೀಯರು ಸಾಮಗ್ರಿಗಳನ್ನು ಸಾಗಿಸಲು ಹೆಚ್ಚುವರಿ ಹಣ ನೀಡಿ ಬಾಡಿಗೆ ಗಾಡಿ ಮಾಡಬೇಕು. ಇದರ ಜತೆಗೆ, ಅತ್ಯವಶ್ಯಕ ಸಾಮಗ್ರಿಗಳಾದ ಸಿಲಿಂಡರ್ ಹಾಗೂ ಇತರ ವಸ್ತುಗಳನ್ನು ತಲೆಯ ಮೇಲೆ ಅಥವಾ ಕತ್ತೆ ಮೂಲಕ ತರಬೇಕು. ಹೀಗಾಗಿ, ಸುಗಮವಾಗಿ ಸಂಚರಿಸಲು ಕಚ್ಚಾ  ರಸ್ತೆಯನ್ನಾದರೂ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿದ್ಯುತ್ ಇಲ್ಲ: ಗ್ರಾಮದಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ವಿದ್ಯುತ್ ಇಲ್ಲದ ಪರಿಣಾಮ ಗ್ರಾಮಸ್ಥರು ಭಯದ ವಾತಾವರಣದಲ್ಲೇ ಕಾಲ ದೂಡುತ್ತಿದ್ದಾರೆ. ತಾತ್ಕಾಲಿಕವಾಗಿ ಸದ್ಯಕ್ಕೆ ಇರುವ ಸೋಲಾರ್ ಸಹ ಆಗಾಗ್ಗೆ ಕೈ ಕೊಡುವುದರಿಂದ ರಾತ್ರಿ ವೇಳೆ ತುಂಬ ತೊಂದರೆಯಾಗುತ್ತಿದೆ. ಜತೆಗೆ, ಮಕ್ಕಳು-ಮರಿಗೆಲ್ಲ ತುಂಬ ನರಕವಾಗುತ್ತಿದೆ. ಈ ಗ್ರಾಮದಲ್ಲಿ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿದ್ದು, ಅವರಿಗೆ ತುಂಬ ತೊಂದರೆಯಾಗಿದೆ. ಹಾಗಾಗಿ, ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಡೋಲಿಯೇ ಗತಿ: ಈ ಗ್ರಾಮದ ಜನರಿಗೆ ಆರೋಗ್ಯ ಹದಗೆಟ್ಟರೆ, ಅದರಲ್ಲೂ ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ ಅಥವಾ ಮಧ್ಯರಾತ್ರಿ ವೇಳೆ ಆರೋಗ್ಯ ಹದಗೆಟ್ಟರೆ ಡೋಲಿ ಕಟ್ಟಿ ಜನರೇ 4 ರಿಂದ 5  ಕಿಮೀ ಗಟ್ಟಲೆ  ಹೊರಬೇಕಾದ ಪರಿಸ್ಥಿತಿ ಇಂದಿಗೂ ಇದೆ.

ಪಡಸಲನತ್ತ ಗ್ರಾಮದಿಂದ ಮಹದೇಶ್ವರ ಬೆಟ್ಟಕ್ಕೆ ಅಥವಾ ಪಾಲರ್ ಗೆ ತೆರಳಲು ಹರಸಾಹಸ ಪಡಬೇಕು. ಜತೆಗೆ, ತಮ್ಮ ಮನೆಗಳಿಗೆ ಪಡಿತರ ಆಹಾರ ಪದಾರ್ಥಗಳನ್ನೂ ತಲೆ ಮೇಲೆಯೇ ಹೊತ್ತು ಸಾಗಬೇಕು. ಗ್ರಾಮಕ್ಕೆ ಆರೋಗ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಜನತೆ ಆಗ್ರಹಿಸಿದ್ದಾರೆ.

ತೆರೆದ ಬಾವಿಗಳ ನೀರೇ ಗತಿ: ಈ ಗ್ರಾಮದ ಜನರಿಗೆ ಇರುವ ಬಾವಿಗಳ  ನೀರೇ ಗತಿ. ಅದರಲ್ಲೂ ಬೇಸಿಗೆ ಅವಧಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ನೀರಿಗೂ ಹಾಹಾಕಾರ  ಬರಬಹುದು. ಅಲ್ಲದೆ, ಇಡೀ ಗ್ರಾಮಸ್ಥರು ಇದೇ ನೀರನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಗ್ರಾಮದಲ್ಲಿರುವ ಬಾವಿಗಳೇ ಇವರ ಜೀವನಾಡಿಯಾಗಿವೆ. ಮುಖ್ಯವಾಗಿ ಮನೆಗಳು ತುಂಬ ದೂರದ ಹಾದಿಯಾಗಿದ್ದು, ಕುಡಿಯುವ ನೀರಿಗಾಗಿಯೇ ಕಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಪರವಾಗಿಲ್ಲ, ಆದರೆ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತುಂಬ ತೊಂದರೆ ಆಗುತ್ತಿದೆ.

ಚುನಾವಣೆ ಬಹಿಷ್ಕಾರ:  ನಮ್ಮ ಗ್ರಾಮಕ್ಕೆ ಮೂಲ ಸೌಲಭ್ಯಗಳಿಲ್ಲ, ಈಗಾಗಲೇ ಅನೇಕ ರೀತಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದು  ಕಾಡುಪ್ರಾಣಿಗಳಂತೆ ಬದುಕುತ್ತಿದ್ದೇವೆ. ಇಷ್ಟೆಲ್ಲ ಸಮಸ್ಯೆಗಳ ಸರಮಾಲೆಯನ್ನು ಹೊದ್ದು ಮಲಗಿರುವ ನಾವು ಪ್ರತಿ ಬಾರಿ ಮನವಿ ಕೊಟ್ಟಿದ್ದೇವೆ. ಆದರೆ ಯಾವ ಸಮಸ್ಯೆಯನ್ನೂ ಬಗೆಹರಿಸಿಲ್ಲ. ಹಾಗಾಗಿ, ಈ ಬಾರಿ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಪಡಸಲನತ್ತ ಹಾಗೂ ತೇಕಣೆ ಗ್ರಾಮಸ್ಥರು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.

ಚಿತ್ರ : ಹನೂರು ತಾಲೂಕಿನ ಪಡಸಲನತ್ತ ಗ್ರಾಮದ ಜನರು  ತೆರೆದ ಬಾವಿಯಿಂದ ನೀರನ್ನು ಸಂಗ್ರಹ ಮಾಡುತ್ತಿರುವುದು.

ಚಿತ್ರ : ಹನೂರು ತಾಲೂಕಿನ ಪಡಸಲನತ್ತ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡಲು ತೀರ್ಮಾನ ಮಾಡಿರುವ ವಿಡಿಯೋ ದೃಶ್ಯ.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಚಾಮರಾಜನಗರ

ಮತದಾರರು ತಪ್ಪದೇ ಮತದಾನ ಮಾಡಿ

March 21, 2024
ಚಾಮರಾಜನಗರ

ಹೊಂಡರಬಾಳುವಿನಲ್ಲಿ ವ್ಯಕ್ತಿ ಮೇಲೆ ಹಲ್ಲೆ

April 26, 2024
ಚಾಮರಾಜನಗರ

ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ವಿವಾದ; ಚಾಮರಾಜನಗರದಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ

February 28, 2024
ಚಾಮರಾಜನಗರ

6 ರಂದು ಸಾಮಾನ್ಯ ಸಭೆ

July 2, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?