PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ರ‍್ಯಾಟ್​ ಹೋಲ್ ಮೈನಿಂಗ್ ಎಂದರೇನು? ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವವರ ರಕ್ಷಣೆಗೆ ಈ ಮಾರ್ಗ ಏಕೆ?
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಜಿಲ್ಲೆ > ರ‍್ಯಾಟ್​ ಹೋಲ್ ಮೈನಿಂಗ್ ಎಂದರೇನು? ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವವರ ರಕ್ಷಣೆಗೆ ಈ ಮಾರ್ಗ ಏಕೆ?
ಜಿಲ್ಲೆ

ರ‍್ಯಾಟ್​ ಹೋಲ್ ಮೈನಿಂಗ್ ಎಂದರೇನು? ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವವರ ರಕ್ಷಣೆಗೆ ಈ ಮಾರ್ಗ ಏಕೆ?

Prathinidhi News
Last updated: November 28, 2023 11:46 am
Prathinidhi News
Published November 28, 2023
Share
SHARE

ಉತ್ತರಾಖಂಡದ ಉತ್ತರಕಾಶಿಯಲ್ಲಿರುವ ಸಿಲ್ಕ್ಯಾರಾ ಸುರಂಗ ಮಾರ್ಗದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಕೈ ಮೂಲಕ ಕೊರೆಯುವ ಕಾರ್ಯ ನಡೆಯುತ್ತಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯ ಮತ್ತೊಮ್ಮೆ ವೇಗ ಪಡೆದುಕೊಳ್ಳುತ್ತಿದೆ. ಸುರಂಗದಲ್ಲಿರುವ ಕಾರ್ಮಿಕರನ್ನು ತಲುಪಲು ಲಂಬ ಹಾಗೂ ಅಡ್ಡ ಎರಡೂ ವಿಧದಲ್ಲಿ ಕೊರೆಯಲಾಗುತ್ತಿದೆ. ನವೆಂಬರ್ 12 ರಿಂದ 41 ಕಾರ್ಮಿಕರು ಈ ಸುರಂಗದೊಳಗೆ ಸಿಲುಕಿದ್ದಾರೆ. ಇದೀಗ ರ‍್ಯಾಟ್ ಹೋಲ್ ಮೈನಿಂಗ್ ತಂತ್ರವನ್ನು ಬಳಸಿಕೊಂಡು ಅವಶೇಷಗಳನ್ನು ತೆಗೆದುಹಾಕಲಾಗುತ್ತಿದೆ.

ಅಮೆರಿಕದ ಆಗರ್ ಡ್ರಿಲ್ ಯಂತ್ರ ಕೆಟ್ಟು ನಿಂತ ನಂತರ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಪಾರುಗಾಣಿಕಾ ಪೈಪ್‌ನೊಳಗೆ ಅಂಟಿಕೊಂಡಿರುವ ಬ್ಲೇಡ್ ಅನ್ನು ತುಂಡುಗಳಾಗಿ ಕತ್ತರಿಸಿ ತೆಗೆಯಲಾಯಿತು.

ರ‍್ಯಾಟ್ ಹೋಲ್ ಮೈನಿಂಗ್ ಎಂದರೇನು? ರ‍್ಯಾಟ್ ಹೋಲ್ ಮೈನಿಂಗ್ ಮೇಘಾಲಯದಲ್ಲಿ ತುಂಬಾ ಪ್ರಚಲಿತದಲ್ಲಿದೆ, ಇದು ಕಿರಿದಾದ ಪ್ರದೇಶಗಳಿಂದ ಕಲ್ಲಿದ್ದಿಲನ್ನು ಹೊರತೆಗೆಯಲು ಬಳಸಲಾಗುವ ಗಣಿಗಾರಿಕೆ ವಿಧಾನ ಇದಾಗಿದೆ.

ರ‍್ಯಾಟ್ ಹೋಲ್ ಎಂಬ ಪದವು ನೆಲದಲ್ಲಿ ಅಗೆದ ಕಿರಿದಾದ ರಂಧ್ರಗಳನ್ನು ಸೂಚಿಸುತ್ತದೆ. ಈ ರಂಧ್ರದಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಇಳಿಯಲು ಹಾಗೂ ಕಲ್ಲಿದ್ದಿಲನ್ನು ಹೊರತೆಗೆಯಲು ಸಾಧ್ಯವಾಗುತ್ತದೆ.

- ಜಾಹೀರಾತು -

ರಂಧ್ರವನ್ನು ಕೊರದ ಬಳಿಕ ಕಲ್ಲಿದ್ದಿಲು ಜಾಗವನ್ನು ತಲುಪಲು ಹಗ್ಗಗಳು ಅಥವಾ ಬಿದಿರಿನ ಏಣಿಗಳನ್ನು ಬಳಸುತ್ತಾರೆ. ನಂತರ ಪಿಕ್ಸ್, ಸಲಿಕೆಗಳು ಮತ್ತು ಬುಟ್ಟಿಗಳಂತಹ ವಸ್ತುಗಳನ್ನು ಬಳಸಿಕೊಂಡು ಕೈಯಿಂದ ಹೊರ ತೆಗೆಯಲಾಗುತ್ತದೆ.

ಈ ರ‍್ಯಾಟ್ ಹೋಲ್ ಮೈನಿಂಗ್​ನಲ್ಲಿ ಎರಡು ವಿಧ ಒಂದು ಅಡ್ಡ ಕತ್ತರಿಸುವ ಪ್ರಕ್ರಿಯೆ, ಎರಡನೆಯದು ಬಾಕ್ಸ್​ ಮಾದರಿಯಲ್ಲಿ ಕತ್ತರಿಸುವುದು. ಕಿರಿದಾದ ಸುರಂಗಗಳಿಗೆ ಸೈಡ್​ ಕಟಿಂಗ್​ ಬಳಸಲಾಗುತ್ತದೆ. ಇವುಗಳನ್ನು ಪರ್ವತದ ಇಳಿಜಾರಿನಲ್ಲಿ ನಿರ್ಮಿಸಲಾಗುತ್ತದೆ.

 ಅಪಾಯವೇನು? ರ‍್ಯಾಟ್ ಹೋಲ್ ಮೈನಿಂಗ್ ಪರಿಸರ ಅಪಾಯಗಳನ್ನು ಉಂಟುಮಾಡುತ್ತದೆ. ಕಾರ್ಮಿಕರ ಸುರಕ್ಷತೆಯ ಬಗ್ಗೆ ನಂಬಿಕೆ ಇರುವುದಿಲ್ಲ. ಗಣಿಗಾರಿಕೆ ಪ್ರಕ್ರಿಯೆಯು ಭೂಮಿಯ ಅವನತಿ, ಅರಣ್ಯನಾಶ ಮತ್ತು ಜಲ ಮಾಲಿನ್ಯಕ್ಕೆ ಕಾರಣವಾಗಬಹುದು.

ರ‍್ಯಾಟ್ ಹೋಲ್ ಮೈನಿಂಗ್​ಗೆ ನಿಷೇಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) 2014ರಲ್ಲಿ ಈ ವಿಧಾನವನ್ನು ನಿಷೇಧಿಸಿತ್ತು. ಮೇಘಾಲಯದಲ್ಲಿ ನಿಷೇಧಿಸಲಾಗಿತ್ತು, 2015ರಲ್ಲೂ ನಿಷೇಧ ಕಾಯ್ದುಕೊಂಡಿತ್ತು. ಇದಾದ ಬಳಿಕ ಈ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

2019 ರಲ್ಲಿ ನಡೆದ ಪ್ರಮುಖ ದುರಂತದಲ್ಲಿ, ಮೇಘಾಲಯದ ಪೂರ್ವ ಜೈನ್ತಿಯಾ ಹಿಲ್ಸ್ ಜಿಲ್ಲೆಯಲ್ಲಿ ಪ್ರವಾಹ ಸಂಭವಿಸಿದ ಬಳಿಕ ಇಲಿ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದ 15 ಜನರು ಹಲವಾರು ದಿನಗಳವರೆಗೆ ಅಲ್ಲೇ ಇದ್ದರು, ನಂತರ ಸಾವನ್ನಪ್ಪಿದರು.

ನಾವು ಇದನ್ನು 10 ವರ್ಷಗಳಿಂದ ಮಾಡುತ್ತಿದ್ದೇವೆ ಮತ್ತು ನಮಗೆ ಸಾಕಷ್ಟು ಸ್ಥಳವಿದೆ. 41 ಕಾರ್ಮಿಕರನ್ನು ನಾವೆಲ್ಲರೂ ಹೊರಗೆ ತರಲು ಬಯಸುತ್ತೇವೆ ರಾಕೇಶ್ ರಜಪೂತ್ ಹೇಳಿದ್ದಾರೆ. ಒಬ್ಬೊಬ್ಬರನ್ನಾಗಿಯೇ ಸುರಂಗದಿಂದ ಹೊರ ತರಬೇಕಿದೆ.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಜಿಲ್ಲೆ

ಯುವನಿಧಿ ಗ್ಯಾರಂಟಿಗೆ ಚಾಲನೆ ನೀಡಿ ಫಲಾನುಭವಿಗಳಿಗೆ ಚೆಕ್ ವಿತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

January 12, 2024
ಜಿಲ್ಲೆಮುಖಪುಟಮೈಸೂರು ನಗರರಾಜಕೀಯ

ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲಿ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ರೌಂಡ್ಸ್..!‌ ಅಧಿಕಾರಿಗಳಿಗೆ ತರಾಟೆ

August 1, 2025
ಜಿಲ್ಲೆ

ಹಸುಗೂಸು ಮಾರಾಟ ದಂಧೆ; ಮಹಿಳಾ ಏಜೆಂಟ್, ನಕಲಿ ವೈದ್ಯ ಸೇರಿ ಮತ್ತಿಬ್ಬರ ಬಂಧನ

November 29, 2023
ಜಿಲ್ಲೆ

ಮಂಗಳೂರು-ಮಡಗಾವ್‌ ಹಾಗೂ ಕೊಯಮತ್ತೂರು-ಬೆಂಗಳೂರು ವಂದೇ ಭಾರತ್​ ರೈಲಿಗೆ ಚಾಲನೆ ಕೊಟ್ಟ ಪ್ರಧಾನಿ ಮೋದಿ

December 30, 2023
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?