PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ವಿಜಯ್‌ ಹಜಾರೆ ಏಕದಿನ ಟೂರ್ನಿ: ಕ್ವಾರ್ಟರ್‌ ಫೈನಲ್‌ಗೆ ಕರ್ನಾಟಕ ಲಗ್ಗೆ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಜಿಲ್ಲೆ > ವಿಜಯ್‌ ಹಜಾರೆ ಏಕದಿನ ಟೂರ್ನಿ: ಕ್ವಾರ್ಟರ್‌ ಫೈನಲ್‌ಗೆ ಕರ್ನಾಟಕ ಲಗ್ಗೆ
ಜಿಲ್ಲೆ

ವಿಜಯ್‌ ಹಜಾರೆ ಏಕದಿನ ಟೂರ್ನಿ: ಕ್ವಾರ್ಟರ್‌ ಫೈನಲ್‌ಗೆ ಕರ್ನಾಟಕ ಲಗ್ಗೆ

Prathinidhi News
Last updated: December 6, 2023 10:20 am
Prathinidhi News
Published December 6, 2023
Share
SHARE

ಅಹಮದಾಬಾದ್‌(ಡಿ.06): ನಿರ್ಣಾಯಕ ಪಂದ್ಯದಲ್ಲಿ ಮಿಜೋರಾಂ ವಿರುದ್ಧ 6 ವಿಕೆಟ್‌ ಭರ್ಜರಿ ಜಯಭೇರಿ ಬಾರಿಸಿದ 4 ಬಾರಿ ಚಾಂಪಿಯನ್‌ ಕರ್ನಾಟಕ, 2023ರ ವಿಜಯ್‌ ಹಜಾರೆ ಏಕದಿನ ಟೂರ್ನಿಯಲ್ಲಿ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲು ಯಶಸ್ವಿಯಾಗಿದೆ. ಆಡಿದ 7 ಪಂದ್ಯಗಳಲ್ಲಿ 6ರಲ್ಲಿ ಜಯಿಸಿದ ರಾಜ್ಯ ತಂಡ 24 ಅಂಕದೊಂದಿಗೆ ‘ಸಿ’ ಗುಂಪಿನಲ್ಲಿ 2ನೇ ಸ್ಥಾನಿಯಾಯಿತು. ಹರ್ಯಾಣ(28 ಅಂಕ) ಗುಂಪಿನಿಂದ ಅಗ್ರಸ್ಥಾನಿಯಾಗಿ ಕ್ವಾರ್ಟರ್‌ಗೇರಿತು.

ಮೊದಲು ಬ್ಯಾಟ್‌ ಮಾಡಿದ ಮಿಜೋರಾಂ 37.3 ಓವರ್‌ಗಳಲ್ಲಿ 123ಕ್ಕೆ ಸರ್ವಪತನ ಕಂಡಿತು. ಮತ್ತೆ ಮಾರಕ ದಾಳಿ ಸಂಘಟಿಸಿದ ಕೌಶಿಕ್‌ 8.2 ಓವರಲ್ಲಿ 5 ಮೇಡಿನ್‌ ಸಹಿತ 7 ರನ್‌ ನೀಡಿ 4 ವಿಕೆಟ್‌ ಕಿತ್ತರು. ಗೌತಮ್‌ 3, ಮನೋಜ್‌ 2 ವಿಕೆಟ್‌ ಪಡೆದರು. ಸುಲಭ ಗುರಿಯನ್ನು ಬೆನ್ನತ್ತಲು ರಾಜ್ಯ ತಂಡ 17.1 ಓವರ್‌ಗಳನ್ನು ತೆಗೆದುಕೊಂಡಿತು. ಮಯಾಂಕ್‌ ಔಟಾಗದೆ 48, ಮನೀಶ್‌ ಪಾಂಡೆ ಔಟಾಗದೆ 38 ರನ್‌ ಗಳಿಸಿ ತಂಡವನ್ನು ಗೆಲ್ಲಿಸಿದರು.

ಸ್ಕೋರ್‌: 
ಮಿಜೋರಾಂ 37.2 ಓವರ್‌ಗಳಲ್ಲಿ 124/10 (ಥಂಕುಮಾ 37, ಕೌಶಿಕ್‌ 4-7, ಗೌತಮ್‌ 3-49)
ಕರ್ನಾಟಕ 17.1 ಓವರ್‌ಗಳಲ್ಲಿ 126/4 (ಮಯಾಂಕ್ 48*, ಮನೀಶ್‌ 38*, ಮೋಹಿತ್‌ 3-37)

ಕರ್ನಾಟಕ-ವಿದರ್ಭ ಡಿ.11ಕ್ಕೆ ಕ್ವಾರ್ಟರ್‌

- ಜಾಹೀರಾತು -

2019-20ರ ಬಳಿಕ ಮೊದಲ ಬಾರಿ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿರುವ ಕರ್ನಾಟಕ ಕ್ವಾರ್ಟರ್‌ನಲ್ಲಿ ಡಿ.11ರಂದು ವಿದರ್ಭ ವಿರುದ್ಧ ಆಡಲಿದೆ. ‘ಬಿ’ ಗುಂಪಿನಲ್ಲಿದ್ದ ವಿದರ್ಭ ಆಡಿದ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದ್ದು, 20 ಅಂಕದೊಂದಿಗೆ ಅಗ್ರಸ್ಥಾನಿಯಾಗಿ ಕ್ವಾರ್ಟರ್‌ ಪ್ರವೇಶಿಸಿದೆ. ವಿದರ್ಭ ಈ ವರೆಗೂ ಫೈನಲ್‌ ಪ್ರವೇಶಿಸಿಲ್ಲ.

ಮುಂಬೈ, ರಾಜಸ್ಥಾನ ನೇರವಾಗಿ ಕ್ವಾರ್ಟರ್‌ಗೆ

ಟೂರ್ನಿಯಲ್ಲಿ ಒಟ್ಟು 6 ತಂಡಗಳು ನೇರವಾಗಿ ಕ್ವಾರ್ಟರ್‌ಗೇರಿವೆ. ರಾಜಸ್ಥಾನ, ಹರ್ಯಾಣ, ಮುಂಬೈ, ವಿದರ್ಭ, ತಮಿಳುನಾಡು ತಂಡಗಳು ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಕ್ವಾರ್ಟರ್‌ಗೇರಿದರೆ, 2ನೇ ಸ್ಥಾನ ಪಡೆದ ತಂಡಗಳ ಪೈಕಿ ಉತ್ತಮ ಅಂಕ ಹೊಂದಿದ ಕಾರಣ ಕರ್ನಾಟಕಕ್ಕೂ ನೇರ ಅರ್ಹತೆ ಲಭಿಸಿತು. ಉಳಿದಂತೆ ಬಂಗಾಳ, ಗುಜರಾತ್‌, ಕೇರಳ, ಮಹಾರಾಷ್ಟ್ರ ತಮ್ಮ ತಮ್ಮ ಗುಂಪಿನಲ್ಲಿ 2ನೇ ಸ್ಥಾನಿಯಾಗಿ ಪ್ರಿ ಕ್ವಾರ್ಟರ್‌ ಪ್ರವೇಶಿಸಿದವು. ಪ್ರಿ ಕ್ವಾರ್ಟರ್‌ ಪಂದ್ಯಗಳು ಡಿ.9ಕ್ಕೆ ನಿಗದಿಯಾಗಿವೆ. ಡಿ.11ಕ್ಕೆ ಕ್ವಾರ್ಟರ್‌ ಫೈನಲ್‌, ಡಿ.13 ಹಾಗೂ 14ಕ್ಕೆ ಸೆಮಿಫೈನಲ್‌ ಪಂಧ್ಯಗಳು ನಡೆಯಲಿವೆ. ಡಿ.16ಕ್ಕೆ ಫೈನಲ್‌ ನಿಗದಿಯಾಗಿದೆ. ನಾಕೌಟ್‌ ಪಂದ್ಯಗಳಿಗೆ ರಾಜ್‌ಕೋಟ್‌ ಆತಿಥ್ಯ ವಹಿಸಲಿದೆ.

ನಾಕೌಟ್‌ ವೇಳಾಪಟ್ಟಿ

ಪ್ರಿ ಕ್ವಾರ್ಟರ್‌ 1: ಬಂಗಾಳ vs ಗುಜರಾತ್‌ (ಡಿ.9)

ಪ್ರಿ ಕ್ವಾರ್ಟರ್‌ 2: ಕೇರಳ vs ಮಹಾರಾಷ್ಟ್ರ (ಡಿ.9)

ಕ್ವಾರ್ಟರ್‌ ಫೈನಲ್‌ 1: ಹರ್ಯಾಣ vs ಪ್ರಿ ಕ್ವಾರ್ಟರ್‌ 1 ವಿಜೇತ ತಂಡ (ಡಿ.11)

ಕ್ವಾರ್ಟರ್‌ ಫೈನಲ್‌ 2: ರಾಜಸ್ಥಾನ vs ಪ್ರಿ ಕ್ವಾರ್ಟರ್‌ 2 ವಿಜೇತ ತಂಡ (ಡಿ.11)

ಕ್ವಾರ್ಟರ್‌ ಫೈನಲ್‌ 3: ಕರ್ನಾಟಕ vs ವಿದರ್ಭ (ಡಿ.11)

ಕ್ವಾರ್ಟರ್‌ ಫೈನಲ್‌ 4: ಮುಂಬೈ vs ತಮಿಳುನಾಡು (ಡಿ.11)

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಜಿಲ್ಲೆ

ಬೆಂಗಳೂರು ಕಂಬಳ, ಸಂಚಾರಿ ಪೊಲೀಸರಿಂದ ಮಾರ್ಗಸೂಚಿ

November 24, 2023
ಜಿಲ್ಲೆ

ಗೆದ್ದ 7 ತಿಂಗಳಲ್ಲಿ ನಾಲ್ಕನೇ ಬಾರಿ ಅಮೆರಿಕಕ್ಕೆ ಹಾರಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ

January 4, 2024
ಕ್ರೈಂ ಸುದ್ದಿಗಳುಜಿಲ್ಲೆಮುಖಪುಟ

ಹುಬ್ಬಳ್ಳಿ: ಹಣ ಡಬ್ಲಿಂಗ್‌ ಮಾಡುವುದಾಗಿ 50 ಕೋಟಿಗೂ ಹೆಚ್ಚು ಪಂಗನಾಮ..! ವಂಚನೆ ಮಾಡಿ ಪರಾರಿಯಾದ ಭೂಪ..!

April 9, 2025
ಜಿಲ್ಲೆ

ಶಿಕ್ಷಕಿ ಕೊಲೆಯಾದ 30 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ಪೊಲೀಸರು

January 24, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?