PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಸುಧಾಕರ್ ಸೋಲಿಗೆ ತಿಗಳ ಸಮುದಾಯ ಪಣ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಸಮಗ್ರ > ಸುಧಾಕರ್ ಸೋಲಿಗೆ ತಿಗಳ ಸಮುದಾಯ ಪಣ
ಸಮಗ್ರ

ಸುಧಾಕರ್ ಸೋಲಿಗೆ ತಿಗಳ ಸಮುದಾಯ ಪಣ

ಪ್ರತಿನಿಧಿ
Last updated: March 31, 2024 6:57 pm
ಪ್ರತಿನಿಧಿ
Published March 31, 2024
Share
SHARE
ಕೋಲಾರ: ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಲ್ಲಿ ಹೂಡಿ ವಿಜಯಕುಮಾರ್ ಅವರಿಗೆ ಟಿಕೆಟ್ ತಪ್ಪಿಸಲು ಕಾರಣರಾದ ಚಿಕ್ಕಬಳ್ಳಾಪುರ ಲೋಕಸಭಾ ಅಭ್ಯರ್ಥಿ ಡಾ.ಸುಧಾಕರ್ ವಿರುದ್ದ ನಮ್ಮ ಸಮುದಾಯ ಕೆಲಸ ಮಾಡಲಿದೆ ಎಂದು ರಾಜ್ಯ ತಿಗಳ ವಹ್ನಿಕುಲ ಸಂಘದ ನಿರ್ದೇಶಕ ಗೋಪಿ ತಿಳಿಸಿದರು.
ಸುಧಾಕರ್ ಅವರಿಗೆ ಹಿಂದುಳಿದ ಸಮುದಾಯಗಳೆಂದರೆ ಅಲರ್ಜಿ, ಆ ಕಾರಣದಿಂದಲೇ ನಮ್ಮ ಸಮುದಾಯದ ಹೂಡಿ ವಿಜಯಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿಸಿದರು ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಬಳ್ಳಾಪುರ, ಶಿಢ್ಲಘಟ್ಟ, ದೊಡ್ಡಬಳ್ಳಾಪುರದಲ್ಲಿ ನಮ್ಮ ಸಮುದಾಯದ ೧.೧೦ ಲಕ್ಷ ಮತದಾರರಿದ್ದು, ಅವರೆಲ್ಲರಿಗೂ ತಿಗಳ ಸಮುದಾಯಕ್ಕೆ ಅನ್ಯಾಯವಾಗಲು ಕಾರಣರಾದ ಸುಧಾಕರ್ ವಿರುದ್ದ ಕೆಲಸ ಮಾಡಲು ಕರೆ ನೀಡುವುದಾಗಿ ತಿಳಿಸಿದರು.
ಹೂಡಿ ವಿಜಯಕುಮಾರ್ ಅವರಿಗೆ ಸಮಾಜಸೇವೆಯ ಮೂಲಕ ಗುರುತಿಸಿಕೊಳ್ಳಿ, ನಿಮಗೆ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿದ್ದ ಸುಧಾಕರ್ ಕೊನೆ ಘಳಿಗೆಯಲ್ಲಿ ಅನ್ಯಾಯ ಮಾಡಿದರು. ಹಿಂದುಳಿದ ಸಮುದಾಯವಾಗಿರುವ ತಿಗಳರಲ್ಲಿ ಒಬ್ಬ ಶಾಸಕರಿಲ್ಲ, ಒಂದು ಬೋರ್ಡ್ ಅಧ್ಯಕ್ಷಗಿರಿ ಸಿಕ್ಕಿಲ್ಲ. ಎಲ್ಲ ಪಕ್ಷಗಳು ನಮಗೆ ಅನ್ಯಾಯ ಮಾಡಿವೆ ಎಂದರು.
 ತಿಗಳ ಸಮುದಾಯ ಹೂಡಿ ವಿಜಯಕುಮಾರ್ ಬೆನ್ನಿಗೆ ಇದ್ದಾರೆ, ಮಾಲೂರಿನಲ್ಲಿ ಅವರು ಸೋತರೂ ಜನರ ಹೃದಯದಲ್ಲಿ ಇದ್ದು ಮುಂದೆ ಅವರಿಗೆ ಒಳ್ಳೆಯ ಭವಿಷ್ಯವಿದೆ. ಸಣ್ಣ ಸಮುದಾಯಗಳ ಕುರಿತು ಕೀಳರಿಮೆ ಹೊಂದಿರುವ ಸುಧಾಕರ್ ಅವರ ವಿರುದ್ದ ನಾವು ಕೆಲಸ ಮಾಡುವುದಾಗಿ ತಿಳಿಸಿದರು.
ರಾಜ್ಯ ತಿಗಳ ವಹ್ನಿಕುಲ ಸಂಘದ ಸಂಘಟನಾ ಕಾರ್ಯದರ್ಶಿ ಮಂಜುನಾಥ್, ನರಸಾಪುರ ಗ್ರಾ.ಪಂ ಸದಸ್ಯ ಕುಮಾರ್, ಜಿಲ್ಲಾ ತಿಗಳ ಯುವವೇದಿಕೆ ಅಧ್ಯಕ್ಷ ಲಕ್ಷ್ಮೀಪತಿ ಕಾರ್ಯದರ್ಶಿ ದೇವರಾಜ್, ಮುಖಂಡ ಅಶೋಕ್ ಮತ್ತಿತರರಿದ್ದರು.
Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಸಮಗ್ರ

ರಾಜ್ಯಕ್ಕೆ ಬರಬೇಕಾದ ಕೇಂದ್ರದ ಹಣದಲ್ಲಿ 40000 ಕೋಟಿ ಇಳಿಕೆ

December 8, 2023
ಸಮಗ್ರ

ಬಸವ ತತ್ವ ಅಳವಡಿಸಿಕೊಂಡರೆ ಮಾತ್ರ ಜೀವನ ಧನ್ಯ

May 9, 2024
ನವದೆಹಲಿಮುಖಪುಟರಾಜಕೀಯಸಮಗ್ರ

ಮೋದಿ ಪ್ರಮಾಣವಚನ: ಇಡೀ ದೆಹಲಿಗೆ 3 ಹಂತದ ಭದ್ರತಾ ವ್ಯವಸ್ಥೆ

June 9, 2024
ಸಮಗ್ರ

ಗಾಂಜಾ ವಶ‌: ವ್ಯಕ್ತಿ ಬಂಧನ

July 10, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?