PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಜಿಲ್ಲಾಡಳಿತ ಮಧ್ಯಪ್ರವೇಶಿಸಿ ರಕ್ಷಣೆಗೆ ಒತ್ತಾಯ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಸಮಗ್ರ > ಜಿಲ್ಲಾಡಳಿತ ಮಧ್ಯಪ್ರವೇಶಿಸಿ ರಕ್ಷಣೆಗೆ ಒತ್ತಾಯ
ಸಮಗ್ರ

ಜಿಲ್ಲಾಡಳಿತ ಮಧ್ಯಪ್ರವೇಶಿಸಿ ರಕ್ಷಣೆಗೆ ಒತ್ತಾಯ

ಪ್ರತಿನಿಧಿ
Last updated: May 25, 2024 8:12 pm
ಪ್ರತಿನಿಧಿ
Published May 25, 2024
Share
SHARE
  • ಸೂಕ್ತ ದಾಖಲೆಗಳು ಇದ್ದರೂ ರೈತನಿಗೆ ವಿನಾಕಾರಣ ತೊಂದರೆ
  • ದಾನವಹಳ್ಳಿ ರೈತ ಹರೀಶ್ ಮನವಿ
  • ಪೋಲಿಸರ ದೌರ್ಜನ್ಯ ಮುಂದುವರೆದರೆ ಕುಟುಂಬವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಚ್ಚರ

ಕೋಲಾರ: ಸೂಕ್ತ ದಾಖಲೆಗಳು ಇದ್ದರೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ವೇಮಗಲ್ ಠಾಣೆಯ ಪೋಲೀಸರು ವಿನಾಕಾರಣ ತೊಂದರೆಗಳನ್ನು ನೀಡುತ್ತಿದ್ದು ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನಮಗೆ ರಕ್ಷಣೆ ನೀಡುವಂತೆ ದಾನವಹಳ್ಳಿ ರೈತ ಹರೀಶ್ ಮನವಿ ಮಾಡಿದರು.

ತಾಲೂಕಿನ ನರಸಾಪುರ ಹೋಬಳಿಯ ದಾನವಹಳ್ಳಿ ಗ್ರಾಮದ ಸರ್ವೆ ನಂ.೨ರಲ್ಲಿ ಸುಮಾರು ವರ್ಷಗಳ ಹಿಂದೆಯೇ ನಾವು ಸ್ವಂತವಾಗಿ ಖರೀದಿಸಿರುವ ಎರಡು ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಲು ಹೋದಾಗ ವಿನಾಕಾರಣ ದಾನವಹಳ್ಳಿ ಗ್ರಾಮದ ಅಶೋಕ್, ಕೆಂಪರಾಜು, ಅಂಜಿನಪ್ಪ ಸೇರಿದಂತೆ ಇತರರೊಂದಿಗೆ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿ  ಶಾಮೀಲಾಗಿ ತೊಂದರೆ ಕೊಡತ್ತಾರೆ ಎಂದು ಆರೋಪಿಸಿದರು.

ದಾನವಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 116 ಎಕರೆ ಗೋಮಾಳ ಜಮೀನು ಇದ್ದು, ಸುಮಾರು 1974ರಲ್ಲಿ ವೆಂಕಟಸ್ವಾಮಿ ಅವರಿಗೆ ಸರ್ಕಾರವೇ ಎರಡು ಎಕರೆ ಜಾಗವನ್ನು ಮಂಜೂರಾತಿ ಮಾಡಿದ್ದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ಸಹ ಇದ್ದು ಬೆಳಮಾರನಹಳ್ಳಿ ಗ್ರಾಮದ ಮುನಿಶ್ಯಾಮಪ್ಪನವರ ಮಗ ಡಿ.ಹಿರಣ್ಣಯ್ಯ ಅವರಿಗೆ ಮಾರಾಟ ಮಾಡಿ ಕ್ರಯಪತ್ರ ಸಹ ಮಾಡಿಕೊಟ್ಟಿದ್ದಾರೆ. ಕ್ರಯ ಪತ್ರದ ಅನ್ವಯ ಹಿರಣ್ಣಯ್ಯ ಅವರಿಗೆ ಕಂದಾಯ ಇಲಾಖೆಯಿಂದ ದಾಖಲೆಗಳನ್ನು ನಮೂದಿಸಲಾಗಿದೆ. ಇದರಲ್ಲಿ ಯಾವುದೇ ತಪ್ಪು ದಾಖಲೆಗಳು ಇಲ್ಲ ಬೇಕಿದ್ದರೆ ಅಧಿಕಾರಿಗಳು ಪರಿಶೀಲನೆ ನಡೆಸಲಿ ಅದು ಬಿಟ್ಟು ತೊಂದರೆ ಕೊಡಬಾರದು ಎಂದು ತಿಳಿಸಿದರು.

ಕಂದಾಯ ಇಲಾಖೆಯ ದಾಖಲೆಗಳನ್ನು ಮತ್ತು ಮಾಲೀಕನ ದಾಖಲೆಗಳನ್ನು ನೋಡಿ ಹಿರಣ್ಣಯ್ಯ ಅವರಿಂದ 2006 ರಲ್ಲಿ ದಾನವಹಳ್ಳಿ ಗ್ರಾಮದ ಟಿ.ರಮೇಶ್ ಸಹೋದರರಾದ ಟಿ.ಮುನೇಗೌಡ, ಟಿ.ವೆಂಕಟೇಶ್ ಅವರಿಗೆ ಕ್ರಯ ಮಾಡಿಕೊಟ್ಟಿದ್ದಾರೆ ಸದರಿ ಕ್ರಯ ಪತ್ರದ ಆಧಾರದಲ್ಲಿ ಅವರ ಹೆಸರಿನಲ್ಲಿ ಪಹಣಿ ಸಹ ಆಗಿದ್ದು ಕಳೆದ ಮೂರು ನಾಲ್ಕು ತಿಂಗಳಿಂದ ನಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಲು ಬಿಡುತ್ತಿಲ್ಲ ಜತೆಗೆ ಜಮೀನಿಗೆ ಹಾಕಲಾಗಿರುವ ಕಲ್ಲು‌ ಚಪ್ಪಡಿಗಳ ಕಾಂಪೌಂಡ್ ಅನ್ನು ನಾಶ ಮಾಡಿದ್ದಾರೆ ಎಂದು ಆರೋಪಿಸಿದರು.

- ಜಾಹೀರಾತು -

ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿ ಯಾರ ಬಳಿ‌ ಸೂಕ್ತ ದಾಖಲೆಗಳು ಇವೆ ಅವರಿಗೆ ಜಮೀನನ್ನು ಗುರುತಿಸಿ ಕೊಡಲಿ‌. ಅದನ್ನು ಬಿಟ್ಟು ದಾಖಲೆಗಳನ್ನು ತೋರಿಸದೇ ವಿನಾಕಾರಣ ನಮಗೆ ತೊಂದರೆ ಕೊಡತ್ತಾರೆ. ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ನಮಗೆ ನ್ಯಾಯ ಕೊಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅವರಿಗೆ ಸಹ ಮನವಿ ಸಲ್ಲಿಸಲಾಗಿದೆ. ಇದೇ ರೀತಿಯಲ್ಲಿ ಪೋಲಿಸರ ದೌರ್ಜನ್ಯ ದಬ್ಬಾಳಿಕೆ ಮುಂದುವರೆದರೆ ನಮ್ಮ ಕುಟುಂಬವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಗ್ರಾಮಸ್ಥರಾದ ಶ್ರೀನಿವಾಸ್ ಚಂದ್ರಪ್ಪ ಇದ್ದರು.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಸಮಗ್ರ

ರೋಗಿಗಳಿಗೆ ಗುಣಮಟ್ಟದ ಸೇವೆ ನೀಡಿ

March 20, 2024
ಜಿಲ್ಲೆಮುಖಪುಟಸಮಗ್ರ

ರಾಯಚೂರಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ದೇಗುಲ ತೆರವು.. ಘರ್ಜಿಸಿದ ಬುಲ್ಡೋಜರ್..!

November 20, 2024
ಸಮಗ್ರ

ಗೃಹಲಕ್ಷ್ಮೀ ಸಮಸ್ಯೆ ಶೀಘ್ರ ಪರಿಹಾರ

July 5, 2024
ಸಮಗ್ರ

ಕಾಂಗ್ರೆಸ್ ಮನೆ ಒಂದು, ನೂರು ಬಾಗಿಲು

March 27, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?