PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಕೊಡಗು ಗೌಡ ಕ್ರೀಡಾಕೂಟಕ್ಕೆ ಬೆಳ್ಳಿಹಬ್ಬದ ಸಂಭ್ರಮ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಕೊಡಗು > ಕೊಡಗು ಗೌಡ ಕ್ರೀಡಾಕೂಟಕ್ಕೆ ಬೆಳ್ಳಿಹಬ್ಬದ ಸಂಭ್ರಮ
ಕೊಡಗು

ಕೊಡಗು ಗೌಡ ಕ್ರೀಡಾಕೂಟಕ್ಕೆ ಬೆಳ್ಳಿಹಬ್ಬದ ಸಂಭ್ರಮ

ಪ್ರತಿನಿಧಿ
Last updated: April 14, 2024 6:34 pm
ಪ್ರತಿನಿಧಿ
Published April 14, 2024
Share
SHARE

ಲೆದರ್ ಬಾಲ್ ಕ್ರಿಕೆಟ್, ಮಹಿಳಾ ಕ್ರಿಕೆಟ್, ಸಾಂಸ್ಕೃತಿಕ ಕಾರ್ಯಕ್ರಮ ಅಯೋಜನೆ

ಸಣ್ಣುವಂಡ ಕಿಶೋರ್ ನಾಚಪ್ಪ ಮಡಿಕೇರಿ
ಕೊಡಗು ಗೌಡ ಯುವ ವೇದಿಕೆ ಆಯೋಜಿಸುವ ಗೌಡ ಕ್ರೀಡಾಕೂಟ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು, ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಎಪ್ರಿಲ್ 17 ರಿಂದ ಎ. 28 ರವರೆಗೆ ಆಯೋಜಿಸಲಾಗಿದೆ. ಲೆದರ್ ಬಾಲ್ ಕ್ರಿಕೆಟ್, ಮಹಿಳಾ ಕ್ರಿಕೆಟ್, ಸಾಂಸ್ಕೃತಿಕ ಕಾರ್ಯಕಮಗಳೊಂದಿಗೆ ಗೌಡರು ಸಮಾಗಮ ಗೊಳ್ಳಲಿದ್ದಾರೆ.
ಕ್ರೀಡಾಕೂಟದಲ್ಲಿ ಮೊದಲ ಹಂತವಾಗಿ ಲೆದರ್‌ಬಾಲ್ ಕ್ರಿಕೆಟ್ ನಡೆಯಲಿದೆ. ಎ. 17 ರಿಂದ ಎ. 28ರವರೆಗೆ 10 ತಂಡಗಳು ಕಪ್‌ಗಾಗಿ ಸೆಣೆಸಲಿವೆ. ಎ. 27 ಮತ್ತು 28 ರಂದು ಮಹಿಳಾ ಕ್ರಿಕೆಟ್ ನಡೆಯಲಿದೆ. 6 ತಂಡಗಳು ಭಾಗವಹಿಸಲಿವೆ. ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಗ್ರಾಮವಾರು ಸಾಂಸ್ಕöÈತಿಕ ಪೈಪೋಟಿ ನಡೆಯಲಿದೆ.
ಈಗಾಗಲೇ ಬಿಡ್ಡಿಂಗ್ ಪ್ರಕ್ರಿಯೆ ಮುಗಿದಿದ್ದು, ಕೊನೆಯ ಹಂತದ ಸಿದ್ದತೆ ನಡೆಯುತ್ತಿದೆ. ಟೋಟಲ್ 1 ಸ್ಟಾಪ್ ಟೂಲ್ಸ್ ಜಿಪಿಎಲ್ ಪವರ್ಡ್ ಬೈ ತುಂತುರು ಕ್ರೀಡಾಕೂಟದ ಟೈಟಲ್ ಪ್ರಾಯೋಜಕತ್ವ ಪಡೆದುಕೊಂಡಿದೆ. ಯೂಟ್ಯೂಬ್ ಮೂಲಕ ನೇರ ಪ್ರಸಾರದಲ್ಲಿ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಮೈದಾನದಲ್ಲಿ ಡಿಜಿಟಲ್ ಎಲ್‌ಇಡಿ ಸ್ಕೋರ್ ಬೋಡ್ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಪ್ರೇಕ್ಷಕರಿಗೆ ಅನುಕೂಲವಾಗಲು ಮಳಿಗೆಗಳು ಮತ್ತು ಇತರ ಆಟೋಟ ಚಟುವಟಿಕೆಗಳ ಮಳಿಗೆಗಳನ್ನು ತೆರೆಯಲಾಗುತ್ತಿದೆ.

ಮಹಿಳಾ ಕ್ರಿಕೆಟ್ ; ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 10 ಕುಟುಂಬ 18 ಗೋತ್ರದ ಮುಕ್ತ ಮಹಿಳಾ ಕ್ರಿಕೆಟ್ ನಡೆಯಲಿದ್ದು, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಜನಾಂಗದ ಮಹಿಳೆಯರಿಗಾಗಿ ಪ್ರಪ್ರಥಮ ಬಾರಿಗೆ ಕ್ರಿಕೆಟ್ ಕಪ್ ನಡೆಸಲಾಗುತ್ತಿದೆ. 5 ಓವರ್ ಪಂದ್ಯ ನಡೆಯಲಿದೆ. ಓವರ್ ಆರ್‌ಮ್ ಬೌಲಿಂಗ್‌ನೊಂದಿಗೆ ಥ್ರೋ ಬೌಲಿಂಗ್‌ಗೂ ಅವಕಾಶ ಇದೆ. ವುಮೆನ್ ಆಫ್ ದ ಟೂರ್ನಮೆಂಟ್, ವುಮೆನ್ ಆಫ್‌ದ ಮ್ಯಾಚ್, ಬೆಸ್ಟ್ ಬ್ಯಾಟರ್, ಬೆಸ್ಟ್ ವಿಕೆಟ್ ಕೀಪರ್ ಪ್ರಶಸ್ತಿ ನೀಡಲಾಗುತ್ತಿದೆ. ಮಹಿಳಾ ಕ್ರಿಕೆಟ್ ನಡೆಸಿಕೊಡಲು ತಂಡವನ್ನು ರಚಿಸಲಾಗಿದೆ. ಸಂಚಾಲಕರಾಗಿ ಪುದಿಯನೆರವನ ರೇವತಿ ರಮೇಶ್, ಗೌರವ ಸಲಹೆಗಾರರಾಗಿ ಮೂಟೆರ ಪುಷ್ಪಾವತಿ, ಸಹ ಸಂಚಾಲಕರಾಗಿ ಚೊಕ್ಕಾಡಿ ಪ್ರೇಮ ರಾಘವಯ್ಯ, ತಳೂರು ಉಷಾರಾಣಿ, ದುಗ್ಗಳ ಕಾವ್ಯ, ಕುದುಕುಳಿ ಇಂದಿರಾ ಭರತ್, ಪಡನೋಳನ ಪವಿತ್ರ ಜವಾಬ್ದಾರಿ ನಿಭಾಯಿಸಲಿದ್ದಾರೆ.
ಲೆದರ್‌ಬಾಲ್ ತಂಡಗಳು ; ಮಡಿಕೇರಿ ಚಾಂಪಿಯನ್ ಬಾವಾಸ್, ಕೂರ್ಗ್ ವಾರಿಯರ್ಸ್, ಕಾಫಿ ಕ್ರಿಕೆಟರ್ಸ್,   ಬಿಳಿಗೇರಿ ಪ್ಲಾಂಟರ್ಸ್ ಕ್ಲಬ್, ಫೋನೆಕ್ಸ್  , ದ ಎಲೈಟ್ ಕ್ಲಬ್, ಎಲೈಟ್ ಕ್ರಿಕೆಟ್ ಕ್ಲಬ್, ಜಿ. ಕಿಂಗ್ ಸಿದ್ದಲಿಂಗಪುರ, ದ ಮಾರ್ಗೋಡಿಯನ್ಸ್.
ಸಂಚಿಕೆ ; ಕ್ರೀಡಾಕೂಟ ನಂತರ ಕೊಡಗು ಗೌಡ ಯುವ ವೇದಿಕೆ 25 ವರ್ಷದ ಸಂಭ್ರಮದ ಸ್ಮರಣ ಸಂಚಿಕೆ ಹೊರ ತರಲಾಗುತ್ತಿದೆ. ಗೌಡ ಜನಾಂಗದ ಇತಿಹಾಸ ಆಚಾರ ವಿಚಾರಗಳು ಮತ್ತು ಗೌಡ ಜನಾಂಗದ ಮೊಬೈಲ್ ಫೋನ್ ಡೈರೆಕ್ಟರಿ ಹಾಗೂ ಪ್ರಾಯೋಜಕರ ಫೋಟೋಗಳು ಮತ್ತು ಪ್ರಯೋಜಕ ಸಂಸ್ಥೆಯ ಮಾಹಿತಿ ಹಂಚಿಕೊಳ್ಳಲಾಗುತ್ತದೆ.
ಟ್ರೋಫಿ ; ಗೌಡ ಜನಾಂಗದ 10 ಕುಟುಂಬ 18 ಗೋತ್ರ ಸಾಂಪ್ರದಾಯಿಕ ವೈಶಿಷ್ಟತೆಯನ್ನು ಟ್ರೋಫಿಯಲ್ಲಿ ಚಿತ್ರಸಿದ್ದಾರೆ. ಕತ್ತಿ, ಕೋವಿ, ಕುಲದೈವ ವೆಂಕಟರಮಣ, ಕೃಷಿ ಹಿನ್ನೆಲೆ ಭತ್ತದ ತೆನೆಯನ್ನು ಕಾಣಬಹುದಾಗಿದೆ.

25 ವರ್ಷಗಳಿಂದ ಜಿಲ್ಲೆಯ ಗೌಡ ಜನಾಂಗದವರನ್ನು ಒಟ್ಟುಗೂಡಿಸಿ ಅತ್ಯುತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಯುವ ಪ್ರತಿಭೆಗಳನ್ನು ಆಹ್ವಾನಿಸಿ ವೇದಿಕೆ ಕಲ್ಪಿಸಿದೆ. ಜನಾಂಗದ ಸಂಪ್ರದಾಯ, ಆಚಾರ, ವಿಚಾರ, ಸಂಸ್ಕೃತಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪೋಷಿಸುತ್ತಿದೆ.  ಪಾಣತ್ತಲೆ ಜಗದೀಶ್ ಮಂದಪ್ಪ, ಅಧ್ಯಕ್ಷರು, ಯುವ ವೇದಿಕೆ

- ಜಾಹೀರಾತು -

ಫೋಟೋ 14 ಎಂಡಿಕೆ 03 ; ಗೌಡ ಜನಾಂಗದ 10 ಕುಟುಂಬ 18 ಗೋತ್ರ ಸಾಂಪ್ರದಾಯಿಕ ವೈಶಿಷ್ಟತೆಯ ಟ್ರೋಫಿ.
04 ; ಗೌಡ ಕ್ರಿಕೆಟ್ (ಸಂಗ್ರಹಚಿತ್ರ)
05 ; ಪಾಣತ್ತಲೆ ಜಗದೀಶ್ ಮಂದಪ್ಪ.

 

 

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಕೊಡಗು

ಶ್ರೀ ರಾಮಲಿಂಗೇಶ್ವರ ಬ್ರಹ್ಮರಥೋತ್ಸವ

April 21, 2024
ಕೊಡಗುಜಿಲ್ಲೆಮುಖಪುಟ

ಅನ್ನಭಾಗ್ಯದ ಅಕ್ಕಿ ಕಾಳಸಂತೆಯಲ್ಲಿ ಮಾರಾಟ..! ಮೂರು ಕ್ವಿಂಟಾಲ್‌ಗಿಂತಲೂ ಹೆಚ್ಚು ಅಕ್ಕಿ ವಶಕ್ಕೆ ಪಡೆದ ಅಧಿಕಾರಿಗಳು..!

August 1, 2025
ಕೊಡಗುಮುಖಪುಟ

ಸಕಲೇಶಪುರದಲ್ಲಿ ವರುಣನ ರೌದ್ರಾವತಾರ..! ರಣಭೀಕರ ಮಳೆಗೆ ರಸ್ತೆಯಲ್ಲಾ ಜಲಾವೃತ

October 24, 2024
ಕೊಡಗು

ಕೌಟುಂಬಿಕ ಸಂತೋಷಕೂಟ

June 12, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?