PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ತಲಕಾಡಿನಲ್ಲಿ ಸಡಗರದಿಂದ ಆಚರಿಸಿದ ರಂಜಾನ್‌ ಹಬ್ಬ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮೈಸೂರು ಗ್ರಾಮಾಂತರ > ತಲಕಾಡಿನಲ್ಲಿ ಸಡಗರದಿಂದ ಆಚರಿಸಿದ ರಂಜಾನ್‌ ಹಬ್ಬ
ಮೈಸೂರು ಗ್ರಾಮಾಂತರ

ತಲಕಾಡಿನಲ್ಲಿ ಸಡಗರದಿಂದ ಆಚರಿಸಿದ ರಂಜಾನ್‌ ಹಬ್ಬ

ಪ್ರತಿನಿಧಿ
Last updated: April 12, 2024 7:10 pm
ಪ್ರತಿನಿಧಿ
Published April 12, 2024
Share
SHARE

ಪ್ರತಿನಿಧಿ ವರದಿ ತಲಕಾಡು

ಮಳೆಯಿಲ್ಲದೆ ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಜನತೆ ಎದುರಿಸುತ್ತಿರುವ ಬರದ ಸಂಕಷ್ಟ ನಿವಾರಿಸಲು ಸಕಾಲದಲ್ಲಿ ಮಳೆ ಕೃಪೆ ಕರುಣಿಸುವಂತೆ ತಲಕಾಡಿನ ಮಸೀದಿ ಧರ್ಮಗುರುಗಳು ದೇವರಲ್ಲಿ (ಅಲ್ಲಾ) ಸಾಮೂಹಿಕ ವಿಶೇಷ ಪ್ರಾರ್ಥನೆ ನೆರವೇರಿಸಿದರು.

ಗುರುವಾರ ತಲಕಾಡಿನಲ್ಲಿ ನಡೆದ ಈದ್-ಉಲ್-ಫಿತರ್ (ರಂಜಾನ್) ಹಬ್ಬದ ಅಂಗವಾಗಿ, ಇಲ್ಲಿನ ವಡೆಯಾಂಡಹಳ್ಳಿ ಈದ್ಗಾ ಮೈದಾನದಲ್ಲಿ ಜರುಗಿದ ವಿಶೇಷ ನಮಾಜ್ ಹಾಗೂ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು, ತಲಕಾಡು, ಬಿ.ಶೆಟ್ಟಹಳ್ಳಿ ವ್ಯಾಪ್ತಿಯ ಸಮಸ್ತ ಮುಸ್ಲಿಂ ಬಾಂಧವರು ಬೆಳಗ್ಗೆ ಜಾಮೀಯ ಮಸೀದಿ ಬಳಿ ಒಗ್ಗೂಡಿ ಮೆರವಣಿಗೆಯಲ್ಲಿ ಸಾಗಿದರು.

ಮಸೀದಿ ಧರ್ಮಗುರುಗಳು ಈದ್ಗಾ ಮೈದಾನದಲ್ಲಿ ನಮಾಜ್ ಹಾಗೂ ಕುರಾನ್ ಅಧ್ಯಾಯ ಪ್ರವಚನ ನೆರವೇರಿಸಿದ ನಂತರ, ನಾಡಿನ ಜನತೆಗೆ ಮಳೆಯಿಲ್ಲದೆ ರಣಬರಗಾಲ ಎದುರಾಗಿದೆ. ಜನ ಸೇರಿದಂತೆ ಪ್ರಾಣಿ ಪಕ್ಷಿಗಳೂ ನೀರಿಲ್ಲದೆ ಸಂಕಷ್ಟಕ್ಕೆ ಗುರಿಯಾಗಿವೆ. ಕರುಣಾಮಯಿ ದೇವರು ನಾಡಿಗೆ ಮಳೆ ಕೃಪೆ ತೋರುವಂತೆ ಪ್ರಾರ್ಥಿಸಿದರು.

- ಜಾಹೀರಾತು -

ಹಬ್ಬದ ಸಂಭ್ರಮ:

ಇದ್ದವರು ಇಲ್ಲದವರಿಗೆ ನೀಡಬೇಕು ಎಂಬ ಮಹತ್ವದ ಸಂದೇಶ ಸಾರುವ ಹಾಗೂ ತ್ಯಾಗ ಭಾವೈಕ್ಯತೆ ಬಾಂಧವ್ಯದ ಸಂಕೇತಾದ ರಂಜಾನ್ ಹಬ್ಬವನ್ನು ಇಲ್ಲಿಯ ಮನೆ ಮನೆಗಳಲ್ಲಿ ಸಂಭ್ರಮದಿಂದ ಆಚರಿಸಿದರು.

ರಂಜಾನ್ ನಲ್ಲಿ ಒಂದು ತಿಂಗಳ ಕಠಿಣ ರೋಝಾವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದ ಸಂತಸದಲ್ಲಿ, ಬೆಳಗ್ಗೆ 10ಕ್ಕೆ ಜಾಮಿಯಾ ಮಸೀದಿ ಬಳಿ ಒಗ್ಗೂಡಿದ ಮುಸ್ಲಿಂ ಬಾಂಧವರು, ವಡೆಯಾಂಡಹಳ್ಳಿ ಈದ್ಗಾ ಮೈದಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ತಂಪು ನೆರಳಲ್ಲಿ ಪ್ರಾರ್ಥನೆ:

ಲೇಟ್ ಸೈಯದ್ ಅತಾವುಲ್ಲ ಸ್ಥಳೀಯರು, ಇಲ್ಲಿನ ಈದ್ಗಾ ಮೈದಾನದಲ್ಲಿ ಬಿಸಿಲಿನಲ್ಲಿ ಪ್ರಾರ್ಥನೆ ಸಲ್ಲಿಸುವವರಿಗೆ ನೆರಳು ನೀಡಲೆಂದು, ಛತ್ರಿಮರದ ಎರಡು ಗಿಡನೆಟ್ಟು ವರ್ಷಗಳ ಕಾಲ ನೀರು ಹೊತ್ತು ತಂದು ಪೋಷಿಸಿ ಹೆಮ್ಮರವಾಗಿ ಬೆಳೆಸಲು ನೆರವಾಗಿದ್ದರು, ಇದರಿಂದ ಬೇಸಿಗೆ ರಣಬಿಸಿಲಿನಲ್ಲಿ ಈದ್ಗಾ ಮೈದಾನಕ್ಕೆ ತೆರಳಿ ಪ್ರತಿವರ್ಷ ಪ್ರಾರ್ಥನೆ ಸಲ್ಲಿಸುವವರಿಗೆ ತಂಪಾದ ನೆರಳು ನೀಡಲು ನೆರವಾಗಿದೆ.

ದುವಾ ಬಳಿಕ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಗ್ರಾಮದ ಎರಡು ಖಬರಸ್ಥಾನಗಳಿಗೆ ಧರ್ಮ ಗುರುಗಳೊಂದಿಗೆ ತೆರಳಿ ಮೃತರ ಆತ್ಮಕ್ಕೆ ಜನ್ನತ್ ಕಿ ಮಕ್ಫಿರತ್ ಶಾಂತಿ ಕರುಣಿಸಲು ಪ್ರಾರ್ಥಿಸಿದರು. ಹಬ್ಬಕ್ಕೆ ಸೂಕ್ತ ಪೊಲೀಸ್ ಭದ್ರತೆಯನ್ನು ತಲಕಾಡು ಆರಕ್ಷಕ ಠಾಣೆಯವರು ಒದಗಿಸಿದ್ದರು. ಹಬ್ಬದ ಉಸ್ತುವಾರಿಯನ್ನು ಇಲ್ಲಿನ ಜಾಮಿಯಾ ಮಸೀದಿ ಕಮಿಟಿ ವಹಿಸಿತ್ತು.

ಚಿತ್ರಶೀರ್ಷಿಕೆ :- 1,2,3,4

ತಲಕಾಡಿನಲ್ಲಿ ಗುರುವಾರ ಜರುಗಿದ ರಮ ಝಾನ್ ಹಬ್ಬದ ಮೆರವಣಿಗೆಯಲ್ಲಿ ಸಾಗುತ್ತಿರುವ ಮುಸ್ಲೀಂ ಬಾಂಧವರು ಹಾಗು ವಡೆಯಾಂಡಹಳ್ಳಿ ಈದ್ಗಾ ಮೈದಾನದಲ್ಲಿ ನಮಾಝ್ ಹಾಗು ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

Oplus_131072
Oplus_0
Oplus_0
Oplus_0
Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಮೈಸೂರು ಗ್ರಾಮಾಂತರ

ಚೆಕ್‌ಪೋಸ್ಟ್ ನಲ್ಲಿ ಹಣ ವಶ

March 31, 2024
ಮುಖಪುಟಮೈಸೂರು ಗ್ರಾಮಾಂತರ

ಹುಲಿ ದಾಳಿಯಿಂದ ಗಾಯಗೊಂಡಿರುವ ರೈತನಿಗೆ 25 ಲಕ್ಷ ಪರಿಹಾರ ನೀಡುವಂತೆ ರೈತ ಸಂಘದಿಂದ ಪ್ರತಿಭಟನೆ 

October 18, 2025
ಚುನಾವಣೆಮುಖಪುಟಮೈಸೂರು ಗ್ರಾಮಾಂತರಮೈಸೂರು ನಗರರಾಜಕೀಯ

ಸಮಾಜದ ಪರಿಸ್ಥಿತಿ ಬದಲಿಸುವ ಉದ್ದೇಶದಿಂದ ನಾನು ರಾಜಕೀಯಕ್ಕೆ ಬಂದಿದ್ದೇನೆ : ಯದುವೀರ್‌ ಒಡೆಯರ್‌

March 23, 2024
ಮೈಸೂರು ಗ್ರಾಮಾಂತರ

ಅಧ್ಯಕ್ಷ, ಉಪಾಧ್ಯಕ್ಷರಾಗಿ ಪ್ರಸನ್ನಕುಮಾರ್, ಮೋಹನ್‌ ಕುಮಾರ್‌ ಆಯ್ಕೆ

March 26, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?