PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಭಕ್ತರಿಂದ ಪೊಮ್ಮಂಗಲ ಹರಕೆ ಅರ್ಪಣೆ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಕೊಡಗು > ಭಕ್ತರಿಂದ ಪೊಮ್ಮಂಗಲ ಹರಕೆ ಅರ್ಪಣೆ
ಕೊಡಗು

ಭಕ್ತರಿಂದ ಪೊಮ್ಮಂಗಲ ಹರಕೆ ಅರ್ಪಣೆ

ಪ್ರತಿನಿಧಿ
Last updated: April 5, 2024 5:11 pm
ಪ್ರತಿನಿಧಿ
Published April 5, 2024
Share
SHARE

ಪ್ರತಿನಿಧಿ ವರದಿ ಬಿರುನಾಣಿ

ಪಾಕೇರಿನಾಡ್ ಶ್ರೀ ಪುತ್ತ್ ಭಗವತಿ ದೇವರ ವಾರ್ಷಿಕ ಉತ್ಸವದಲ್ಲಿ ಗಂಡು ಹೆಣ್ಣಿನಂತೆ, ಹೆಣ್ಣು ಗಂಡಿನ ವೇಷ ತೊಟ್ಟು ಹರಕೆ ತೀರಿಸಿಕೊಂಡರು.
ಪೊಮ್ಮಂಗಲ ಹೆಸರಿನಲ್ಲಿ ನೆರವೇರಿದ ಆಚರಣೆಯಲ್ಲಿ ಗಂಡು ಮಗುವನ್ನು ಹೆಣ್ಣಿನಂತೆ ಸೀರೆ ತೊಡಿಸಿ, ಮದುವೆ ವಧುವಂತೆಯೂ, ಹೆಣ್ಣು ಮಗುವನ್ನು ಗಂಡಿನ ಕುಪ್ಯಚೇಲೆ, ಪೀಚೆಕತ್ತಿ, ಮಂಡೆತುಣಿ ತೊಡಿಸಿ ಕೊಡವ ವರನಂತೆ ದೇವರ ದರ್ಶನಕ್ಕೆ ಒಪ್ಪಿಸಲಾಯಿತು. ಮದುವೆ ಅಚರಣೆಯಂತೆ ಹರಕೆ ಸಲ್ಲಿಸಲಾಯಿತು.
ಮನೆಯಲ್ಲಿ ಸಾಂಪ್ರದಾಯಿಕ ಆಚರಣೆ ಬಳಿಕ ಮನೆಯಿಂದ ದುಡಿಕೊಟ್ಟ್ ಪಾಟ್‌ನೊಂದಿಗೆ ದೇವಸ್ಥಾನಕ್ಕೆ ಆಗಮಿಸಿ, ಹರಕೆ ಒಪ್ಪಿಸಲು ದೇವಸ್ಥಾನ ಸುತ್ತಾ ಪ್ರದಕ್ಷಿಣೆ ಹಾಕಲಾಯಿತು. ಹರಕೆ ಹೊತ್ತವರು ದೇವಿಗೆ ಹರಕೆ ಒಪ್ಪಿಸುವ ಪದ್ಧತಿ ನಡೆಸಲಾಯಿತು. ಚೂಚಂಬಲಿ, ಸಂಜೆ ದೇವರು ಹೊರ ಬಂದು ದೇವಸ್ಥಾನದ ಸುತ್ತ ಪ್ರದಕ್ಷಿಣೆ, ರಾತ್ರಿ ಪಳ್ಳಿ ಬೇಟೆ, ಮಹಾಮಂಗಳಾರತಿ ನೆರವೇರಿತು.
ಸುಮಾರು 700 ವರ್ಷಗಳ ಇತಿಹಾಸ ಹೊಂದಿರುವ ಸ್ಥಾನದಲ್ಲಿ ಕೊಡಿಮರ ನಿಲ್ಲಿಸುವ ಮೂಲಕ ಆರಂಭಗೊಂಡ ಉತ್ಸವದಲ್ಲಿ ವಿವಿಧ ಪೂಜಾ ಕೈಂಕರ್ಯ, ಸಾಂಪ್ರದಾಯಿಕ ಆಚರಣೆಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಮಹಾಪೂಜೆ, ತುಲಾಭಾರ ಸೇವೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ, ಸಂಜೆ ದೇವರ ದರ್ಶನ, ಅವಭೃತ ಸ್ನಾನಕ್ಕೆ ಮೆರವಣಿಗೆಯ ಮೂಲಕ ಪರಕಟಗೇರಿ ಮುಖ್ಯ ರಸ್ತೆಯಲ್ಲಿ ಹೊಳೆಗೆ ಸಾಗಿ ದೇವಸ್ಥಾನಕ್ಕೆ ಆಗಮಿಸಿತು. ರಾತ್ರಿ ದೇವರ ನೃತ್ಯ ದರ್ಶನ, ವಸಂತ ಪೂಜಾ ಕೈಂಕರ್ಯದೊಂದಿಗೆ ಪ್ರಸಕ್ತ ಸಾಲಿನ ಉತ್ಸವ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.

ಫೋಟೋ 5 ಎಂಡಿಕೆ 04 ; ಬಿರುನಾಣಿ ಪುತ್ತ್ ಭಗವತಿ ದೇವಿಯ ವಾರ್ಷಿಕೋತ್ಸವದಲ್ಲಿ ಪೊಮ್ಮಂಗಲ ಹರಕೆ ಹೊತ್ತವರು.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಕೊಡಗು

ಜಿಲ್ಲೆಗೆ ಅಶ್ವಥ್ ನಾರಾಯಣ್ ಭೇಟಿ

July 31, 2024
ಕೊಡಗು

ವಿವಿಧ ಧಾರ್ಮಿಕ ಕೇಂದ್ರಗಳಿಗೆ ಶಾಸಕ ಪೊನ್ನಣ್ಣ ಭೇಟಿ

March 24, 2024
ಕೊಡಗು

ಕೊಡಗಿನಲ್ಲಿ ಇನ್ನು ಕೃಷಿ ಸಂಭ್ರಮ

June 9, 2024
ಕೊಡಗು

ಸ್ವಾಮಿಯ ಆಶೀರ್ವಾದ

March 24, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?