ಮೈಸೂರು: ಪರಿವಾರ, ತಳವಾರ ಸಮುದಾಯ ಎಸ್ಟಿಗೆ ಸೇರಿಸಿದ್ದು ನಿಮ್ಮ ಪ್ರತಾಪ್ ಸಿಂಹ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ. ಮಾಧ್ಯಮಪ್ರತಿನಿಧಿಗಳೊಂದಿಗೆ ಈ ವಿಚಾರವಾಗಿ ಮಾತನಾಡಿದ ಅವರು, ಪರಿವಾರ, ತಳವಾರ ಸಮುದಾಯದ ಸಮಸ್ಯೆ ಸುಮಾರು 38- 40 ವರ್ಷಗಳಿಂದ ಇತ್ತು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕೂಡ ಸಂಸದರಾಗಿದ್ದರು. ಸಿ.ಎಚ್.ವಿಜಯಶಂಕರ್, ವಿಶ್ವನಾಥ್ ಸೇರಿದಂತೆ ಸಾಲು ಸಾಲು ಸಂಸದರು ಬಂದು ಹೋಗಿದ್ದಾರೆ. ಯಾರಿಗೂ ಪರಿವಾರ, ತಳವಾರ ಸಮುದಾಯದ ಬೇಡಿಕೆಗೆ ಸ್ಪಂದಿಸಲು ಆಗಲಿಲ್ಲ. ನಾನು ಸಂಸದನಾಗಿ ಭರವಸೆ ಕೊಟ್ಟಿದ್ದೆ. ಚಾಮರಾಜನಗರದಲ್ಲಿ ಸಮಾವೇಶದಲ್ಲಿ ಅಶ್ವಾಸನೆ ಕೊಟ್ಟಿದ್ದೆವು. ಬಜೆಟ್ ಅಧಿವೇಶನದಲ್ಲಿ ತಳವಾರ, ಪರಿವಾರ ಸಮುದಾಯವನ್ನು ಎಸ್ ಟಿಗೆ ಸೇರಿಸಿ ಆದೇಶ ಹೊರಡಿಸಲಾಯ್ತು ಎಂದು ಹೇಳಿದರು.
