ಮೈಸೂರು: ಶಕ್ತಿ ಯೋಜನೆ ಫಲವಾಗಿ ನಗರ, ಗ್ರಾಮಾಂತರ ಪ್ರದೇಶ ಸೇರಿ ಮೈಸೂರಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಳಕೆದಾರರ ಸಂಖ್ಯೆ ನಿಗದಿಗಿಂತ 1.50 ಲಕ್ಷ ಹೆಚ್ಚಳವಾಗಿದೆ. ಈ ಬದಲಾವಣೆಯಿಂದ ಕೆಲ ವರ್ಷಗಳ ಹಿಂದೆ ನಷ್ಟದಲ್ಲಿ ನಡೆಸಲಾಗುತ್ತಿದ್ದ ಸಾರಿಗೆ ಸೇವೆಯು ಇದೀಗ ಲಾಭದಾಯಕವಾಗಿ ಪರಿಣಮಿಸಿದೆ. ಪ್ರತಿಯೊಂದು ಬಡಾವಣೆ, ಗ್ರಾಮಗಳಿಗೂ ಸರಕಾರಿ ಬಸ್ ಸೇವೆ ಕೊಡಿ ಎಂಬ ಬೇಡಿಕೆ ಹೆಚ್ಚಾಗಿದೆ. ಹೀಗೆ ಬೇಡಿಕೆಗೆ ತಕ್ಕಂತೆ ಸೇವೆ ವಿಸ್ತರಿಸಿಕೊಳ್ಳಲು ಕೆಎಸ್ಆರ್ಟಿಸಿ ಮುಂದಾಗಿದೆ.

