ಬೆಂಗಳೂರು: ಇಂದು ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರ ‘ ಸರ್ಕಾರ ನಿರ್ಲಕ್ಷ್ಯ ವಹಿಸದೆ ರೈತರ ಪರ ನಿಲ್ಲಬೇಕು ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ‘ಕೋರ್ಟ್ನಿಂದ ಆದೇಶ ಹೊರಡಿಸಿದೆ, ಕಾವೇರಿ ಬೋರ್ಡ್ ಮಾಹಿತಿ ನೀಡಿರುವ ಪ್ರಕಾರ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡೋಕೆ ಹೇಳಿದೆ. ಇದರಿಂದ 7.5 ಟಿಎಂಸಿ ನೀರು ಖಾಲಿಯಾಗುತ್ತೆ. ಮೊನ್ನೆ ದಿನ ಶ್ರೀರಂಗಪಟ್ಟಣದಲ್ಲಿ ನೀರು ಖಾಲಿಯಾಗಿರುವುದು ನೋಡಿದ್ದೀವಿ. ತಮಿಳುನಾಡಿಗೆ 1.80 ಸಾವಿರ ಹೆಕ್ಟೇರ್ಗೆ ನೀರು ಹರಿಸಲು ಅನುಮತಿ ಇದೆ. ಆದ್ರೆ, ಸರಿಸುಮಾರು 4 ಲಕ್ಷ ಹೆಕ್ಟೇರ್ ಗೆ ನೀರು ಹರಿಸಲಾಗುತ್ತಿದೆ. ಇದರ ಬಗ್ಗೆ ಯಾರು ಪ್ರಶ್ನೆ ಮಾಡ್ತಾ ಇಲ್ಲ. ಓರ್ವ ಯುವಕನಾಗಿ ಆಗ್ರಹ ಮಾಡ್ತೀನಿ ಸರ್ಕಾರ ರೈತರನ್ನ ಉಳಿಸಬೇಕು ಎಂದರು.
