PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಸೇವೆ ಮಾಡಲು ಹಣ ಮುಖ್ಯವಲ್ಲ [ಇಂದಿಗೆ ಬೇಡ]
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮೈಸೂರು ಗ್ರಾಮಾಂತರ > ಸೇವೆ ಮಾಡಲು ಹಣ ಮುಖ್ಯವಲ್ಲ [ಇಂದಿಗೆ ಬೇಡ]
ಮೈಸೂರು ಗ್ರಾಮಾಂತರ

ಸೇವೆ ಮಾಡಲು ಹಣ ಮುಖ್ಯವಲ್ಲ [ಇಂದಿಗೆ ಬೇಡ]

ಪ್ರತಿನಿಧಿ
Last updated: April 7, 2024 7:54 pm
ಪ್ರತಿನಿಧಿ
Published April 7, 2024
Share
SHARE

*ತಿ.ನರಸೀಪುರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಹೆಚ್.ಹನುಮಂತ ಅಭಿಪ್ರಾಯ

ಪ್ರತಿನಿಧಿ ವರದಿ ತಲಕಾಡು

ಸೇವೆ ಮಾಡಲು ಹಣ ಮುಖ್ಯವಲ್ಲ, ಯಾವುದೇ ಪ್ರತಿ ಫಲಾಪೇಕ್ಷೆ ಬಯಸದೆ ಪ್ರೀತಿ ವಿಶ್ವಾಸದಿಂದ ಸೇವೆ ಮಾಡಲು ಮುಕ್ತ
ಮನಸ್ಸಿರಬೇಕು ಎಂದು ತಿ.ನರಸೀಪುರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಹೆಚ್.ಹನುಮಂತ ತಿಳಿಸಿದರು.

ತಲಕಾಡು ಹೋಬಳಿ ಕುರಬಾಳಹುಂಡಿ ಗ್ರಾಮದಲ್ಲಿ ಶನಿವಾರ, ತಾಲೂಕು ಕಾನೂನು ಸೇವಾ ಸಮಿತಿ ಹಾಗು ಪ್ರಥಮ ದರ್ಜೆ ಕಾಲೇಜು ತಲಕಾಡು ರಾಷ್ಟೀಯ ಸೇವಾ ಶಿಬಿರದ ಸಹಯೋಗದಲ್ಲಿ ಆಯೋಜಿಸಿದ್ದ, ಮೋಟಾರು ವಾಹನ ಕಾಯ್ದೆಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ  ಮಾತನಾಡಿದರು.

- ಜಾಹೀರಾತು -

ರಾಷ್ಟೀಯ ಸೇವಾ ಶಿಬಿರದ ಮೂಲಕ ಕುರಬಾಳಹುಂಡಿ ಗ್ರಾಮದಲ್ಲಿ ಹಮ್ಮಿ ಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರ, ಗ್ರಾಮದ ಸ್ವಚ್ಚತೆ ಹಾಗು ಕೆರೆ ಸ್ವಚ್ಚತೆಯೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಿದ್ದಕ್ಕೆ ಸಾಕ್ಷಿ ಎಂದು ಶಿಬಿರಾರ್ಥಿಗಳ ಪ್ರಶಂಸಿಸಿದರು. ವಿದ್ಯಾರ್ಥಿ ದೆಸೆಯಲ್ಲೇ ಕೈಲಾದ ಸಣ್ಣ ಸಣ್ಣ ಸಮಾಜಮುಖಿ ಸೇವೆ ಸಲ್ಲಿಸುವುದನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಲು ನ್ಯಾಯಾಧೀಶರು ಕರೆ ನೀಡಿದರು.

ಮಹಾನ್ ವ್ಯಕ್ತಿಗಳಾಗಿ ಸಾಧನೆ ಮಾಡಿದವರು ರಾತ್ರೋ ರಾತ್ರಿ ಮಹಾನ್ ವ್ಯಕ್ತಿಗಳಾಗಲಿಲ್ಲ. ಜೀವನದಲ್ಲಿ ಅಪಾರ ಪರಿಶ್ರಮ ಏಳುಬೀಳಿನ ಹಾದಿಯಲ್ಲಿ ಸಾಗಿ ಸಾಧನೆ ಮಾಡಿದವರಾಗಿದ್ದಾರೆ. ಸತತ ಪರಿಶ್ರಮ ತಾಳ್ಮೆ ಸಹನೆಯಿಂದ ಮಾತ್ರ ಮಹಾನ್ ಸಾಧನೆ ಮಾಡಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.ದೇಶದ ಸುರಕ್ಷತೆಗೆ ಕಾನೂನು ಹಾಗೂ ಕಾಯ್ದೆಗಳು ಎಷ್ಟು ಮಹತ್ವದ್ದು ಎಂಬುದನ್ನು ಇವರು ತಿಳಿಸಿದ್ದಲ್ಲದೆ, ಮೋಟಾರು ವಾಹನ ಚಲಾಯಿಸುವಿಕೆಯ ಕುರಿತು ವಿದ್ಯಾರ್ಥಿಗಳಲ್ಲಿ ಇರಬೇಕಾದ ಕಾನೂನು ಅರಿವಿನ ಬಗ್ಗೆ ನ್ಯಾಯಧೀಶರು ಮನದಟ್ಟು ಮಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ವೆಂಕಟೇಶ್ ಕೆ ಎನ್ ರವರು ಭಾಗವಹಿಸಿದ್ದರು. ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮೋಟಾರು ವಾಹನ ಕಾಯ್ದೆಯ ಕುರಿತು ತಿ.ನರಸೀಪುರದ ಹಿರಿಯ ವಕೀಲ ಭುವನೇಶ್ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ನಾಗಣ್ಣ ಎಂ ಎಸ್ ರವರು, ಅಧ್ಯಕ್ಷೀಯ ನುಡಿಗಳಲ್ಲಿ ವಿದ್ಯಾರ್ಥಿಗಳಿಗೆ ಮೋಟಾರು ವಾಹನ ಕಾಯ್ದೆಯ ಅಗತ್ಯತೆ ಹಾಗೂ ಪ್ರಸ್ತುತತೆಯ ಕುರಿತು ವಿವರಿಸಿದರು.

ತಲಕಾಡು ಆರಕ್ಷಕ ಠಾಣೆಯ ಉಪನಿರೀಕ್ಷಕಿ ಉಮಾವತಿ,ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದ ಶಿಬಿರಾಧಿಕಾರಿ ಚೇತನ್ ಜೆ, ಸಹ ಶಿಬಿರಾಧಿಕಾರಿಗಳಾದ ಕೃಷ್ಣಕುಮಾರಿ, ಕಾಲೇಜಿನ ಬೋಧಕರು, ತಿ.ನರಸೀಪುರ ನ್ಯಾಯಾಲಯದ ಸಿಬ್ಬಂದಿ, ತಲಕಾಡಿನ ಪೊಲೀಸ್ ಠಾಣೆಯ ಸಿಬ್ಬಂದಿ, ಕುರಬಾಳನಹುಂಡಿ ಗ್ರಾಮಸ್ಥರು ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

Oplus_0

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಮೈಸೂರು ಗ್ರಾಮಾಂತರ

ಮನೆಯ ಮಹಡಿ ಮೇಲೆ ಮಾಲೀಕನ ಶವ ಪತ್ತೆ

April 22, 2024
ನಂಜನಗೂಡುಮುಖಪುಟಮೈಸೂರು ಗ್ರಾಮಾಂತರ

ನಂಜನಗೂಡು : ಹಾಲಿಗೆ ನೀರು & ಪೌಡರ್ ಮಿಕ್ಸ್..! ಉತ್ಪಾದಕ ಸಂಘದ ಸದಸ್ಯರಿಂದಲೇ ಅಕ್ರಮ..

July 31, 2025
ಮುಖಪುಟಮೈಸೂರು ಗ್ರಾಮಾಂತರ

ಮೈಸೂರು ಜಿಲ್ಲೆಯಲ್ಲಿ ಭೀಕರ ಅಪಘಾತ, ಸ್ಥಳದಲ್ಲೇ ಇಬ್ಬರು ಸಾವು ..!

May 28, 2025
ಮುಖಪುಟಮೈಸೂರು ಗ್ರಾಮಾಂತರ

ಶ್ರೀರಂಗಪಟ್ಟಣದಲ್ಲಿ ಕೋಳಿ ಜೂಜಾಟದ ಮೇಲೆ ಪೊಲೀಸರ ದಾಳಿ; ಮೂವರ ಬಂಧನ, ವಾಹನಗಳು ವಶಕ್ಕೆ

August 26, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?