ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವ ವಿಚಾರ ‘ಮಳೆ ಕಡಿಮೆ ಆದಾಗ ಕಾವೇರಿ ನದಿ ನೀರು ವಿವಾದ ಸದ್ದು ಮಾಡುತ್ತೆ ಎಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದ್ದಾರೆ. ಮಳೆಗಾಲ ಕ್ಷೀಣಿಸಿದಾಗ ನೀರಿಗೆ ಒತ್ತಡ ಇದ್ದು, ಇದು ತಮಿಳುನಾಡಿನ ವಸ್ತುಸ್ಥಿತಿಗೆ ನಾಚಿಸುವಂತಿದೆ. ಕರ್ನಾಟಕದ ನಿರ್ಧಾರವನ್ನ ನಾನು ಸಮರ್ಥನೆ ಮಾಡ್ತೇನೆ. ನಾನು ಸಿಎಂ ಆಗಿದ್ದಾಗಲೂ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಅಟಲ್ ಅವರು ಉಭಯ ಸಿಎಂಗಳ ಜೊತೆ ಸಂಧಾನ ಮಾಡಲು ಪ್ರಯತ್ನಿಸಿದರು. ಆದ್ರೆ, ಸಫಲ ಆಗಲಿಲ್ಲ. ಅಂತಿಮವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಬೇಕಾಯ್ತು ಎಂದರು.
