PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಪ್ರಕೃತಿಯಲ್ಲಿ ಮನುಷ್ಯನೂ ಒಬ್ಬ ಜೀವಿಯೇ ಹೊರತು ಪ್ರತ್ಯೇಕನಲ್ಲ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮೈಸೂರು ಗ್ರಾಮಾಂತರ > ಪ್ರಕೃತಿಯಲ್ಲಿ ಮನುಷ್ಯನೂ ಒಬ್ಬ ಜೀವಿಯೇ ಹೊರತು ಪ್ರತ್ಯೇಕನಲ್ಲ
ಮೈಸೂರು ಗ್ರಾಮಾಂತರ

ಪ್ರಕೃತಿಯಲ್ಲಿ ಮನುಷ್ಯನೂ ಒಬ್ಬ ಜೀವಿಯೇ ಹೊರತು ಪ್ರತ್ಯೇಕನಲ್ಲ

ಪ್ರತಿನಿಧಿ
Last updated: April 19, 2024 5:53 pm
ಪ್ರತಿನಿಧಿ
Published April 18, 2024
Share
SHARE

ಪ್ರತಿನಿಧಿ ವರದಿ ಹುಣಸೂರು
ಮನುಷ್ಯ ಪ್ರಕೃತಿಯಲ್ಲಿನ ಒಂದು ಜೀವಿಯೇ ಹೊರತು ಪ್ರತ್ಯೇಕನಲ್ಲ ಎನ್ನುವುದನ್ನು ನಾವೆಲ್ಲರೂ ಅರಿತು ಬಾಳಬೇಕಿದೆ ಎಂದು ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಗುರುವಾರ ಆಯೋಜಿಸಿದ್ದ ಪುಸ್ತಕ ಓದು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದರು.

ಇರೋದು ಒಂದೇ ಭೂಮಿ. ಎಲ್ಲ ಜೀವಿಗಳು ಇದ್ದರೆ ಮಾತ್ರ ಮನುಷ್ಯನು ಇರುತ್ತಾನೆ. ಪಕ್ಷಿಗಳು ಹೀಗೆ ಕಣ್ಮರೆಯಾಗುತ್ತಿದ್ದರೆ ಕೊನೆಗೆ ಮನುಷ್ಯನೂ ಇರಲಾರ. ಇಡೀ ವಿಶ್ವದಲ್ಲಿ ನಾವು ಅಣುಮಾತ್ರ ಅಷ್ಟೇ. ಜೀವಿಗಳು ಭೂ ಮಂಡಲದಲ್ಲಿ ಹುಟ್ಟು ಪಡೆದು ಶತಮಾನಗಳು ಕಳೆದಿದ್ದು, ಆದಿ ಅಂತ್ಯದಲ್ಲಿ ಹಲವು ಬದಲಾವಣೆ ಎದುರಾಗಿದೆ. ಆದಿಯಲ್ಲಿ ಪರಿಸರ ಸಮತೋಲನದಿಂದ ಪ್ರಾಕೃತಿವಾಗಿ ಎಲ್ಲವೂ ಸರಿಯಾಗಿ ನಡೆಯುತ್ತಿತ್ತು, ಪರಿಸರ ಕಲುಷಿಗೊಂಡು ಪ್ತಕೃತಿ ವಿಕೋಪ ಅಲ್ಲಲ್ಲಿ ಸಂಭವಿಸುತ್ತಿದೆ ಎಂದರು.

ಮನುಷ್ಯ ಸೃಷ್ಟಿಸಿರುವ ಅವಾಂತರಗಳಿಗೆ ನಿಮ್ಮ ಮನೆಬಾಗಿಲಿನಲ್ಲೇ ಹಾದು ಹೋಗುವ ಲಕ್ಷ್ಮಣ ತೀರ್ಥವೇ ಜ್ವಲಂತ ಉದಾಹರಣೆಯಾಗಿದೆ. ಸಾವಿರಾರು ಜಲಚರಿಗಳಿಗೆ ಮತ್ತು ರೈತಾಪಿವರ್ಗಕ್ಕೆ ಬದುಕು ನೀಡಿದ ಲಕ್ಷ್ಮಣ ತೀರ್ಥ ಇಂದು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಲಕ್ಷ್ಮಣ ತೀರ್ಥ ನದಿ ಉಳಿಸಿ ಅಭಿಯಾನ ಮತ್ತೆ ಆಗಬೇಕಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನವೂ ಇಲ್ಲೇ ಇದ್ದು, ಅರಣ್ಯದಂಚಿನ ಪ್ರದೇಶದಲ್ಲಿ ವನ್ಯಪ್ರಾಣಿ ಮತ್ತು ಮಾನವ ಸಂಘರ್ಷ ನಿತ್ಯ ನಡೆಯುತ್ತಿದ್ದು, ಇದಕ್ಕೆ ಹಲವು ಪರಿಹಾರ ಕಂಡುಕೊಳ್ಳಲು ಪ್ರಯತ್ನ, ಪ್ರಯೋಗ ನಡೆದಿದೆ. ನಾವು ಬದುಕಬೇಕಾದರೆ ಇತರೆ ಜೀವಿಗಳು, ಪಶುಪಕ್ಷಿಗಳು ಇರಬೇಕು. ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ. ಲಕ್ಷ್ಮಣ ತೀರ್ಥ, ಕಾವೇರಿ ಅಂತ ನೋಡದೇ ನೀರಿನ ಹರಿವನ್ನು ಉಳಿಸಿಕೊಳ್ಳುವ ಕಡೆ ಗಮನಹರಿಸಬೇಕು. ಯುವ ಸಮೂಹ ಇತ್ತ ಗಂಭೀರ ಚಿಂತನೆ ನಡೆಸಿ ಭವಿಷ್ಯದ ಕರಾಳತೆಯನ್ನು ಅರಿತು ಪರಿಸರ ಉಳಿಸುವತ್ತ ಗಮನ ಹರಿಸಬೇಕು ಎಂದರು.

- ಜಾಹೀರಾತು -

ಪ್ರಾಸ್ತಾವಿಕ ನುಡಿಗಳನ್ನಾಡಿದ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಗ್ರಂಥಪಾಲಕ ಡಾ. ಎನ್.ಕರುಣಾಕರ್,  ಕೃಪಾಕರ ಸೇನಾನಿ ಇಬ್ಬರೂ ಶ್ರೇಷ್ಠ ವನ್ಯಜೀವಿ ಸಾಕ್ಷ್ಯಚಿತ್ರ ನಿರ್ಮಾಪಕರು ಹಾಗೂ ಕಾಡಿನಲ್ಲಿ ಬದುಕುವ ವಿಶೇಷವಾದ ಜೀವಿ ಆಗಿರುವ ಸೀಳುನಾಯಿ ಇವರ ಪ್ರಧಾನವಾದ ಆಸಕ್ತ ಕಾರ್ಯಕ್ಷೇತ್ರ. ಇವರ ದಿ ಪ್ಯಾಕ್ ಎಂಬ ಸಾಕ್ಷ್ಯ ಚಿತ್ರ ೨೦೧೦ರಲ್ಲಿ ಇಂಗ್ಲೆಂಡಿನ ಪ್ರಸಿದ್ಧ ವೈಲ್ಡ್ ಸ್ಕೀನ್ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಪ್ರತಿಷ್ಠಿತ ಗ್ರೀನ್ ಆಸ್ಕರ್ ಪ್ರಶಸ್ತಿಯನ್ನು ಪಡೆದಿದೆ. ಇವರ ಸಮಾಜಮುಖಿ ಸಾಧನೆಗಾಗಿ ೨೦೦೬ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ ಎಂದು ಪರಿಚಯಿಸಿದರು.

ಮತ್ತೋರ್ವ ವನ್ಯಜೀವಿ ಛಾಯಾಗ್ರಾಹಕ ಸೇನಾನಿ ಮಾತನಾಡಿದರು. ಪ್ರಾಂಶುಪಾಲ ಪುಟ್ಟಶೆಟ್ಟಿ, ಸಹಾಯಕ ಪ್ರಾಧ್ಯಾಪಕ ಡಾ.ಕೆ.ಪಿ.ಪ್ರಸನ್ನ, ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.

೧೮ಊUಓ೨: ಹುಣಸೂರು ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮವನ್ನು ಖ್ಯಾತ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ ಸೇನಾನಿ ಉದ್ಘಾಟಿಸಿದರು. ಡಾ.ಎನ್.ಕರುಣಾಕರ್, ಡಾ.ಕೆ.ಪಿ.ಪ್ರಸನ್ನ ಇತರರಿದ್ದಾರೆ.

 

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಮೈಸೂರು ಗ್ರಾಮಾಂತರ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ಡಬಲ್ ಗ್ಯಾರಂಟಿ

April 17, 2024
ಮೈಸೂರು ಗ್ರಾಮಾಂತರಮೈಸೂರು ನಗರ

ನಂಜನಗೂಡು: ಆಹಾರ ಅರಸಿ ಬಂದ ಮೂರು ಕಾಡಾನೆಗಳು, ರೈತರ ಬೆಳೆ ನಾಶ, ಆತಂಕ

January 13, 2024
ಮೈಸೂರು ಗ್ರಾಮಾಂತರ

ಶ್ರೀ ಪಟ್ಟಲದಮ್ಮ ದೇವಿಯ ರಥೋತ್ಸವ

March 29, 2024
ಮೈಸೂರು ಗ್ರಾಮಾಂತರ

ಜಮೀನಿನಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆ !

April 5, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?