PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸೇರಿ ಆರು ಮಂದಿ ವಿಧಿವಸ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮುಖಪುಟ > ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸೇರಿ ಆರು ಮಂದಿ ವಿಧಿವಸ
ಮುಖಪುಟಸಮಗ್ರ

ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸೇರಿ ಆರು ಮಂದಿ ವಿಧಿವಸ

Prathinidhi News
Last updated: May 26, 2024 4:28 pm
Prathinidhi News
Published May 26, 2024
Share
SHARE

ದೇವನಹಳ್ಳಿ: ಹಾಸನ ತಾಲ್ಲೂಕಿನ ಈಚಲಹಳ್ಳಿ ಬಳಿಯ ರಾಸ್ಟ್ರೀಯ ಹೆದ್ದಾರಿ 75ರಲ್ಲಿ ಇಂದು ಮುಂಜಾನೆ 5-50ರ ಸುಮಾರಿಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸೇರಿ ಆರು ಮಂದಿ ಕೊನೆಯುಸಿರೆಳೆದಿದ್ದಾರೆ. ಮಂಗಳೂರಿನಿಂದ ಬೆಂಗಳೂರಿನ ಕಡೆಗೆ ತೆರಳುತ್ತಿದ್ದ KA53C1419 ನಂಬರಿನ ಇಟಿಯೋಸ್ ಕಾರು ಹಾಗು MH46BM3875 ನಂಬರಿನ ಟ್ರಕ್ ನಡುವೆ ಮುಖಾಮುಕಿ ಡಿಕ್ಕಿಯಾಗಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕಾರಹಳ್ಳಿಯ ನಾರಾಯಣಪ್ಪ ಹಾಗು ಸುನಂದಾ ದಂಪತಿ ಹಾಗೆ ಹೊಸಕೋಟೆ ತಾಲ್ಲೂಕಿನ ರವಿಕುಮಾರ್ ಹಾಗು ನೇತ್ರಾವತಿ ದಂಪತಿ ಹಾಗು ಅವರ ಪುತ್ರ ನಾಲ್ಕು ವರ್ಷದ ಚೇತನ್ ಹಾಗು ಕಾರಿನ ಚಾಲಕ ರಾಕೇಶ್ ಮೃತಪಟ್ಟಿದ್ದಾರೆ. ಒಂದೆಡೆ ಗಂಡ ಹೆಂಡತಿ ಮಗು ಸಾವಿಗೀಡಾಗಿದ್ದರೆ, ಇನ್ನೊಂದಡೆ ಗಂಡ ಹೆಂಡತಿ ಸಾವಿನಿಂದ ಅವರ ಮೂರು ಮಕ್ಕಳು ಅನಾಥವಾಗಿವೆ.

Contents
ಅನಾಥವಾದ ಮೂರು ಮಕ್ಕಳುಹೇಗಾಯ್ತು ದುರಂತ?ಭೀಕರತೆ ವಿವರಿಸಿದ ಲಾರಿ ಚಾಲಕ

ಅನಾಥವಾದ ಮೂರು ಮಕ್ಕಳು

ಹಾಸನದಲ್ಲಿ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಇದೀಗ ಮೂವರು ಮಕ್ಕಳು ಅನಾಥವಾಗಿವೆ. ಪಾರ್ಶ್ವವಾಯುನಿಂದ ಬಳಲುತ್ತಿದ್ದ, ಬಳಿಕ ಕೆಲವರ ಸಲಗೆ ಮೇರೆಗೆ ನಾರಾಯಣಪ್ಪನನ್ನು ಪತ್ನಿ ಸುನಂದಾ, ಚಿಕಿತ್ಸೆಗೆಂದು ಕಾರವಾರಕ್ಕೆ ಕರೆದುಕೊಂಡು ಹೋಗಿದ್ದರು. ನಾರಾಯಣಪ್ಪ ಜೊತೆ ಪತ್ನಿ, ಪತ್ನಿ ತಂಗಿ, ಗಂಡ, ಮಕ್ಕಳು ತೆರಳಿದ್ದರು. ಆದ್ರೆ, ಸುನಂದಾ ಮತ್ತು ನಾರಾಯಣಪ್ಪ ತಮ್ಮಿಬ್ಬರ ಮೂವರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗಿದ್ದರು. ಆದ್ರೆ, ದುರ್ವೈವ ಚಿಕಿತ್ಸೆ ಪಡೆದುಕೊಂಡು ವಾಪಸ್ ಊರಿಗೆ ಬರುತ್ತಿದ್ದ ವೇಳೆ ಅಪಘಾತದಲ್ಲಿ ಸುನಂದಾ ಮತ್ತು ನಾರಾಯಣಪ್ಪ ಸಾವನ್ನಪ್ಪಿದ್ದಾರೆ. ಈಗ ತಂದೆ ತಾಯಿಯನ್ನ ಕಳೆದುಕೊಂಡು ಮಕ್ಕಳು ತಬ್ಬಲಿಯಾಗಿವೆ.

ಹೇಗಾಯ್ತು ದುರಂತ?

ನಾರಾಯಣಪ್ಪನಿಗೆ ಪಾಶ್ವವಾಯುವಾಗಿದ್ದರಿಂದ ಚಿಕಿತ್ಸೆಗೆಂದು ಕುಟುಂಬ ಸಮೇತವಾಗಿ ಮಂಗಳೂರಿಗೆ ತೆರಳಿದ್ದ ಐವರು ಚಿಕಿತ್ಸೆ ಬಳಿಕ ಕಾರವಾರದ ಕಡಲ ತಡಿಯಲ್ಲಿ ಮಗುವಿನ ಜೊತೆಗೆ ಸುತ್ತಾಡಿದ್ದಾರೆ. ಸಂಜೆಯಾಗುತ್ತಲೆ ವಾಪಸ್ ಊರಿನ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ದಾರಿ ಮಧ್ಯ ಹಾಸನದ ಸಮೀಪ ಕಾರು ಚಾಲಕ ನಿದ್ರೆ ಮಂಪರಿಯಲ್ಲಿ ಕಾರು ನಿಯಂತ್ರಣ ಕಳೆದುಕೊಂಡಿದೆ. ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಡಿವೈಡರ್ ಜಂಪ್ ಮಾಡಿದ ಕಾರು ಎದುರಿನಿಂದ ಬರ್ತಿದ್ದ ಟ್ರಕ್ ಗೆ ರಭಸವಾಗಿ ಡಿಕ್ಕಿಯಾಗಿದೆ. ಡಿಕ್ಕಿಯಾಗುತ್ತಲೆ ಕಾರಿಗಂಟಿಕೊಂಡಂತೆ ಸಿಲುಕಿದ ಕಾರನ್ನ ಟ್ರಕ್ ಸುಮಾರು ಐವತ್ತು ಮೀಟರ್ ಎಳೆದೊಯ್ದಿದ್ದು ಕಾರಿನೊಳಗಿದ್ದ ಆರು ಜನರು ಕ್ಷಣಮಾತ್ರದಲ್ಲಿ ಉಸಿರು ಚೆಲ್ಲಿದ್ದಾರೆ, ಸ್ಥಳಕ್ಕೆ ಹಾಸನ ಎಸ್ಪಿ ಮೊಹಮದ್ ಸುಜೇತಾ, ಎಎಸ್ಪಿ ವೆಂಕಟೇಶ್ ನಾಯ್ಡು ಸೇರಿ ಹಿರಿಯ ಅದಿಕಾರಿಗಳು ಬೇಟಿ ನೀಡಿದ್ದು, ಅಪಘಾತದ ಬೀಕರತೆಗೆ ಜನರೇ ಬೆಚ್ಚಿಬಿದ್ದಿದ್ದಾರೆ.

ಭೀಕರತೆ ವಿವರಿಸಿದ ಲಾರಿ ಚಾಲಕ

ಅಪಘಾತದ ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಸುಮಾರು ಒಂದು ಗಂಟೆ ಪ್ರಾಯಾಸಪಟ್ಟು ಮೃತದೇಹಗಳನ್ನು ಜೆಸಿಬಿ ನೆರವಿನೊಂದಿಗೆ ಕಾರಿನಿಂದ ಹೊರ ತೆಗೆದು ಹಾಸನದ ಜಿಲ್ಲಾಸ್ಪತ್ರೆಗೆ ಸ್ಥಳಾಂತರಮಾಡಿದ್ಧಾರೆ. ಬೆಂಗಳೂರಿನಿಂದ ಮಂಗಳೂರಿನತ್ತ ಹೊರಟಿದ್ದ ಕೊರಿಯರ್ ಟ್ರಕ್ ಚಾಲಕ ತನ್ನಷ್ಟಕ್ಕೆ ತಾನು ಚಾಲನೆ ಮಾಡಿಕೊಂಡು ತೆರಳುತ್ತಿದ್ದ ವೇಳೆಯಲ್ಲಿ ಏಕಾಏಕಿ ಜಿಗಿದು ಬಂದ ಕಾರು ನೇರವಾಗಿ ಲಾರಿಗಪ್ಪಳಿಸಿದೆ. ಏನಾಗ್ತಿದೆ ಎಂದು ಗಮನಿಸುವಷ್ಟರಲ್ಲಿ ಘೋರ ದುರಂತ ನಡೆದುಹೋಗಿದೆ. ಘಟನೆಯಿಂದ ಶಾಕ್ ಗೆ ಒಳಗಾಗಿರುವ ಲಾರಿ ಚಾಲಕ ಆತಂಕದಿಂದಲೇ ಘಟನೆಯನ್ನ ವಿವರಿಸಿದ್ದು, ಅಪಘಾತ ನಡೆದ ಕೂಡಲೆ ಸಾವರಿಸಿಕೊಂಡು ಸ್ಲಲ್ಪದೂರದಲ್ಲೇ ಲಾರಿ ನಿಲ್ಲಿಸಿದೆ, ಕೆಳಗಿಳಿದು ಕಾರಿನಲ್ಲಿದ್ದವರ ಬದುಕಿಸೊ ಪ್ರಯತ್ನ ಮಾಡಿದ್ರು ಅದು ಪ್ರಯೋಜನವಾಗಲಿಲ್ಲ, ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಮಾಹಿತಿ ನೀಡಿದ್ದಾರೆ

- ಜಾಹೀರಾತು -

ಒಟ್ಟಿನಲ್ಲಿ ಭಾವನ ಅನಾರೋಗ್ಯ ಎಂದು ಪತಿ ಹಾಗು ಮಗು ಮತ್ತು ಅಕ್ಕನ ಜೊತೆಗೆ ಕಾರವಾರಕ್ಕೆ ತೆರಳಿದ್ದ ಮಹಿಳೆ ಕುಟುಂಬ ದುರಂತ ಅಂತ್ಯಕಂಡಿದೆ. ಒಂದೆಡೆ ಗಂಡ ಹೆಂಡತಿ ಮಗು ಸಾವಿಗೀಡಾಗಿದ್ದರೆ, ಇನ್ನೊಂದಡೆ ಗಂಡ ಹೆಂಡತಿ ಸಾವಿನಿಂದ ಅವರ ಮೂರು ಮಕ್ಕಳು ಅನಾಥವಾಗಿವೆ. ಒಂದೇ ದಿನ ಒಂದೇ ಕುಟುಂಬದ ಐವರ ಸಾವು ಸಂಬಂದಿಕರ ಆಕ್ರಂಧನ ಮುಗಿಲುಮುಟ್ಟುವಂತೆ ಮಾಡಿದ್ದು ನಿದ್ರೆ ಮಂಪರಿನಲ್ಲಿ ಕಾರು ಚಾಲಕ ಮಾಡಿದ ಸಣ್ಣ ಎಡವಟ್ಟು ಆರು ಜನರ ಜೀವ ತೆಗೆದಿದೆ.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಮುಖಪುಟಮೈಸೂರು ನಗರಸನ್ನಿಧಾನ

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ತಾಯಿಗೆ ವಿಶೇಷ ಪೂಜೆ

August 8, 2025
ಮಂಗಳೂರುಮುಖಪುಟ

ಅಡ್ಯಾರ್ ಬಳಿ ಐಸ್‌ಕ್ರೀಂ ಘಟಕದ ಎಳನೀರು ಸೇವಿಸಿದ ಹತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

April 11, 2024
ಮುಖಪುಟಮುಡಾ ಹಗರಣಮೈಸೂರು ನಗರರಾಜಕೀಯ

ಮುಡಾ ಹಗರಣ: ಮಧ್ಯವರ್ತಿಯೊಬ್ಬ ಲಕ್ಷಾಂತರ ರೂ ಹಣ ಎಣಿಸುತ್ತಿರುವ ವಿಡಿಯೋ ರಿಲೀಸ್‌

October 28, 2024
ಮುಖಪುಟಮೈಸೂರು ಗ್ರಾಮಾಂತರರಾಜಕೀಯ

ಚಿಕ್ಕಯ್ಯನ ಛತ್ರ ಹೋಬಳಿಯ ರೈತರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಡಾಕ್ಟರ್ ಯತೀಂದ್ರ ಸಿದ್ರಾಮಯ್ಯನವರಲ್ಲಿ ರೈತರ ಮನವಿ

October 10, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?